ಮಂಗಳೂರು: ಮುಳುಗಡೆಯಾಗುತ್ತಿದ್ದ ದೋಣಿಯಿಂದ 7 ಮೀನುಗಾರ ರಕ್ಷಣೆ
ಮಂಗಳೂರು, ಜೂನ್ 7: ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿದ್ದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಈ ಮೂಲಕ ಅಪಾಯಕ್ಕೆ ಸಿಲುಕಿದ್ದ 7 ಜನರ ಜೀವ ಉಳಿದಿದೆ.
ಮಂಗಳೂರಿನ ಸಮುದ್ರ ದಡದಿಂದ 3 ನಾಟಿಕಲ್ ಮೈಲಿ ದೂರದಲ್ಲಿ ಮಹೇಶ್ವರಿ ಎಂಬ ದೋಣಿ ಮುಳಗಡೆಯಾಗುತ್ತಿತ್ತು. ಇದರ ಬಗ್ಗೆ ಸುಮಾರು 6.25 ನಿಮಿಷಕ್ಕೆ ಎನ್ಎಂಪಿಟಿ ಯಿಂದ ಮಾಹಿತಿ ಪಡೆದ ಕರಾವಳಿ ಕೋಸ್ಟ್ ಗೌರ್ಡ್ ತಕ್ಷಣ ರಾಜ್ದೂತ್ ಹಡಗಿನಲ್ಲಿ ತೆರಳಿ 1.50ಕ್ಕೆ ಏಳು ಮಂದಿ ಮೀನುಗಾರರನ್ನು ರಕ್ಷಿಸಿದೆ.[ಮಂಗಳೂರು: ಇನ್ಶೂರೆನ್ಸ್ ಹಣಕ್ಕಾಗಿ ಬಾರ್ಜ್ ಮುಳುಗಿಸುವ ಸಂಚು?]

ಮೀನುಗಾರಿಕೆ ಬೋಟ್ ಮಹೇಶ್ವರಿ, 27 ಅಡಿ ಗಿಲ್ನೆಟ್ ದೋಣಿಯಾಗಿದ್ದು , ಓಲ್ಡ್ ಪೋರ್ಟ್ ಮಂಗಳೂರು ನಿಂದ ಮಲ್ಪೆ ಹಾರ್ಬರ್ ಕಡೆಗೆ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಕಮಾಂಡರ್ ತಿಳಿಸಿದ್ದಾರೆ.[ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ]

ಇನ್ನು ಇತೀಚೆಗಷ್ಟೇ ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಚೀನಾ ಮೂಲದ ಕಂಪೆನಿಯ ಬಾರ್ಜ್ ದುರಂಥಕ್ಕೀಡಾಗಿತ್ತು. ಬಾರ್ಜ್ ಯಲ್ಲಿ ಇದ್ದ 27 ನೌಕರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.












Click it and Unblock the Notifications