2014ರ ಕರಾವಳಿ ಉತ್ಸವಕ್ಕೆ ಚಾಲನೆ
ಮಂಗಳೂರು, ಡಿ. 24 : ದಕ್ಷಿಣ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ, ಸಾಹಿತ್ಯಗಳನ್ನು ರಾಜ್ಯಕ್ಕೆ ಪರಿಚಯಿಸುವ ಕರಾವಳಿ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಡಿ.23ರಂದು ಉತ್ಸವ ಆರಂಭಗೊಂಡಿದ್ದು, ಜನವರಿ 1ರ ತನಕ ನಡೆಯಲಿದೆ.
ನಗರದ
ಕರಾವಳಿ
ಉತ್ಸವ
ಮೈದಾನದಲ್ಲಿ
ನಿಟ್ಟೆ
ವಿಶ್ವವಿದ್ಯಾಲಯದ
ಕುಲಪತಿ
ಎನ್.
ವಿನಯ
ಹೆಗ್ಡೆ
ಅವರು
2014ರ
ಕರಾವಳಿ
ಉತ್ಸವಕ್ಕೆ
ಮಂಗಳವಾರ
ಚಾಲನೆ
ನೀಡಿದರು.
ದಕ್ಷಿಣ
ಕನ್ನಡ
ಜಿಲ್ಲೆ
ಶಿಕ್ಷಣ,
ವೈದ್ಯಕೀಯ
ಹೀಗೆ
ನಾನಾ
ಕ್ಷೇತ್ರದಲ್ಲಿ
ವಿಶಿಷ್ಟ
ಸಾಧನೆ
ಮಾಡಿದ
ಮಾದರಿ
ಜಿಲ್ಲೆಯಾಗಿದೆ
ಎಂದು
ವಿನಯ
ಹೆಗ್ಡೆ
ಬಣ್ಣಿಸಿದರು.
ಕರಾವಳಿ ಉತ್ಸವದ ವಸ್ತುಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ, ಕಂಬಳಗಳಂತಹ ವೈಶಿಷ್ಟ್ಯಗಳನ್ನು ರಾಜ್ಯಕ್ಕೆ ತೋರಿಸಲು ಉತ್ಸವ ಪೂರಕವಾಗಿದೆ ಎಂದರು. [ಡಿ.25ರ ನಂತರ ಶಿರಾಡಿ ಘಾಟ್ ಬಂದ್]
ಕರಾವಳಿ ಉತ್ಸವವನ್ನು ಅರ್ಥಪೂರ್ಣವಾಗಿ ಮಾಡಬೇಕು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರದಿಂದ 50ಲಕ್ಷ ರೂ.ಗಳ ಅನುದಾನ ಒದಗಿಸಲಾಗಿದೆ. ಮನುಷ್ಯ ಮನುಷ್ಯನ ನಡುವೆ ನಂಬಿಕೆ, ಪ್ರೀತಿ ಹುಟ್ಟಬೇಕು. ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂದು ಸಚಿವರು ಹೇಳಿದರು. [ಅಮೆರಿಕಕ್ಕೆ ಹೊರಟ ಮಂಗಳೂರಿನ ಯುವ ವಿಜ್ಞಾನಿಗಳು]
ಆರೋಗ್ಯ ಸಚಿವ ಯು.ಟಿ. ಖಾದರ್, ಕ್ರೀಡಾ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇಂದು ಲೇಸರ್ ಶೋ : ಡಿ. 24ರಂದು ಪಣಂಬೂರು ಬೀಚ್ನಲ್ಲಿ ಕರಾವಳಿ ಉತ್ಸವದ ಪ್ರಯುಕ್ತ ಲೇಜರ್ ಶೋ ಹಮ್ಮಿಕೊಳ್ಳಲಾಗಿದೆ. ಬೀಚ್ ಉತ್ಸವ ಕಾರ್ಯಕ್ರಮದ ಉದ್ಘಾಟನೆ ಬಳಿಕ ಸಂಜೆ 7 ಗಂಟೆಗೆ ಲೇಸರ್ ಶೋ ಕಾರ್ಯಕ್ರಮವಿದೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]