ಬಿಎಸ್ ವೈ ಅಭಿಮಾನಿಗಳಿಂದ ರಾಜ್ಯಾದ್ಯಂತ ವಿಜಯೋತ್ಸವ ಆಚರಣೆ
ಮಂಡ್ಯ, ಮೇ.17 : ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಗುರುವಾರ ಬೆಳಗ್ಗೆ 9 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜ್ಯದೆಲ್ಲೆಡೆ ಅವರ ಅಭಿಮಾನಿಗಳ ಸಂಭ್ರಮ ಮುಟ್ಟಿದೆ.
24ನೇ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ಸವಾಲುಗಳು
ಯಡಿಯೂರಪ್ಪ ಅವರ ಸ್ವಗ್ರಾಮ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಗ್ರಾಮದೇವತೆ ಗೋಗಾಲಮ್ಮ ತಾಯಿಗೆ ಅಭಿಮಾನಿಗಳು ಉರುಳು ಸೇವೆ ಮಾಡಲು ನಿರ್ಧರಿಸಿದ್ದಾರೆ.
ಇನ್ನು
ದಾವಣಗೆರೆ
ಜಿಲ್ಲೆ,
ಚನ್ನಗಿರಿಯಲ್ಲಿ
ಮುಖ್ಯಮಂತ್ರಿಯಾಗಿ
ಯಡಿಯೂರಪ್ಪ
ಪ್ರಮಾಣ
ವಚನ
ಸ್ವೀಕರಿಸಿದ
ಹಿನ್ನೆಲೆಯಲ್ಲಿ
ಸಂಭ್ರಮಾಚರಣೆ
ಮಾಡಲಾಯಿತು.
ಪ್ರಮಾಣ
ವಚನ
ಸ್ವೀಕಾರ
ಸಮಯದಲ್ಲಿ
ಚನ್ನಗಿರಿ
ಪಟ್ಟಣದ
ಐಬಿ
ವೃತ್ತದಲ್ಲಿ
ಪಟಾಕಿ
ಸಿಡಿಸಿ,
ಸಿಹಿ
ಹಂಚಲಾಯಿತು.
ಚಾಮರಾಜನಗರದಲ್ಲೂ ಅಭಿಮಾನಿಗಳು ವಿಜಯೋತ್ಸವ ಆಚರಣೆ ಮಾಡಿದರು.
karnataka election results 2018 karnataka assembly elections 2018 bjp mandya district news ಕರ್ನಾಟಕ ವಿಧಾನಸಭೆ ಚುನಾವಣೆ 2018 ಬಿಜೆಪಿ ಮಂಡ್ಯ ಜಿಲ್ಲಾಸುದ್ದಿ yediyurappa
English summary
Karnataka Election Results 2018: As Yeddyurappa was sworn in as chief minister, his fans have been thrilled across the state. Fans celebrate celebrations all over state
Story first published: Thursday, May 17, 2018, 11:09 [IST]