ಮಂಡ್ಯ: ಅಪ್ಪ-ಅಮ್ಮನ ಪಾದ ಪೂಜೆ ಮಾಡಿ ಧನ್ಯರಾದ ವಿದ್ಯಾರ್ಥಿಗಳು
ಮಂಡ್ಯ, ಜೂನ್ 30: ಹಿರಿಯರನ್ನು ಗೌರವಿಸುವ ಸಂಪ್ರದಾಯ ದೂರವಾಗುತ್ತಿದ್ದು, ಇದರ ಅರಿವು ಮೂಡಿಸುವ ಸಲುವಾಗಿ ಮಂಡ್ಯದ ಸುಭಾಷ್ ನಗರದ ಚಿನ್ಮಯ ಮಿಷನ್ ರಾಮಮಂದಿರದಲ್ಲಿ ಮಾತೃ-ಪಿತೃ ಪೂಜಾ ಸಮಾರಂಭ ನಡೆಸುವ ಮೂಲಕ ಮಾತೃ-ಪಿತೃರನ್ನು ಪೂಜಿಸುವ ಕಾರ್ಯಕ್ಕೆ ನಾಂದಿ ಹಾಡಲಾಯಿತು.
ಚಿನ್ಮಯ ವಿದ್ಯಾಲಯವು ಪ್ರತಿ ವರ್ಷ ಮಾತೃ-ಪಿತೃ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಹಿರಿಯರ ಬಗ್ಗೆ ಭಕ್ತಿ-ಗೌರವ ಮೂಡಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದು. ಆ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ಭಕ್ತಿ, ವಿಧೇಯತೆ, ಸೇವೆ ಮೊದಲಾದವುಗಳನ್ನು ಪಾಠದೊಂದಿಗೆ ಕಲಿಸುವ ಕಾರ್ಯದಲ್ಲಿ ನಿರತವಾಗಿದೆ.
ಮಂಡ್ಯದಲ್ಲಿ ಮುದ್ದೆ ಉಣ್ಣೊ ಸ್ಪರ್ಧೆ, ಮುದ್ದೆ ತಿನ್ನಿ ಸಿನಿಮಾ ಸ್ಟಾರ್ ಆಗಿ!
ಈ ಬಾರಿ ಕಾರ್ಯಕ್ರಮದಲ್ಲಿ 1200 ವಿದ್ಯಾರ್ಥಿಗಳು ಮತ್ತು 2000ಕ್ಕೂ ಹೆಚ್ಚು ಪೋಷಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜತೆಗೆ ಪೂಜಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಂದೆ- ತಾಯಿಯರನ್ನು ಕಾಲು ತೊಳೆದು ಪೂಜಿಸಿ ಭಾವಪರವಶರಾಗಿದ್ದು ಕಂಡು ಬಂತು.
ಕಾರ್ಯಕ್ರಮದ ಕುರಿತು ಶಾಲೆಯ ಮುಖ್ಯ ಶಿಕ್ಷಕ ಜೆ.ವಿಶ್ವನಾಥ್ ಮಾತನಾಡಿ ಇಂದು ಮಕ್ಕಳಲ್ಲಿ ನೈತಿಕ ಮೌಲ್ಯ ಕುಸಿಯುತ್ತಿರುವುದು ಗಮನಾರ್ಹ ಸಂಗತಿಯಾಗಿದ್ದು, ಈ ನಿಟ್ಟಿನಿಲ್ಲಿ ವಿದ್ಯಾರ್ಥಿಗಳಿಗೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಲು ಮಾತೃ-ಪಿತೃ ಪೂಜಾ ಕಾರ್ಯಕ್ರಮದ ಮೂಲಕ ಒಂದು ವೇದಿಕೆಯಾಗಿದೆ ನಿರ್ಮಿಸಲಾಗಿದೆ ಎಂದರು.
106 ಅಡಿಗೆ ತಲುಪಿದ ಕೆಆರ್ಎಸ್ ನೀರಿನ ಮಟ್ಟ
ಕಾರ್ಯಕ್ರಮದಲ್ಲಿ ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲರಾದ ವೀಣಾ, ಶಿಕ್ಷಕಿಯರಾದ ಪದ್ಮಲತಾ, ಸ್ಮಿತಾ, ಆಯಿಷಾ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.