Get Updates
Get notified of breaking news, exclusive insights, and must-see stories!

ವಿಸ್ಮಯ: ಸ್ಥಳದಲ್ಲೇ ದೇವಸ್ವರೂಪಿ ಮಂಟೇಸ್ವಾಮಿ ಬಸಪ್ಪನ ಪವಾಡ ಕಂಡು ನಿಬ್ಬೆರಗಾದ ಜನ!

ಆಸ್ತಿಕರು ನಂಬುವ ಹಾಗೇ ಭಗವಂತ ಎಲ್ಲಾ ರೂಪದಲ್ಲಿ ಇರುತ್ತಾನೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಐದು ದಶಕಗಳ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸಿಕ್ಕ ಉದಾಹರಣೆಯೊಂದು ಸೇರ್ಪಡೆಯಾಗಬಹುದು. ಹೌದು, ಅದು ಶಿವನ ಸಹಸ್ರಾರು ಗಣಗಳಲ್ಲಿ ಒಂದಾದ ನಂದಿ/ಬಸವನ ಮೂಲಕ ಇಂತಹ ವಿದ್ಯಮಾನವೊಂದು ನಡೆದಿದೆ.

ಜಿಲ್ಲೆಯ ದೇವಸ್ಥಾನವೊಂದರ ಅರ್ಚಕರು ನಿಧನ ಹೊಂದಿದ್ದರಿಂದ, ಹೊಸ ಅರ್ಚಕರ ನೇಮಕವಾಗಿರಲಿಲ್ಲ. ಗ್ರಾಮಸ್ಥರು ಈ ಸಂಬಂಧ ಎಷ್ಟೇ ಪ್ರಯತ್ನ ಪಟ್ಟರೂ ಸೂಕ್ತರನ್ನು ಆರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅಲ್ಲಿ ಜಾತ್ರೆ/ಪೂಜೆಗಳು ನಡೆಯುತ್ತಿರಲಿಲ್ಲ.

ಸುಮಾರು ಐದು ದಶಕಗಳಿಂದ ಇದ್ದ ಈ ಸಮಸ್ಯೆಗೆ ದೇವರ ಬಸಪ್ಪ ಒಂದೇ ನಿಮಿಷದಲ್ಲಿ ಪರಿಹಾರ ಸೂಚಿಸಿದ್ದಾನೆ. ಬಸವನ ಮುಂದೆಯೇ ನೂತನ ಅರ್ಚಕ ದೇವಾಲಯದ ಪೂಜೆಯ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ.

ಮಂಡ್ಯದ ಮದ್ದೂರಿನ ದೊಡ್ಡಬಾಣಸವಾಗಿಯಲ್ಲಿ ಬಸವ ಈ ಪವಾಡವನ್ನು ಸೃಷ್ಟಿಸಿದ್ದಾನೆ. 58ವರ್ಷಗಳ ಹಿಂದೆ ಕಾಯಿಲೆಯಿಂದ ಬಳಲಿ ಅರ್ಚಕರು ಸಾವನ್ನಪ್ಪಿದ್ದರು. ಅಂದಿನಿಂದ ಇಂದಿನವರೆಗೂ ಅರ್ಚಕರ ನೇಮಕವಾಗಿರಲಿಲ್ಲ. ಕೊಂಡ, ಉತ್ಸವ, ಬಂಡಿ ಹಬ್ಬ ಯಾವುದೂ ನಡೆಯುತ್ತಿರಲಿಲ್ಲ, ಇದು ಗ್ರಾಮಸ್ಥರ ಚಿಂತೆಗೆ ಕಾರಣವಾಗಿತ್ತು.

 ಮಂಡ್ಯದ ಮದ್ದೂರಿನ ದೊಡ್ಡಬಾಣಸವಾಗಿ

ಮಂಡ್ಯದ ಮದ್ದೂರಿನ ದೊಡ್ಡಬಾಣಸವಾಗಿ

ಗ್ರಾಮಸ್ಥರೆಲ್ಲಾ ಸಭೆ ಸೇರಿ ಮತ್ತೆ ಹಬ್ಬ ಆಚರಿಸಲು ನಿರ್ಧರಿಸಿದರು. ಇದಕ್ಕಾಗಿ ದೈವಸ್ವರೂಪ ಮಠದ ಹೊನ್ನನಾಯಕನಹಳ್ಳಿಯ ಮಂಟೇಸ್ವಾಮಿ ಬಸಪ್ಪನ ಮೊರೆ ಹೋಗಿ ಅರ್ಚಕರ ನೇಮಕಕ್ಕೆ ಪ್ರಾರ್ಥಿಸಿ ಬಂದಿದ್ದರು. ಅದರಂತೆಯೇ ಗ್ರಾಮಕ್ಕೆ ಆಗಮಿಸಿದ ಬಸಪ್ಪನಿಗೆ ಅದ್ದೂರಿ ಸ್ವಾಗತವನ್ನು ನೀಡಲಾಗಿತ್ತು. ಗ್ರಾಮದ ಬಹುತೇಕ ಎಲ್ಲಾ ಮನೆಗಳಿಗೂ ಪ್ರವೇಶಿಸುವ ಬಸವ ದೇವರ ಮುಂಭಾಗದಲ್ಲಿ ಕೂತಿದ್ದ ಮೂವರನ್ನು ಮೂರು ದೇವಾಲಯಗಳ ಅರ್ಚಕರು ಎಂದು ಸೂಚಿಸುತ್ತಾನೆ.

 ಕೊಂಬಿನಿಂದ ಅವರನ್ನು ಎಬ್ಬಿಸಿ ದೇವಾಲಯದ ಸರೋವರಕ್ಕೆ ತಳ್ಳಿತು

ಕೊಂಬಿನಿಂದ ಅವರನ್ನು ಎಬ್ಬಿಸಿ ದೇವಾಲಯದ ಸರೋವರಕ್ಕೆ ತಳ್ಳಿತು

ಆದರೆ, ಆ ಮೂವರು ಮೊದಲು ಅರ್ಚಕ ಹುದ್ದೆ ನಿಭಾಯಿಸಲು ಒಪ್ಪದೇ ಇದ್ದಾಗ, ಕೊಂಬಿನಿಂದ ಅವರನ್ನು ಎಬ್ಬಿಸಿ ದೇವಾಲಯದ ಸರೋವರಕ್ಕೆ ಬಸವ ಅವರನ್ನು ತಳ್ಳುತ್ತಾನೆ. ಮೂವರೂ ಕೊಳದಲ್ಲಿ ಸ್ಥಾನ ಮಾಡಿ ಬಂದು ಬಸವನಿಗೆ ನಮಸ್ಕರಿಸುತ್ತಾರೆ. ಮೂವರ ಮೇಲೆ ಕೆಲವು ಸೆಕೆಂಡುಗಳ ಕಾಲ ಪಾದವನ್ನು ಇಟ್ಟ ಬಸವ ಆನಂತರ ಅವರನ್ನು ಎಬ್ಬಿಸಿ ದೇವಾಲಯದೊಳಗೆ ತಂದು ಬಿಟ್ಟಿದೆ. ಕಿಕ್ಕಿರುದು ಸೇರಿದ್ದ ಜನಸ್ತೋಮ ಬಸವನ ಪವಾಡವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.

 ಅರ್ಚಕರು ನಮ್ಮ ದೇವರ ಬಸವನನ್ನು ನಿಮ್ಮ ಊರಿಗೆ ಕಳುಹಿಸುತ್ತೇವೆ

ಅರ್ಚಕರು ನಮ್ಮ ದೇವರ ಬಸವನನ್ನು ನಿಮ್ಮ ಊರಿಗೆ ಕಳುಹಿಸುತ್ತೇವೆ

"ಪಕ್ಕದ ಊರಿನ ಹುಲುವಂದ ಕಬ್ಬಾಳಮ್ಮನ ಬಳಿ ಸುಮಾರು ಐವತ್ತು ವರ್ಷಗಳಿಂದ ಪೂಜೆ/ಉತ್ಸವವು ನಮ್ಮ ಗ್ರಾಮದಲ್ಲಿ ನಡೆಯುತ್ತಿಲ್ಲ, ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಪ್ರಾರ್ಥಿಸಿದ್ದೆವು. ಆಗ ಅಲ್ಲಿನ ಅರ್ಚಕರು ನಮ್ಮ ದೇವರ ಬಸವನನ್ನು ನಿಮ್ಮ ಊರಿಗೆ ಕಳುಹಿಸುತ್ತೇವೆ ಎಂದು ಹೇಳಿದ್ದರು. ಅದರಂತೆಯೇ ಬಸವ ನಮ್ಮ ಊರಿಗೆ ಬಂದು, ಮೂರು ದೇವಾಲಯಗಳಿಗೆ ಅರ್ಚಕರನ್ನು ನೇಮಿಸಿ ಹೋಗಿದ್ದಾನೆ"ಎಂದು ಸ್ಥಳೀಯ ಮುಖಂಡರಾದ ಸೋಮಶೇಖರ್ ಹೇಳಿದ್ದಾರೆ.

 ಐದು ದಶಕಗಳ ಸಮಸ್ಯೆಗೆ ಬಸಪ್ಪ ಪರಿಹಾರ ಸೂಚಿಸಿ ತನ್ನ ಮೂಲ ಸ್ಥಾನಕ್ಕೆ ತೆರಳಿದ್ದಾನೆ

ಐದು ದಶಕಗಳ ಸಮಸ್ಯೆಗೆ ಬಸಪ್ಪ ಪರಿಹಾರ ಸೂಚಿಸಿ ತನ್ನ ಮೂಲ ಸ್ಥಾನಕ್ಕೆ ತೆರಳಿದ್ದಾನೆ

ಚೌಡೇಶ್ವರಿ ದೇವಾಲಯ, ಪಟ್ಟಲಮ್ಮ ದೇವಾಲಯ ಮತ್ತು ಮಾರ್ಕೋನಹಳ್ಳಿ ಅಮ್ಮನ ದೇವಾಲಯಕ್ಕೆ ಬಸವ ಅರ್ಚಕರನ್ನು ನೇಮಿಸಿದ್ದಾನೆ. ಐತಿಹಾಸಿಕ ಸ್ಥಳವಾದ ತಣ್ಣೂರು ಕೆರೆಯಲ್ಲಿ ಪವಿತ್ರ ಸ್ನಾನದ ನಂತರ ಮೂವರು ಅರ್ಚಕರಾಗಿ ಪೂಜೆಯನ್ನು ಸಲ್ಲಿಸಿದ್ದಾರೆ. ಹೂತು ಹೋದ ಸ್ಥಳಗಲ್ಲಿ ದೇವರ ವಿಗ್ರಹವನ್ನು ಪತ್ತೆ ಹಚ್ಚುತ್ತಿದ್ದ ಮಂಟೇಸ್ವಾಮಿ ಬಸಪ್ಪ ಈ ಅರ್ಚಕರನ್ನು ನೇಮಿಸುವ ಮೂಲಕ ವಿಸ್ಮಯ ಮರೆದಿದ್ದಾನೆ. ಆ ಮೂಲಕ, ಐದು ದಶಕಗಳ ಸಮಸ್ಯೆಗೆ ಬಸಪ್ಪ ಪರಿಹಾರ ಸೂಚಿಸಿ ತನ್ನ ಮೂಲ ಸ್ಥಾನಕ್ಕೆ ತೆರಳಿದ್ದಾನೆ. (ಮಾಹಿತಿ: ಟಿವಿ9)

Recommended Video

      Sourav Ganguly ಸಪೋರ್ಟ್ ಇದ್ರೂ ಸಾಹಾಗೆ ದ್ರಾವಿಡ್ ಮೋಸ‌ ಮಾಡಿದ್ದು ಹೇಗೆ? | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+