ಕೈ ಭದ್ರ ಕೋಟೆ ಮಂಡ್ಯ ಜಿಲ್ಲೆಯ 7 ಸ್ಥಾನದಲ್ಲೂ ಜೆಡಿಎಸ್ಗೆ ಮುನ್ನಡೆ
ಮಂಡ್ಯ, ಮೇ 15: ಕಾಂಗ್ರೆಸ್ನ ಭದ್ರ ಕೋಟೆ ಎನಿಸಿಕೊಂಡಿದ್ದ ಮಂಡ್ಯ ಜಿಲ್ಲೆ ಕಾಂಗ್ರೆಸ್ ಕೈ ತಪ್ಪುವ ಮುನ್ಸೂಚನೆ ಕಾಣುತ್ತಿದೆ. ಅಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಮುನ್ನಡೆ ಗಳಿಸಿದೆ.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ನಿಂದ ಕಾಂಗ್ರೆಸ್ಗೆ ಹಾರಿದ್ದ ಚೆಲುವರಾಯಸ್ವಾಮಿ ಸೇರಿದಂತೆ 7 ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಮುನ್ನಡೆ ಸಾಧಿಸಿದೆ. ಅಲ್ಲಿ ಕಾಂಗ್ರೆಸ್ನ ಇಬ್ಬರು ಮುಖಂಡರಾದ ಎಸ್.ಎಂ.ಕೃಷ್ಣ ಹಾಗೂ ಅಂಬರೀಶ್ ಅವರು ಕಾಂಗ್ರೆಸ್ಗೆ ಕೈಟಕೊಟ್ಟಿದ್ದು ಕಾಂಗ್ರೆಸ್ಗೆ ಭಾರಿ ಪರಿಣಾಮ ಬೀರಿದಂತಿದೆ.
ಮಂಡ್ಯ ಜಿಲ್ಲೆಯ ಮಲವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ, ಕೃಷ್ಣರಾಜನಗರ ಎಲ್ಲ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ಗೆ ಭಾರಿ ಹೊಡೆತ ನೀಡಿದೆ.













Click it and Unblock the Notifications