ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ದೆವ್ವಗಳ ಜತೆ ಮೋದಿ ಹೋಲಿಕೆ, ರಮ್ಯಾಗೆ ಪ್ಯಾಂಪರ್ಸ್ ಉಡುಗೊರೆ

By ಸಿಟಿ ಮಂಜುನಾಥ್
|
Google Oneindia Kannada News

ಮಂಡ್ಯ, ನವೆಂಬರ್ 2: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಕ್ರಮವನ್ನು ವಿರೋಧಿಸುವ ಸಲುವಾಗಿ ಅವರನ್ನು ಭೂತಕ್ಕೆ ಹೋಲಿಸಿ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದರು. ಇದೀಗ ಅವರಿಗೆ ತಾಯತ ಹಾಗೂ ಪ್ಯಾಂಪರ್ಸ್ ಕಳುಹಿಸಿ ಕೊಡುವ ಮೂಲಕ ಮಂಡ್ಯ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಶಿರಸಿಯಲ್ಲಿ ಮಾಜಿ ಸಂಸದೆ ರಮ್ಯಾ ವಿರುದ್ಧ ಪ್ರತಿಭಟನೆಶಿರಸಿಯಲ್ಲಿ ಮಾಜಿ ಸಂಸದೆ ರಮ್ಯಾ ವಿರುದ್ಧ ಪ್ರತಿಭಟನೆ

ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರನ್ನು ಭೂತಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದ ರಮ್ಯಾ ಅವರ ಕ್ರಮವನ್ನು ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು.

Mandya BJP leaders sent Pamper to Ramya after she compares Modi with ghosts

ಪ್ರಧಾನಿ ಮೋದಿ ಅವರು ನೋಟು ನಿಷೇಧ ಮಾಡಿರುವುದರಿಂದ ಭಯೋತ್ಪಾದನೆಗೆ ಹಣವನ್ನು ಕೊಡುತ್ತಿದ್ದ ದುಷ್ಕರ್ಮಿಗಳು ಹಾಗೂ ಕಪ್ಪು ಹಣವನ್ನು ಸಂಗ್ರಹಿಸಿದ್ದ ಸಿರಿವಂತರಿಗೆ ನಿಜವಾಗಿಯೂ ಭೂತವಾಗಿ ಕಾಣಿಸುತ್ತಿದ್ದಾರೆ. ಅದರಿಂದ ನಾವು ಅವರಿಗೆ ಪ್ಯಾಂಪರ್ಸ್ ಹಾಗೂ ದೇವರ ತಾಯತವನ್ನು ಕಳುಹಿಸಿಕೊಡುತ್ತಿರುವುದಾಗಿ ಹೇಳಿದರು.

"ನೋಟು ನಿಷೇಧ ಮಾಡಿರುವುದರಿಂದ ಭಯೋತ್ಪಾದನೆ, ಮತಾಂತರಕ್ಕೆ ಹರಿದು ಬರುತ್ತಿದ್ದ ಬೇನಾಮಿ ಹಣಕ್ಕೆ ಕಡಿವಾಣ ಬಿದ್ದಿದೆ. ಆರ್ಥಿಕ ತಜ್ಞರು, ವಿಶ್ವಸಂಸ್ಥೆ ನಿಷೇಧದ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ. ಹೀಗಿರುವಾಗ ರಮ್ಯಾ ಅವರಿಗೆ ಭಯ ಯಾಕೆ? ಈ ಕೂಡಲೇ ರಮ್ಯಾ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು," ಎಂದು ಪ್ರತಿಬಟನಾಕಾರರು ಆಗ್ರಹಿಸಿದರು.

Mandya BJP leaders sent Pamper to Ramya after she compares Modi with ghosts

ಒಂದು ವೇಳೆ ನೋಟು ನಿಷೇಧದಿಂದ ಯಾರಿಗಾದರೂ ಭಯ ಆದರೆ ಅವರಿಗೆ ಕೊಡಲು ಪ್ಯಾಂಪರ್, ತಾಯತಗಳನ್ನು ಅಂಚೆ ಮೂಲಕ ರಮ್ಯಾ ಅವರಿಗೆ ಕಳುಹಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

English summary
Former MP Ramya tweeted by compares Narendra Modi with ghosts. Mandya BJP activists have protested against this by sending her pampers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X