ಅಂಬರೀಶ್ ಅಭಿಮಾನಿಗಳ ಮಾತು ನೋವು ತಂದಿದೆ : ಕುಮಾರಸ್ವಾಮಿ

Recommended Video

      Lok Sabha Elections 2019 : ಅಂಬರೀಶ್ ಅಭಿಮಾನಿಗಳ ಮಾತು ನೋವು ತಂದಿದೆ : ಕುಮಾರಸ್ವಾಮಿ | Oneindia Kannada

      ಮಂಡ್ಯ, ಮಾರ್ಚ್ 15 : 'ಅಂಬರೀಶ್ ಅವರಿಗೆ ನನ್ನ ಹೃದಯದಲ್ಲಿ ಅಣ್ಣನ ಸ್ಥಾನ ನೀಡಿದ್ದೇನೆ. ಆ ಪ್ರೀತಿ, ವಾತ್ಸಲ್ಯ ದೊಡ್ಡದು. ಇದನ್ನು ಅರ್ಥ ಮಾಡಿಕೊಳ್ಳದ ಅವರ ಅಭಿಮಾನಿಗಳು ನನ್ನ, ನಿಖಿಲ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ನನಗೆ ತೀವ್ರ ನೋವು ಉಂಟು ಮಾಡಿದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

      ಗುರುವಾರ ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಅಂಬರೀಶ್ ಮಗ ಅಭಿಷೇಕ್ ಬೇರೆಯಲ್ಲ. ನನ್ನ ಮಗ ನಿಖಿಲ್ ಬೇರೆಯಲ್ಲ. ಅಂಬರೀಶ್ ಅಭಿಮಾನಿಗಳ ಮಾತನಾಡುವ ಮುನ್ನ ಅಂಬರೀಶ್ ಆತ್ಮ ಏನು ಹೇಳುತ್ತದೆ ಎನ್ನುವುದನ್ನು ಯೋಚಿಸಲಿ' ಎಂದರು.

      'ಅಂಬರೀಶ್ ಅವರು ವಿಧಿವಶರಾದಾಗ ಅವರ ಮಗ ಫೋನ್ ಮಾಡಿ ಆಸ್ಪತ್ರೆಗೆ ಬನ್ನಿ ಎಂದ ನಾನು ರಾತ್ರಿ 12 ಗಂಟೆಗೆ ಅಲ್ಲಿಗೆ ಹೋದೆ. 3 ಗಂಟೆಯ ತನಕ ಅಲ್ಲೇ ಇದ್ದೆ. ಅಂಬರೀಶ್ ಅವರು ಬಾಳಿ ಬದುಕಿದ ಜೆ.ಪಿ.ನಗರದ ಮನೆಯಲ್ಲಿ ಕೆಲಸಗಳು ನಡೆಯುತ್ತಿತ್ತು. ಆದ್ದರಿಂದ ಪಾರ್ಥಿವ ಶರೀರ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂಬುದು ತೀರ್ಮಾನ ಆಗಿರಲಿಲ್ಲ' ಎಂದು ತಿಳಿಸಿದರು.

      HD Kumaraswamy upset with Ambareesh fans

      'ನಮ್ಮ ಅಧಿಕಾರಿಗಳು 3 ಗಂಟೆಗೆ ಆಸ್ಪತ್ರೆಗೆ ಕರೆಸಿದೆ. ಜೆ.ಪಿ.ನಗರದ ಮನೆಯನ್ನು ಕ್ಲೀನ್ ಮಾಡಿಸಿ. ಪಾರ್ಥಿವ ಶರೀರವನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಪೂಜಾ ಕಾರ್ಯಗಳನ್ನು ಮಾಡಲಿ ಎಂದು ಹೇಳಿದೆ. ಮುಖ್ಯಮಂತ್ರಿಯಾಗಿ ಆವತ್ತು ಅದು ನನ್ನ ಜವಾಬ್ದಾರಿಯಾಗಿತ್ತು' ಎಂದು ಕುಮಾರಸ್ವಾಮಿ ಹೇಳಿದರು.

      'ಅಂದು ಆಸ್ಪತ್ರೆಯಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಎಂದವರು ಇಂದು ಮಂಡ್ಯದ ಬಗ್ಗೆ, ಮಂಡ್ಯದ ಮಣ್ಣಿನ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕುಮಾರಸ್ವಾಮಿ ದೂರಿದರು.

      'ನೀವು ಮಂಡ್ಯದ ಗಂಡನ್ನು ಅಂತಿಮವಾಗಿ ನೋಡಲು ಬಯಸಿದಿರಿ. ಅದಕ್ಕಾಗಿ ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು. ಮುಖ್ಯಮಂತ್ರಿಯಾಗಿ ಅದು ನನ್ನ ಜವಾಬ್ದಾರಿಯಾಗಿತ್ತು' ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+