ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ನಲ್ಲಿ ಸಾಲಮನ್ನಾ ಘೋಷಿಸುತ್ತೇನೆ: ಕುಮಾರಸ್ವಾಮಿ

|
Google Oneindia Kannada News

Recommended Video

ಬಜೆಟ್ ನಲ್ಲಿ ಸಾಲಮನ್ನಾ ಘೋಷಿಸುತ್ತೇನೆ: ಕುಮಾರಸ್ವಾಮಿ | Oneindia Kannada

ಮಂಡ್ಯ, ಜೂನ್ 14: ಎಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಸವಾಲಾಗಿ ಎರಗಿದ ರೈತರ ಸಾಲಮನ್ನಾ ಕುರಿತ ಒತ್ತಾಯ, ಒತ್ತಡಕ್ಕೆ ಕೊನೆಗೂ ಮುಖ್ಯಮಂತ್ರಿ ಮಣಿದಿದ್ದಾರೆ.

ಜುಲೈ 5 ರಂದು ಅವರು ಮಂಡಿಸಲಿರುವ ಮಂತಗ್ರಿ ಸರ್ಕಾರದ ಮೊದಲ ಬಜೆಟ್ ನಲ್ಲಿ ರೈತರ ಕೃಷಿ ಸಾಲಮನ್ನಾ ಘೋಷಣೆ ಮಾಡುವುದಾಗಿ ಅವರೇ ತಿಳಿಸಿದ್ದಾರೆ.

ಜುಲೈ 5ಕ್ಕೆ ಕುಮಾರಸ್ವಾಮಿ ಮೊದಲ ಬಜೆಟ್‌ ಮಂಡನೆಜುಲೈ 5ಕ್ಕೆ ಕುಮಾರಸ್ವಾಮಿ ಮೊದಲ ಬಜೆಟ್‌ ಮಂಡನೆ

ಮಂಡ್ಯದ ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಾಲಯದಲ್ಲಿ ಜೂನ್ 13 ರಂದು ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಇತರ ಪಕ್ಷಗಳಂತೆ ಪಲಾಯನವಾದಿಯಲ್ಲ, ಚುನಾವಣೆಹಗೂ ಮುನ್ನ ನೀಡಿದ್ದ ಭರವಸೆಗಳನ್ನೆಲ್ಲ ಖಂಡಿತ ಈಡೇರಿಸುತ್ತೇನೆ ಎಂದು ಅವರು ಹೇಳಿದರು.

HD Kumaraswamy to announce crop loan waiver in his first budget

ಮೈತ್ರಿ ಸರ್ಕಾರದಲ್ಲಿ ಸಾಲಮನ್ನಾದಂಥ ಮಹತ್ವದ ನಿರ್ಧಾರ ಕೈಗೊಳ್ಳುವಾಗ ಎರಡೂ ಪಕ್ಷದ ನಾಯಕರ ವಿಶ್ವಾಸ ತೆಗೆದುಕೊಳ್ಳಬೇಕು. ಅದನ್ನು ನಾನೊಬ್ಬನೇ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ ಎಂದು ಈ ಮೊದಲು ಕುಮಾರಸ್ವಾಮಿ ಹೇಳಿದ್ದರು. ಆದರೆ ಸಾಲಮನ್ನಾಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಹೇಳಿದ್ದು, ಸಾಲಮನ್ನಾಕ್ಕೆ ಗ್ರೀನ್ ಸಿಗ್ನಲ್ ಕೊತ್ತಿದ್ದಾರೆ.

ಒಟ್ಟಾರೆ 30 ಸಾವಿರ ಕೋಟಿ ರೂ.ನಷ್ಟು ಕೃಷಿ ಸಾಲಮನ್ನಾಕ್ಕೆ ಈಗಾಗಲೇ ರೂಪುರೇಷೆ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Karnataka chief minister HD Kumaraswamy told he will announce farmers crop loan waiver in his first budget which will be pronounced on July 5th. He was talking to media in Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X