ಯೋಧನ ಮೃತದೇಹ ತರಲು ವಿಳಂಬ ಹಿನ್ನೆಲೆ : ಗುಡಿಗೆರೆ ಗ್ರಾಮಸ್ಥರ ಆಕ್ರೋಶ
Recommended Video

ಮಂಡ್ಯ ಫೆಬ್ರವರಿ 16 : ಉಗ್ರರ ದಾಳಿಗೆ ಹುತಾತ್ಮರಾದ ಮೈಸೂರಿನ ಗುಡಿಗೆರೆ ಗ್ರಾಮದ ಯೋಧ ಗುರು ಪಾರ್ಥಿವ ಶರೀರ ರವಾನೆಯಲ್ಲಿ ವಿಳಂಬವಾಗುತ್ತಿದ್ದು ಎಷ್ಟು ಹೊತ್ತಿಗೆ ಸರಿಯಾಗಿ ಪಾರ್ಥಿವ ಶರೀರ ರವಾನೆಯಾಗಲಿದೆ ಎಂಬುದನ್ನು ಸರಿಯಾಗಿ ತಿಳಿಸುತ್ತಿಲ್ಲ.
ನಿನ್ನೆ ಮಧ್ಯರಾತ್ರಿ ಮೃತದೇಹ ಬರುವುದೆಂದು ಒಬ್ಬರು ಹೇಳಿದರೇ, ಇಂದು ಬೆಳಿಗ್ಗೆ ಎಂದು, ಮತ್ತೊಬ್ಬರು ಮಧ್ಯಾಹ್ನ 11.30ಕ್ಕೆ, 1ಕ್ಕೆಂದು, ಮತ್ತೊಬ್ಬರು 3.30ಕ್ಕೆಂದು ಹೇಳುತ್ತಿದ್ದಾರೆ. ಈ ಹಿನ್ನೆಲೆ ಸ್ವಗ್ರಾಮ ಗುಡಿಗೆರೆ ಕಾಲೋನಿಯಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಶೀಘ್ರವಾಗಿ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ನಲ್ಲಿ ಗುರು ಪಾರ್ಥಿವ ಶರೀರ ತರಲು ಜಿಲ್ಲಾಡಳಿತ ಮುಂದಾಗಬೇಕು. ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಯೋಧ ಗುರು ಸಂಬಂಧಿಕರು ಹಾಗೂ ಗ್ರಾಮಸ್ಥರು ಎರಡು ದಿನಗಳಿಂದ ಪಾರ್ಥಿವ ಶರೀರಕ್ಕಾಗಿ ಕಾದು ಕುಳಿತಿದ್ದಾರೆ. ಅಲ್ಲದೆ ಕುಟುಂಬಸ್ಥರು ಅಸ್ವಸ್ಥರಾಗುತ್ತಿದ್ದಾರೆ.

ರಾಜಕಾರಣಿಗಳ ಮೃತದೇಹ ಬೇಗ ಶಿಫ್ಟ್ ಮಾಡ್ತಾರೆ. ಆದರೇ ದೇಶಕ್ಕೆ ತಮ್ಮ ಜೀವವನ್ನು ಮುಡಿಪಾಗಿಟ್ಟವರ ಬಗ್ಗೆ ಈ ಆಕ್ರೋಶವೇಕೆ ? ಎಂದು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.












Click it and Unblock the Notifications