ಕಾವೇರಿ ವಿವಾದ: ಸಿಜೆಐ ವಿರುದ್ಧ ಮಂಡ್ಯದಲ್ಲಿ 420 ಕೇಸ್
ಮಂಡ್ಯ, ಸೆ.09: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ಇನ್ನಿತರ ಜಡ್ಜ್ ಗಳ ವಿರುದ್ಧ 420 ಕೇಸ್ ದಾಖಲಾಗಿದೆ. ಈ ಮೂಲಕ ಕಾವೇರಿ ನದಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ಅಂತ್ಯ ಕಂಡಿದೆ. ಮಂಡ್ಯದ ಜೆಎಂಎಫ್ ಕೋರ್ಟಿನಲ್ಲಿ ಸಿಜೆಐ ಸೇರಿದಂತೆ ಅನೇಕ ವಿರುದ್ದ ಪ್ರಕರಣ ದಾಖಲಾಗಿದೆ.
ಕಾವೇರಿ ವಿವಾದ ತಾರಕಕ್ಕೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಥ ಪರಿಸ್ಥಿತಿ ನಿರ್ಮಾಣವಾಗಲು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಎಂಬಿ ಪಾಟೀಲ್, ಸುಪ್ರೀಂಕೋರ್ಟ್ ಜಡ್ಜ್ ಗಳು ಕಾರಣ ಎಂದು ಮಂಡ್ಯದಲ್ಲಿ ಎಂಡಿ ರಾಜಣ್ಣ ಎಂಬುವವರಿಂದ ಜೆಎಂಎಫ್ ಕೋರ್ಟ್ ನಲ್ಲಿ ದೂರು ದಾಖಲಾಗಿದೆ. ಸೆಪ್ಟೆಂಬರ್ 14 ರಂದು ವಿಚಾರಣೆ ಸಾಧ್ಯತೆಯಿದೆ.[ಬೈದ ಮೇಲೆ ಉಲ್ಟಾ ಹೊಡೆದ ಬಯೋಕಾನ್ ಕಿರಣ್ ಶಾ]
ಇದರಿಂದ ಜನತೆಗೆ ವಂಚನೆ, ಅನ್ಯಾಯವಾಗಿದೆ. ಸುಪ್ರೀಂಕೋರ್ಟ್ ಅದೇಶಕ್ಕೆ ತಲೆಬಾಗಿ ತಮಿಳುನಾಡಿಗೆ ಪ್ರತಿದಿನ 15,000ಕ್ಯೂಸೆಕ್ಸ್ ನೀರು ಬಿಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಅಸಲಿಗೆ ಸುಪ್ರೀಂ ಆದೇಶವೇ ಅಕ್ರಮವಾಗಿದೆ ಎಂದು ಅರ್ಜಿದಾರ ಎಂಡಿ ರಾಜಣ್ಣ ಹೇಳಿದ್ದಾರೆ.[ಮಂಡ್ಯದಲ್ಲಿ ಶೇ90 ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ]
ಕೋರ್ಟ್ ವ್ಯಾಪ್ತಿಗೆ ಒಳಪಡದಿದ್ದರೂ ಕಾನೂನು ಮೀರಿ ಆದೇಶ ನೀಡುತ್ತಿದ್ದೇವೆ ಎಂಬ ಅರಿವು ಟಿಎಸ್ ಠಾಕೂರ್ ಹಾಗೂ ಇತರೆ ಜಡ್ಜ್ ಗಳಿಗಿದೆ. ಈ ಪ್ರಕರಣದಲ್ಲಿ ಜಸ್ಟೀಸ್ ದೀಪಕ್ ಮಿಶ್ರಾ ಹಾಗೂ ಉದಯ್ ಉಮೇಶ್ ಲಲಿತ್ ಕೂಡಾ ಹೊಣೆಗಾರರು.
ಎರಡು ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ನೀರಾವರಿ ಸಚಿವರುಗಳ ಮೇಲೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 420ರಂತೆ ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. (ಒನ್ಇಂಡಿಯಾ ಸುದ್ದಿ)