ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಟಿಕೆಟ್ ರಮ್ಯಾಗೆ ಕೊಟ್ಟಿದ್ದರೆ ಹೆಚ್ಚು ಸಂತೋಷ ಆಗ್ತಿತ್ತು: ಅಂಬರೀಶ್‌

|
Google Oneindia Kannada News

Recommended Video

ರಮ್ಯಾಗೆ ಮಂಡ್ಯ ಟಿಕೆಟ್ ಸಿಕ್ಕಿದ್ದಿದ್ರೆ ನನಗೆ ಜಾಸ್ತಿ ಖುಷಿಯಾಗ್ತಿತ್ತು ಎಂದ ಅಂಬಿ | Oneindia Kannada

ಅಂಬರೀಶ್‌ ಅವರು ಹಲವು ದಿನಗಳಿಂದ ಕಾಂಗ್ರೆಸ್‌ ರಾಜ್ಯ ಕಾಂಗ್ರೆಸ್‌ ಮುಖಂಡರು ಮಾಧ್ಯಮದವರ ಕೈಗೆ ಸಿಕ್ಕದೆ ಓಡಾಡಿಕೊಂಡಿದ್ದವರು ಇಂದು ಮಂಡ್ಯ ಟಿಕೆಟ್ ಗಣಿಗ ರವಿಕುಮಾರ್‌ಗೆ ನೀಡಿದ ನಂತರ ಮಾಧ್ಯಮದವರೊಡನೆ ಮುಖಾಮುಖಿಯಾದರು.

ಸುಮಾರು ಅರ್ಧ ಗಂಟೆ ಸುದ್ದಿ ಮಾಧ್ಯಮದವರೊಡನೆ ತಮ್ಮ ಎಂದಿನ ಬಿಡು ಬೀಸು, ವ್ಯಂಗ್ಯ, ಸಿಟ್ಟಿನ ಶೈಲಿಯಲ್ಲೇ ಮಾಧ್ಯಮದವರೊಡನೆ ಮಾತಿಗಳಿದ ಅಂಬರೀಶ್‌ ಅವರು ಮಾಧ್ಯಮದವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು.

ಚುನಾವಣೆಗೆ ನಿಲ್ಲಲು ಅಂಬರೀಶ್‌ ಷರತ್ತು, ಒಪ್ಪುತ್ತಾ ಕಾಂಗ್ರೆಸ್‌ಚುನಾವಣೆಗೆ ನಿಲ್ಲಲು ಅಂಬರೀಶ್‌ ಷರತ್ತು, ಒಪ್ಪುತ್ತಾ ಕಾಂಗ್ರೆಸ್‌

ತಮಗೆ ಆರೋಗ್ಯ ಸರಿ ಇಲ್ಲದ ಕಾರಣ ಟಿಕೆಟ್ ಬೇಡವೆಂದಿದ್ದಾಗಿ ಸ್ಪಷ್ಟಪಡಿಸಿದ ಅಂಬರೀಶ್ ಅವರು ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ ಆದರೆ ಚುನಾವಣೆ ರಾಜಕೀಯದಿಂದ ನಿವೃತ್ತಿ ಆಗುತ್ತಿದ್ದೇನೆ ಎಂದರು.

ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅಂಬರೀಷ್ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅಂಬರೀಷ್

ಗಣಿಗ ರವಿಕುಮಾರ್ ಅವರಿಗೆ ಒಳ್ಳೆಯದಾಗಲಿ ಆ ವ್ಯಕ್ತಿ ಚುನಾವಣೆಯಲ್ಲಿ ಗೆಲ್ಲಲಿ ಎಂದು ಹಾರೈಸಿದ ಅಂಬರೀಶ್ ಅವರು ನಟಿ ರಮ್ಯಾ ಅವರಿಗೆ ಟಿಕೆಟ್‌ ನೀಡಿದ್ದರೆ ನನಗೆ ಇನ್ನೂ ಹೆಚ್ಚು ಸಂತೋಶವಾಗುತ್ತಿತ್ತು ಎಂದರು.

English summary
Ambareesh said he is not contesting to election due to his bad health condition. He also said if congress given Mandya ticket to Ramya he will be more happy. KPCC given ticket to Ganiga Ravi Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X