ಮಡಿಕೇರಿ ನಾಮಕರಣ ಕಾರ್ಯಕ್ರಮದಲ್ಲಿ ಮದ್ಯ, ಗನ್, ಹೊಡೆದಾಟ
ಮಡಿಕೇರಿ, ಅಕ್ಟೋಬರ್ 30: ನಾಮಕರಣ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿ ಮಡಿಕೇರಿ ನಗರಸಭೆ ಕೌನ್ಸಿಲರ್ ಹಾಗೂ ಅವರ ಬೆಂಬಲಿಗರು ಗನ್ ತೋರಿಸಿ ದಾಂದಲೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ಭಾನುವಾರ ನಡೆದಿದೆ. ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಾಮಕರಣ ಸಮಾರಂಭವೊಂದು ನಡೆಯುತ್ತಿತ್ತು.
ಮಡಿಕೇರಿ ದಸರಾ ದಿನ ವ್ಯಕ್ತಿಯನ್ನು ಕೊಲೆಗೈದಿದ್ದ ಹಂತಕರ ಬಂಧನ
ನಗರಸಭೆ ಕೌನ್ಸಿಲರ್ ವೀಣಾಕ್ಷಿ ಹಾಗೂ ಸಮಾರಂಭದಲ್ಲಿ ಮದ್ಯಪಾನ ಮಾಡುತ್ತಿದ್ದವರ ಮಧ್ಯೆ ಘರ್ಷಣೆ ಏರ್ಪಟ್ಟಿದ್ದು, ಈ ಸಂದರ್ಭ ಅಲ್ಲಿಗೆ ಬಂದ ವೀಣಾಕ್ಷಿ ಬೆಂಬಲಿಗನೊಬ್ಬ ಗನ್ ತೋರಿಸಿ ಬೆದರಿಸಿದ್ದಾನೆ. ಸಮಾರಂಭದಲ್ಲಿ ಕಟ್ಟಡದ ಮೊದಲ ಅಂತಸ್ತಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಯುವಕರ ಗುಂಪೊಂದು ಅಲ್ಲಿಂದ ಗ್ಲಾಸ್ ಹಾಗೂ ಬಾಟಲಿಗಳನ್ನು ಕೆಳಕ್ಕೆ ಬೀಳಿಸಿದ್ದಾರೆ.
ಅದೇ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿರುವ ನಗರಸಭೆ ಸದಸ್ಯೆ ವೀಣಾಕ್ಷಿ ಇದನ್ನು ಪ್ರಶ್ನಿಸಿದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ವೀಣಾಕ್ಷಿ ಹಾಗೂ ಅದೇ ಬಡಾವಣೆಯ ಯುವಕರು ಹಾಲ್ ಗೆ ನುಗ್ಗಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಆಗ ಏಕಾಏಕಿ ಬಂದ ವೀಣಾಕ್ಷಿ ಬೆಂಬಲಿಗ ಎಂದು ಹೇಳಲಾಗುತ್ತಿರುವ ಯುವಕನೊಬ್ಬ ತನ್ನ ಕಾರಿನಿಂದದ ಬಂದೂಕು ತಂದು ಅಲ್ಲಿದ್ದವರನ್ನು ಬೆದರಿಸಿದ್ದಾನೆ.