ಕೊಡವರಿಗೆ ಕರ್ನಾಟಕದ ಭಾಗವಾಗಿರುವುದಕ್ಕೆ ಇಷ್ಟವಿಲ್ಲ: ನಾಚಪ್ಪ
ಕೊಡಗು, ಮಾರ್ಚ್ 23: 'ಕೊಡವರಿಗೆ ಕರ್ನಾಟಕದ ಭಾಗವಾಗಿರುವದಕ್ಕೆ ಇಷ್ಟವಿಲ್ಲ' ಎಂದು ಕೊಡವ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಎನ್ ಯು ನಾಚಪ್ಪ ಹೇಳಿದ್ದಾರೆಂದು ಎಎನ್ ಐ ವರದಿ ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಲಿಂಗಾಯತ ಪ್ರತ್ಯೇಕ ಧರ್ಮದ ಗುಲ್ಲೆದ್ದಿರುವ ಹೊತ್ತಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ನಾಚಪ್ಪ, 'ನಮಗೆ ಪ್ರತ್ಯೇಕ ಧರ್ಮ ಬೇಕಿಲ್ಲ. ನಮಗೆ ಭಾಷಾ ಅಲ್ಪಸಂಖ್ಯಾತರ ಮತ್ತು ಬುಡಕಟ್ಟು ಸ್ಥಾನಮಾನ ನೀಡಿ' ಎಂದು ಅವರು ಬೇಡಿಕೆಯಿಟ್ಟಿದ್ದಾರೆಂದು ವರದಿ ತಿಳಿಸಿದೆ.

"ನಮಗೆ ಪ್ರತ್ಯೇಕ ಧರ್ಮ ಬೇಕಿಲ್ಲ. ನಾವು ಭಾರತದಿಂದ ಆಚೆ ಹೋಗುವ ಬಗ್ಗೆಯೂ ಮಾತನಾಡುತ್ತಿಲ್ಲ. ನಾವು ಭಾರತದ ಭಾಗವಾಗಿಯೇ ಇರುತ್ತೇವೆ, ನಮ್ಮ ಸಂವಿಧಾನಕ್ಕೆ ವಿಧೇಯರಾಗಿರುತ್ತೇವೆ. ನಾವು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಗೌರವಿಸುತ್ತೇವೆ. ಆದರೆ ಕರ್ನಾಟಕದ ಭಾಗವಾಗಿರುವುದಕ್ಕೆ ನಮಗೆ ಇಷ್ಟವಿಲ್ಲ" ಎಂದು ಅವರು ಹೇಳಿದ್ದಾರೆ.












Click it and Unblock the Notifications