ಮಡಿಕೇರಿ ಜಾನಪದ ದಸರಾ ಸಂಭ್ರಮ; ಅಪರೂಪದ ವಸ್ತು ಪ್ರದರ್ಶನ
ಮಡಿಕೇರಿ, ಅಕ್ಟೋಬರ್ 17: ಕೊರೊನಾ ಭೀತಿಯ ನಡುವೆ ಮನಸ್ಸಿಗೆ ಒಂದಿಷ್ಟು ಹಿತ ನೀಡಲು ಮಡಿಕೇರಿಯ ಗಾಂಧಿ ಮೈದಾನದ ಪಕ್ಕದಲ್ಲಿನ ಕಾಫಿ ಕೃಪಾ ಕಟ್ಟಡದಲ್ಲಿರುವ ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಜಾನಪದ ವಸ್ತುಗಳ ಪ್ರದರ್ಶನ ಆರಂಭವಾಗಿದೆ.
ರೋಟರಿ ಮಿಸ್ಟಿ ಹಿಲ್ಸ್ ನ ಸದಸ್ಯರೂ ಆಗಿರುವ ಪೊನ್ನಚ್ಚನ ಮಧು ಮತ್ತು ಪ್ರೀತು ದಂಪತಿ ಕಳೆದ 3 ವರ್ಷಗಳಿಂದ ಜಿಲ್ಲೆಯ ವಿವಿಧೆಡೆ ಸಂಚರಿಸಿ ಸಂಗ್ರಹಿಸಿದ ಕೊಡಗಿನ ಹಳೇ ಕಾಲದ ವಸ್ತುಗಳು ಮತ್ತು ದೇಶದ ಹಲವೆಡೆಗಳ ಅಮೂಲ್ಯವಾದ ಜಾನಪದ ವಸ್ತುಗಳನ್ನು ಇಲ್ಲಿಟ್ಟಿದ್ದಾರೆ.
ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಅ.16ರಿಂದ ಅಕ್ಟೋಬರ್ 26 ರವರೆಗೆ ಜಾನಪದ ದಸರಾ ಅಂಗವಾಗಿ ಇಲ್ಲಿ ಜಾನಪದದ ಅಪರೂಪದ ವಸ್ತುಗಳು ಪ್ರದರ್ಶನಕ್ಕಿಡಲಾಗಿದೆ. ಈ ಜಾನಪದ ದಸರಾವನ್ನು ನ್ಯಾಯಾಧೀಶೆ ನೂರುನ್ನೀಸಾ ಅ.16ರ ಶುಕ್ರವಾರ ಉದ್ಘಾಟಿಸಿದರು. ಹಿರಿಯರನ್ನು ನಿರ್ಲಕ್ಷಿಸುತ್ತಿರುವಂತೆಯೇ ಹಳೇ ಕಾಲದ ವಸ್ತುಗಳನ್ನೂ ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ಇಂಥ ಜಾನಪದ ಪರಿಕರಗಳ ಪ್ರದರ್ಶನದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಜಾನಪದ ವಸ್ತುಗಳ ಸಂಗ್ರಾಹಕ ಪೊನ್ನಚ್ಚನ ಮಧು ಮಾತನಾಡಿ, ತಾನು ಹಳೇ ವಸ್ತುಗಳ ಗುಜರಿಗೆ ಹೋದಾಗ ಅಲ್ಲಿದ್ದ ಅರಿಫಾ ಮುನಾವರ್ ಎಂಬ ಅಜ್ಜಿಯೊಬ್ಬರು ಅಪರೂಪದ ಗಡಿಯಾರ ನೀಡಿ ಇದನ್ನು ನಿನ್ನಲ್ಲಿಟ್ಟುಕೋ, ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ಪ್ರಾರಂಭಿಸು ಎಂದದ್ದೇ ತನ್ನ ಸಂಗ್ರಹ ಇಷ್ಟೊಂದು ಬೃಹತ್ತಾಗಿ ಬೆಳೆಯಲು ಕಾರಣ ಎಂದು ಸ್ಮರಿಸಿದರು.
ಹಳೇ ಕಾಲದ ಅನೇಕ ವಸ್ತುಗಳು ಜಾನಪದ ದಸರಾದಲ್ಲಿ ಕಂಗೊಳಿಸುತ್ತಿದ್ದು, ಅಕ್ಟೋಬರ್ 26ರವರೆಗೆ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಸ್ಯಾನಿಟೈಸರ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ.ಮನವಿ ಮಾಡಿದ್ದಾರೆ. ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಸ್ವಾದಿಷ್ಟ ಕಾಫಿ ಕೂಡ ದೊರಕುತ್ತದೆ. ಕಾಫಿ ಹೀರಲು ಮರೆಯದಿರಿ...
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications