ಮಡಿಕೇರಿ ಜಾನಪದ ದಸರಾ ಸಂಭ್ರಮ; ಅಪರೂಪದ ವಸ್ತು ಪ್ರದರ್ಶನ
ಮಡಿಕೇರಿ, ಅಕ್ಟೋಬರ್ 17: ಕೊರೊನಾ ಭೀತಿಯ ನಡುವೆ ಮನಸ್ಸಿಗೆ ಒಂದಿಷ್ಟು ಹಿತ ನೀಡಲು ಮಡಿಕೇರಿಯ ಗಾಂಧಿ ಮೈದಾನದ ಪಕ್ಕದಲ್ಲಿನ ಕಾಫಿ ಕೃಪಾ ಕಟ್ಟಡದಲ್ಲಿರುವ ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಜಾನಪದ ವಸ್ತುಗಳ ಪ್ರದರ್ಶನ ಆರಂಭವಾಗಿದೆ.
ರೋಟರಿ ಮಿಸ್ಟಿ ಹಿಲ್ಸ್ ನ ಸದಸ್ಯರೂ ಆಗಿರುವ ಪೊನ್ನಚ್ಚನ ಮಧು ಮತ್ತು ಪ್ರೀತು ದಂಪತಿ ಕಳೆದ 3 ವರ್ಷಗಳಿಂದ ಜಿಲ್ಲೆಯ ವಿವಿಧೆಡೆ ಸಂಚರಿಸಿ ಸಂಗ್ರಹಿಸಿದ ಕೊಡಗಿನ ಹಳೇ ಕಾಲದ ವಸ್ತುಗಳು ಮತ್ತು ದೇಶದ ಹಲವೆಡೆಗಳ ಅಮೂಲ್ಯವಾದ ಜಾನಪದ ವಸ್ತುಗಳನ್ನು ಇಲ್ಲಿಟ್ಟಿದ್ದಾರೆ.
ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಅ.16ರಿಂದ ಅಕ್ಟೋಬರ್ 26 ರವರೆಗೆ ಜಾನಪದ ದಸರಾ ಅಂಗವಾಗಿ ಇಲ್ಲಿ ಜಾನಪದದ ಅಪರೂಪದ ವಸ್ತುಗಳು ಪ್ರದರ್ಶನಕ್ಕಿಡಲಾಗಿದೆ. ಈ ಜಾನಪದ ದಸರಾವನ್ನು ನ್ಯಾಯಾಧೀಶೆ ನೂರುನ್ನೀಸಾ ಅ.16ರ ಶುಕ್ರವಾರ ಉದ್ಘಾಟಿಸಿದರು. ಹಿರಿಯರನ್ನು ನಿರ್ಲಕ್ಷಿಸುತ್ತಿರುವಂತೆಯೇ ಹಳೇ ಕಾಲದ ವಸ್ತುಗಳನ್ನೂ ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ಇಂಥ ಜಾನಪದ ಪರಿಕರಗಳ ಪ್ರದರ್ಶನದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಜಾನಪದ ವಸ್ತುಗಳ ಸಂಗ್ರಾಹಕ ಪೊನ್ನಚ್ಚನ ಮಧು ಮಾತನಾಡಿ, ತಾನು ಹಳೇ ವಸ್ತುಗಳ ಗುಜರಿಗೆ ಹೋದಾಗ ಅಲ್ಲಿದ್ದ ಅರಿಫಾ ಮುನಾವರ್ ಎಂಬ ಅಜ್ಜಿಯೊಬ್ಬರು ಅಪರೂಪದ ಗಡಿಯಾರ ನೀಡಿ ಇದನ್ನು ನಿನ್ನಲ್ಲಿಟ್ಟುಕೋ, ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ಪ್ರಾರಂಭಿಸು ಎಂದದ್ದೇ ತನ್ನ ಸಂಗ್ರಹ ಇಷ್ಟೊಂದು ಬೃಹತ್ತಾಗಿ ಬೆಳೆಯಲು ಕಾರಣ ಎಂದು ಸ್ಮರಿಸಿದರು.
ಹಳೇ ಕಾಲದ ಅನೇಕ ವಸ್ತುಗಳು ಜಾನಪದ ದಸರಾದಲ್ಲಿ ಕಂಗೊಳಿಸುತ್ತಿದ್ದು, ಅಕ್ಟೋಬರ್ 26ರವರೆಗೆ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಸ್ಯಾನಿಟೈಸರ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ.ಮನವಿ ಮಾಡಿದ್ದಾರೆ. ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಸ್ವಾದಿಷ್ಟ ಕಾಫಿ ಕೂಡ ದೊರಕುತ್ತದೆ. ಕಾಫಿ ಹೀರಲು ಮರೆಯದಿರಿ...
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications