ವಿರಾಜಪೇಟೆಯಲ್ಲಿ ಮಾಂಸಕ್ಕಾಗಿ ಮಂಗಗಳ ಬೇಟೆ
ಮಡಿಕೇರಿ, ಜುಲೈ 6: ಮಾಂಸಕ್ಕಾಗಿ ಅರಣ್ಯದಲ್ಲಿದ್ದ ಮಂಗಗಳನ್ನುಬೇಟೆಯಾಡುತ್ತಿದ್ದ ಮೂವರನ್ನು ವಿರಾಜಪೇಟೆ ತೋಮರ ಕೆದಮಳ್ಳೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಕೆದಮಳ್ಳೂರು ಗ್ರಾಮದ ನಿವಾಸಿಗಳಾದ ಜೀವನ್, ಕರುಂಭಯ್ಯ ಮತ್ತು ಉಮೇಶ್ ಮಂಗಗಳನ್ನು ಬೇಟೆಯಾಡಿದ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಕೆದಮಳ್ಳೂರು ಗ್ರಾಮದ ಉಮೇಶ್ ಅವರ ಲೈನ್ ಮನೆಯಲ್ಲಿ ಶೋಧನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮನೆಯಲ್ಲಿ 3 ಕೆ.ಜಿ ಮಂಗನ ಮಾಂಸ ಮತ್ತು ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆಯ ಕೋವಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕೃತ್ಯದಲ್ಲಿ ನಾಲ್ವರು ಆರೋಪಿಗಳು ತೊಡಗಿಕೊಂಡಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1976ರ ಅನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ.












Click it and Unblock the Notifications