ಶನಿವಾರಸಂತೆಯಲ್ಲಿ ಏರ್ಪಟ್ಟ ಮದುವೆಯೋ-ಮಸಣವೋ ಎಂಬ ಸಂದಿಗ್ಧ
ಶನಿವಾರಸಂತೆ, ಜೂನ್ 2: ಸಂದಿಗ್ಧಗಳು ಯಾವ ರೀತಿ ಎದುರಾಗುತ್ತವೆ ಅನ್ನೋದಕ್ಕೆ ಈ ವರದಿ ಒಂದು ನಿದರ್ಶನ. ಮದುವೆ ದಿನವೇ ವಧುವಿನ ಅಜ್ಜ ತೀರಿಕೊಂಡುಬಿಟ್ಟರು. ಮುಹೂರ್ತಕ್ಕೆ ಇನ್ನು ಎರಡು ಗಂಟೆ ಸಮಯ ಇದೆ. ಅಭ್ಯಾಗತರೆಲ್ಲ ಕಲ್ಯಾಣ ಮಂಟಪದಲ್ಲಿದ್ದಾರೆ. ಅಲ್ಲಿನ ಸಂಭ್ರಮ, ನಿರೀಕ್ಷೆಗಳು ಕ್ಷಣಕ್ಷಣಕ್ಕೂ ಕಳೆ ಕಟ್ಟುತ್ತಿರುವಾಗಲೇ ಸಾವಿನ ಸುದ್ದಿ ಎರಗಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾದೇವಿ ಹಾಗೂ ಬಸವರಾಜ್ ದಂಪತಿಯ ಮಗಳ ಮದುವೆ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಗ್ಗೆ ಹತ್ತು ಮೂವತ್ತಕ್ಕೆ ಎಂದು ಮುಹೂರ್ತ ನಿಗದಿಯಾಗಿತ್ತು. ಬಸವರಾಜ್ ಅವರ ತಂದೆ ಅಂದರೆ ವಧುವಿನ ಅಜ್ಜ ಶಕುನಮರಿ ಶೆಟ್ಟಿ ಅವರು ಬೆಳಗ್ಗೆ ಮದುವೆಗೂ ಮೊದಲೇ ಹೃದಯಾಘಾತದಿಂದ ತೀರಿಕೊಂಡರು.[ಮಕ್ಕಳ ಶಿಕ್ಷಣದ ಸಲುವಾಗಿ ಕಿಡ್ನಿ ಮಾರಲು ಮುಂದಾದ ಮಹಾತಾಯಿ]

ಇಷ್ಟೆಲ್ಲ ತಯಾರಿ ಆಗಿದ್ದು, ಒಂದೆರಡು ಗಂಟೆಯಲ್ಲೇ ಮುಗಿಯುವ ಮದುವೆ ನಡೆಸುವುದೋ ಅಥವಾ ನಿಲ್ಲಿಸಿ, ಅಂತ್ಯಕ್ರಿಯೆಗೆ ತೆರಳುವುದೋ ಎಂಬ ಗೊಂದಲ ಕೆಲ ಹೊತ್ತು ಮುಂದುವರಿದು, ಕೊನೆಗೆ ಮಗಳನ್ನು ಧಾರೆ ಎರೆದುಕೊಟ್ಟು ಮುಂದಿನ ಕೆಲಸ ಮಾಡಲು ನಿರ್ಧರಿಸಲಾಯಿತು.[ಮೃತಪಟ್ಟ ಕರುವಿನ ಮುಂದೆ ನಿಂತು ಆ ಆಕಳು ಮಾಡಿದ್ದೇನು?]
ಮದುವೆಗೆ ಬಂದ ಅಭ್ಯಾಗತರು ನವ ದಂಪತಿಯನ್ನು ಹರಸಿ, ಊಟ ಮಾಡಿ ತೆರಳಿದರು. ಆ ನಂತರ ಶಕುನಮರಿ ಶೆಟ್ಟಿ ಅವರ ಅಂತ್ಯಸಂಸ್ಕಾರ ಮುಕ್ತಿಧಾಮದಲ್ಲಿ ನಡೆಯಿತು.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications