ನಟಿ ರಮ್ಯ ವಿರುದ್ಧದ ಪ್ರಕರಣ ವಜಾಗೊಳಿಸಿದ ಕೋರ್ಟ್
ರಮ್ಯಾ ವಿರುದ್ಧ ಸೆಕ್ಷನ್ 124-ಎ ಪ್ರಕಾರ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗಿತ್ತು. ಆದರೆ ರಾಷ್ಟ್ರ ದ್ರೋಹದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಮತ್ತು ಹೇಳಿಕೆ ರಾಷ್ಟ್ರದ್ರೋಹದ ವ್ಯಾಪ್ತಿಗೂ ಬರುವುದಿಲ್ಲ ಎಂದು ಹೇಳಿ ಕೋರ್ಟ್ ಪ್ರಕರಣ ಕೈಬ
ಸೋಮವಾರಪೇಟೆ, ಏಪ್ರಿಲ್ 19: ನಟಿ ರಮ್ಯಾ ವಿರುದ್ಧ ದಾಖಲಾಗಿದ್ದ ದೇಶದ್ರೋಹದ ಪ್ರಕರಣವನ್ನು ಸೋಮವಾರ ಪೇಟೆ ಜೆಎಂಎಫ್ಸಿ ನ್ಯಾಯಾಲಯ ವಜಾಗೊಳಿಸಿದೆ.
2016 ಪಾಕಿಸ್ತಾನಕ್ಕೆ ಭೇಟಿ ನೀಡಿ ಭಾರತಕ್ಕೆ ಬಂದಿದ್ದ ರಮ್ಯಾ "ಪಾಕಿಸ್ತಾನ ನರಕವಲ್ಲ. ಅಲ್ಲೂ ಒಳ್ಳೆಯವರಿದ್ದಾರೆ," ಎಂದು ಹೇಳಿಕೆ ನೀಡಿದ್ದರು. ಈ ಸಂದರ್ಭ ಇಲ್ಲಿನ ವಕೀಲ ಕಾಟ್ನಮನೆ ವಿಠಲ ಗೌಡ, "ರಮ್ಯಾ ಪಾಕಿಸ್ತಾನ ಪರ ಹೇಳಿಕೆ ನೀಡಿ ರಾಷ್ಟ್ರದ್ರೋಹ ಎಸಗಿದ್ದಾರೆ," ಎಂದು ಆರೋಪಿಸಿ ಜೆಎಂಎಫ್ ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ಆಗಸ್ಟ್ 23ರಂದು ಪ್ರಕರಣ ದಾಖಲಿಸಿದ್ದರು.[ಕೊಡವ ಹಾಕಿ ಹಬ್ಬಕ್ಕೆ ಸಜ್ಜಾದ ನಾಪೋಕ್ಲು, ಏ. 17ರಿಂದ ಆರಂಭ]
ರಮ್ಯಾ ವಿರುದ್ಧದ ಈ ಪ್ರಕರಣವನ್ನು ಕಿರಿಯ ಸಿವಿಲ್ ನ್ಯಾಯಾಧೀಶ ಶ್ಯಾಂ ಪ್ರಕಾಶ್ ಮಾರ್ಚ್ 27ರಂದು ವಜಾಗೊಳಿಸಿದ್ದಾರೆ.
ರಮ್ಯಾ ವಿರುದ್ಧ ಸೆಕ್ಷನ್ 124-ಎ ಪ್ರಕಾರ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗಿತ್ತು. ಆದರೆ ರಾಷ್ಟ್ರ ದ್ರೋಹದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಮತ್ತು ಹೇಳಿಕೆ ರಾಷ್ಟ್ರದ್ರೋಹದ ವ್ಯಾಪ್ತಿಗೂ ಬರುವುದಿಲ್ಲ ಎಂದು ಹೇಳಿ ನ್ಯಾಯಾಲಯ ಪ್ರಕರಣವನ್ನು ಕೈಬಿಟ್ಟಿದೆ.[ಕಾಂಗ್ರೆಸ್ ಬಿಡ್ತೀರಾ ಅಂದಿದ್ದಕ್ಕೆ ಅಂಬರೀಷಣ್ಣ ಏನಂದ್ರು ಗೊತ್ತಾ?]
ಪ್ರಕರಣ ವಜಾಗೊಳಿಸುವ ವೇಳೆ, "ಪಾಕಿಸ್ತಾನವನ್ನು ಭಾರತ ಶತ್ರು ರಾಷ್ಟ್ರವೆಂದು ಘೋಷಿಸಿಲ್ಲ. ಪಾಕಿಸ್ತಾನದ ಸೈನಿಕರು ಉಗ್ರರು ನಮ್ಮ ಸೈನಿಕರನ್ನು ಕೊಂದಿರಬಹುದು. ಹಾಗೆಂದ ಮಾತ್ರಕ್ಕೆ ಅಲ್ಲಿನ ಜನರನ್ನು ತಪ್ಪಿತಸ್ಥರು ಎನ್ನಲು ಸಾಧ್ಯವಿಲ್ಲ," ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆದರೆ ನ್ಯಾಯಾಲಯದ ಆದೇಶವನ್ನು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಕಾಟ್ನಮನೆ ವಿಠಲಗೌಡ ಹೇಳಿದ್ದಾರೆ.