ಎಂಥ ಸುದ್ದಿ! ಮನುಷ್ಯನೊಂದಿಗೆ ನೀರುಕಾಗೆಯ ಕುಚುಕು ಸ್ನೇಹ!
ಕೊಡಗು, ಅಕ್ಟೋಬರ್ 30: ಸ್ನೇಹಕ್ಕೆ ಜಾತಿ, ಭಾಷೆ, ಪ್ರಭೇದದ ಹಂಗಿಲ್ಲ! ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಎಂಬಲ್ಲಿ ನೀರುಕಾಗೆಯೊಂದು ವ್ಯಕ್ತಿಯೊಬ್ಬರೊಂದಿಗೆ ಕುಚುಕು ಕುಚುಕು ಎಂಬಷ್ಟು ಸ್ನೇಹ ಬೆಳೆಸಿಕೊಂಡಿದೆ!
ನೀರಿನೊಳಗೆ ಈಜಾಡುತ್ತಾ ಮೀನು, ಹುಳ ಹುಪ್ಪಟೆಗಳನ್ನು ತಿಂದು ಬದುಕಬೇಕಿದ್ದ ಕಪ್ಪಗಿನ ನೀರುಕಾಗೆ ಮರಿಯೊಂದು ಹಂಸ ಎಂಬ ವ್ಯಕ್ತಿಯೊಂದಿಗೆಯೊಂದಿಗೆ ಸ್ನೇಹತ್ವವನ್ನು ಬೆಳೆಸಿಕೊಂಡಿದೆ.

ಕಾರ್ಮಿಕರಾಗಿರುವ ಹಂಸ ಎಂಬುವವರಿಗೆ ಗಿಳಿಶಾಸ್ತ್ರದವನೊಂದಿಗೆ ಬಂದ ವ್ಯಕ್ತಿಯೊಬ್ಬರು ಈ ನೀರಕಾಗೆಮರಿಯನ್ನು ನೀಡಿದ್ದರು. ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ಸಾಕಿ, ಬೆಳೆಸುತ್ತಿದ್ದ ಹಂಸ ಈ ನೀರು ಕಾಗೆಯನ್ನು ಪಡೆದು ಮನೆಯಲ್ಲಿ ಪ್ರೀತಿಯಿಂದ ಸಾಕತೊಡಗಿದರು. ಅದಕ್ಕೆ ಬೇಕಾದ ಹಸಿ ಹಾಗು ಒಣಗಿದ ಮೀನನ್ನು ಖರೀದಿಸಿ ತಂದು, ತುಂಡಾಗಿ ಮಾಡಿ ನೀಡುತ್ತಾರೆ. ಹಸ ಅವರ ಬೆನ್ನಮೇಲೆ, ಭುಜದ ಮೇಲೆ ಕೂತಿ ಈ ನೀರುಕಾಗೆ ಪ್ರೀತಿಯಿಂದ ರೆಕ್ಕೆಪಡಿಯುತ್ತ ತನ್ನ ಸಂತಸ ವ್ಯಕ್ತಪಡಿಸುತ್ತದೆ. 'ಪುಟ್ಟಿ' ಎಂದು ನಾಮಕರಣಗೊಂಡ ನೀರುಕಾಗೆ, ಹಂಸನ ಬೆಂಗಾವಲು ಎಂಬತೆ ಆತ ಎಲ್ಲಿ ಹೋದರೂ ಆತನನ್ನು ಅನುಸರಿಸುತ್ತದೆ!

ಒಟ್ಟಿನಲ್ಲಿ ಸ್ನೇಹಕ್ಕೆ ಯಾವ ಅಡೆತಡೆಯ ಹಂಗಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications