Get Updates
Get notified of breaking news, exclusive insights, and must-see stories!

ನಾಪತ್ತೆಯಾಗಿದ್ದ ಕೋವಿಡ್ ರೋಗಿಯ ಮೃತದೇಹ ಪತ್ತೆ: ಕಿಡ್ನಿ ಕದಿಯಲು ಆಸ್ಪತ್ರೆ ಸಿಬ್ಬಂದಿಯಿಂದಲೇ ಕೊಲೆ?

ವಾರಣಾಸಿ, ಆಗಸ್ಟ್ 25: ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಬಲಿಯಾದವರ ದೇಹಗಳ ಹಸ್ತಾಂತರ ಮಾಡುವ ಪ್ರಕರಣಗಳು ಸಾಕಷ್ಟು ವಿವಾದ ಸೃಷ್ಟಿಸುತ್ತಿವೆ. ಕುಟುಂಬದವರಿಗೆ ಮಾಹಿತಿ ನೀಡದೆಯೇ ಅಂತ್ಯಸಂಸ್ಕಾರ ನಡೆಸಿದ ಹಲವು ಪ್ರಕರಣಗಳಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ಮೃತರ ದೇಹವನ್ನು ಕೊನೆಯ ಬಾರಿಗೆ ನೋಡಲು ಕೂಡ ದುಡ್ಡು ಕೇಳಿದ ಆಸ್ಪತ್ರೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Recommended Video

      Annamalai IPS : ಕಮಲ ಹಿಡಿದು ಕಮಾಲ್ ಮಾಡ್ತಾರ ಸಿಂಗಂ | Oneindia Kannada

      ಕೊರೊನಾದಿಂದ ಮೃತಪಟ್ಟಿದ್ದಾರೆ ಎನ್ನಲಾದ ವ್ಯಕ್ತಿಗಳ ಮೃತದೇಹವನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಸುತ್ತಿರಲಾಗುತ್ತದೆ. ಅವರ ಅಂಗಾಂಗಗಳನ್ನು ಕಳವು ಮಾಡಿದ್ದರೂ ಇದರಿಂದ ಗೊತ್ತಾಗುವುದಿಲ್ಲ ಎಂಬ ಅನುಮಾನಗಳು ಹೆಚ್ಚಾಗುತ್ತಿವೆ. ಅದಕ್ಕೆ ಪೂರಕವೆಂಬಂತಹ ಘಟನೆಯೊಂದು ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರದಲ್ಲಿಯೇ ನಡೆದಿದೆ.

      ಉತ್ತರ ಪ್ರದೇಶದ ವಾರಣಾಸಿಯ ಆಸ್ಪತ್ರೆಯೊಂದರಿಂದ ಕಣ್ಮರೆಯಾಗಿದ್ದ ಕೋವಿಡ್ ರೋಗಿಯ ದೇಹ ಒಂದು ದಿನದ ಬಳಿಕ ಸಮೀಪದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಚರಂಡಿಯೊಂದರಲ್ಲಿ ಪತ್ತೆಯಾಗಿದೆ. ಮುಂದೆ ಓದಿ...

      ನಾಪತ್ತೆಯಾಗಿದ್ದ ರೋಗಿ

      ನಾಪತ್ತೆಯಾಗಿದ್ದ ರೋಗಿ

      ವಾರಣಾಸಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಆಘಾತಕಾರಿ ಬೆಳವಣಿಗೆಯಲ್ಲಿ ಅವರು ಕಣ್ಮರೆಯಾಗಿ ಮರುದಿನ ವಾರಣಾಸಿಯ ಚರಂಡಿಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

      ಚರಂಡಿಯಲ್ಲಿ ಮೃತದೇಹ ಪತ್ತೆ

      ಚರಂಡಿಯಲ್ಲಿ ಮೃತದೇಹ ಪತ್ತೆ

      ನಗರದ ಬಿಎಚ್‌ಯು ಕೋವಿಡ್ ಆಸ್ಪತ್ರೆಯ ಸಮೀಪದ ಚರಂಡಿ ಸಾಲಿನಲ್ಲಿ ಸೋಮವಾರ ರೋಗಿಯ ಮೃತದೇಹ ದೊರಕಿದೆ. ಈ ಘಟನೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ರೋಗಿಯ ಅಂಗಾಂಗಗಳನ್ನು ಕದಿಯುವ ಸಲುವಾಗಿ ಅವರನ್ನು ಆಸ್ಪತ್ರೆ ಅಧಿಕಾರಿಗಳು ಕೊಂದು ಹಾಕಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

      ಕಿಡ್ನಿ ಕದಿಯಲು ಕೊಲೆ

      ಕಿಡ್ನಿ ಕದಿಯಲು ಕೊಲೆ

      ರೋಗಿಯ ಕಿಡ್ನಿಗಳನ್ನು ಕದಿಯಲು ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ ಕುಟುಂಬದವರು, ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಾಂಧಲೆ ನಡೆಸಿದ್ದಾರೆ. ಸುತ್ತಲಿನ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿ ಕುಟುಂಬದವರನ್ನು ಸಮಾಧಾನಪಡಿಸಿದರು.

      ಆಸ್ಪತ್ರೆಯಿಂದ ನಾಪತ್ತೆ

      ಆಸ್ಪತ್ರೆಯಿಂದ ನಾಪತ್ತೆ

      ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಬಿಎಚ್‌ಯು ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿದ್ದ ವ್ಯಕ್ತಿ ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ದಾಫಿಯ ಲಂಕಾ ಪೊಲೀಸ್ ಠಾಣೆಯಲ್ಲಿ ಕುಟುಂಬದವರು ಕಾಣೆಯಾದ ಬಗ್ಗೆ ದೂರು ನೀಡಿದ್ದರು.

      ಅಪಘಾತದಲ್ಲಿ ಗಾಯಗೊಂಡಿದ್ದರು

      ಅಪಘಾತದಲ್ಲಿ ಗಾಯಗೊಂಡಿದ್ದರು

      ಅಪಘಾತವೊಂದರಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಕಳೆದ ವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಬಳಿಕ ಕಂಡುಬಂದಿತ್ತು. ಇದರಿಂದ ಅವರನ್ನು ಆಸ್ಪತ್ರೆಯ ಕೋವಿಡ್ ಐಸೋಲೇಷನ್ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಭಾನುವಾರ ಅವರು ನಾಪತ್ತೆಯಾಗಿರುವುದು ಗೊತ್ತಾದ ಬಳಿಕ ತೀವ್ರ ಹುಡುಕಾಟ ನಡೆಸಲಾಗಿತ್ತು. ಆಸ್ಪತ್ರೆಯ ಚರಂಡಿ ಸಾಲಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+