'ಮಾಂಸಹಾರ ನಿಷೇಧ': ಆದೇಶ ಹೊರಡಿಸಿದ ಜಿಲ್ಲಾಧಿಕಾರಿ
ಉತ್ತರ ಪ್ರದೇಶ, ಮಾರ್ಚ್ 6: ಕೊರೊನಾ ವೈರಸ್ನಿಂದ ಭಯಭೀತರಾಗಿ ಎಲ್ಲರೂ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಮುಜಫರ್ನಲ್ಲಿ ಸಂಪೂರ್ಣವಾಗಿ ಮಾಂಸಹಾರ ನಿಷೇಧ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮುಜಫರ್ ಜಿಲ್ಲಾಧಿಕಾರಿ ಸೆಲ್ವಾ ಕುಮಾರಿ ಜೆ ಮಾಂಸಹಾರ ನಿಷೇಧದ ಆದೇಶ ಹೊರಡಿಸಿದ್ದಾರೆ. ಮಾರುಕಟ್ಟೆಗಳಲ್ಲಿ ಮಾಂಸ, ಮೀನುಗಳನ್ನು ಮಾರಾಟ ಮಾಡದೆ ಇರುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ಹಣ್ಣು, ತರಕಾರಿಗಳನ್ನು ಸಹ ತೆರೆದ ಪ್ರದೇಶದಲ್ಲಿ ಮಾರಾಟ ಮಾಡಲು ಅವಕಾಶ ನೀಡುತ್ತಿಲ್ಲ.
ಭಾರತದಲ್ಲಿಯೂ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇಂದ್ರ ಆರೋಗ್ಯ ಇಲಾಖೆಯ ನಿಯಮಗಳನ್ನು ಉತ್ತರ ಪ್ರದೇಶ ಸರ್ಕಾರ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಜಿಲ್ಲಾಧಿಕಾರಿ ಸೆಲ್ವಾ ಕುಮಾರಿ ಜೆ ಆಹಾರ ಮಾರಾಟ ವಿಚಾರದಲ್ಲಿ ಒಂದು ಕಣ್ಣು ಇಟ್ಟಿದ್ದಾರೆ.

ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈವರೆಗೆ ವಿಶ್ವದ 3383 ಜನರು ಕೊರೊನಾ ವೈರಸ್ ನಿಂದ ಮರಣಹೊಂದಿದ್ದಾರೆ.












Click it and Unblock the Notifications