Get Updates
Get notified of breaking news, exclusive insights, and must-see stories!

ಯುಪಿಯಲ್ಲಿ ಬ್ರಾಹ್ಮಣರ ಮತಕ್ಕೆ ಬಲೆ: ವಿಪಕ್ಷದ ಓಲೈಕೆ, ಬಿಜೆಪಿಯಿಂದ ಉಳಿಸಿಕೊಳ್ಳುವ ಪ್ರಯತ್ನ

ಲಕ್ನೋ, ಜು. 30: ಬಹಳ ಹಿಂದೆಯೇ, ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು ನಿರ್ಲಕ್ಷ್ಯ ಮತ್ತು ದಬ್ಬಾಳಿಕೆಯ ಬಗ್ಗೆ ದೂರು ನೀಡುತ್ತಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿಯ ನಾಲ್ಕು ವರ್ಷಗಳ ಆಡಳಿತದಲ್ಲಿ ಹಲವಾರು ಬ್ರಾಹ್ಮಣರ ಕೊಲೆಯಾಗಿದೆ ಎಂದು ಸಮುದಾಯದ ನಾಯಕರು ಹೇಳಿಕೊಂಡಿದ್ದಾರೆ. ಈ ನಡುವೆ ದರೋಡೆಕೋರ ವಿಕಾಸ್ ದುಬೆ ಎನ್‌ಕೌಂಟರ್‌ ಕೂಡಾ ಉತ್ತರ ಪ್ರದೇಶದಲ್ಲಿ ಜಾತಿ ಬಣ್ಣವನ್ನು ಪಡೆದುಕೊಂಡಿದೆ.

ಇವೆಲ್ಲದರವ ನಡುವೆ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಏಳು ತಿಂಗಳು ಇರುವಾಗ ಬ್ರಾಹ್ಮಣರು ಇದ್ದಕ್ಕಿದ್ದಂತೆ ಹೆಚ್ಚು ಬೇಡಿಕೆಯಿರುವ ಸಮುದಾಯವಾಗಿದ್ದಾರೆ. ಎಲ್ಲಾ ಪಕ್ಷಗಳು ಬ್ರಾಹ್ಮಣರ ಮತ ಪಡೆಯಲು ಬೇಕಾದ ಎಲ್ಲಾ ತಂತ್ರಗಳನ್ನು ಮಾಡುತ್ತಿದೆ. ಇತ್ತ ಬಿಜೆಪಿ ತನ್ನ ಮತ ಬ್ಯಾಂಕ್‌ ಉಳಿಸುಕೊಳ್ಳುವ ತೀವ್ರ ಪ್ರಯತ್ನ ಮಾಡುತ್ತಿದೆ. ಬಹುಜನ ಸಮಾಜ ಪಕ್ಷವು ಬ್ರಾಹ್ಮಣ ಸಮ್ಮೇಳನ ಅಥವಾ ಸಮಾವೇಶಗಳನ್ನು ನಡೆಸುತ್ತಿದೆ. ಸಮಾಜವಾದಿ ಪಕ್ಷವು ಹಲವು ಜಿಲ್ಲೆಗಳಲ್ಲಿ ಪ್ರಬುದ್ಧ ಸಮ್ಮೇಳನಗಳನ್ನು ('ಬೌದ್ಧಿಕ ಸಭೆಗಳು', ಮುಖ್ಯವಾಗಿ ಬ್ರಾಹ್ಮಣರ ಮೇಲೆ ಕೇಂದ್ರೀಕರಿಸಲು) ಆಯೋಜಿಸಲು ಸಿದ್ಧತೆ ನಡೆಸುತ್ತಿದೆ.

ಈ ನಡುವೆ ಕಾಂಗ್ರೆಸ್‌ ಬ್ರಾಹ್ಮಣ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಸ್ತಾಪ ಮಾಡುವ ಕಾರ್ಯತಂತ್ರ ರೂಪಿಸಲು ಸಿದ್ದತೆ ನಡೆಸಿದೆ. ಈ ಎಲ್ಲಾ ವಿಪಕ್ಷಗಳ ತಂತ್ರದ ನಡುವೆ ತನ್ನ ಸರ್ಕಾರ ಬ್ರಾಹ್ಮಣರ ಮೇಲೆ ದೌರ್ಜನ್ಯ ನಡೆಸಿದೆ ಎಂದು ಆರೋಪದಿಂದ ಹೊರಬರಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ಈಗ ಪ್ರಮುಖ ಬ್ರಾಹ್ಮಣ ನಾಯಕ ಜಿತಿನ್ ಪ್ರಸಾದರನ್ನು ಈಗಾಗಲೇ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ.

ಇದ್ದಕ್ಕಿದ್ದಂತೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಇಷ್ಟೊಂದು ಬೇಡಿಕೆ ಬಂದಿದ್ದು ಹೇಗೆ? ಕಾರಣ ಮಾತ್ರ ಬಹಳ ಸ್ಪಷ್ಟವಾಗಿದೆ. ರಾಜ್ಯದ ಜನಸಂಖ್ಯೆಯು ಶೇಕಡ 12 ರಷ್ಟಿದ್ದಾರೆ. ಹಲವಾರು ಅಸೆಂಬ್ಲಿ ವಿಭಾಗಗಳಲ್ಲಿ, ಶೇಕಡ 20 ಕ್ಕಿಂತ ಹೆಚ್ಚು ಮತ ಹಂಚಿಕೆಯನ್ನು ಹೊಂದಿದ್ದಾರೆ.

 ಬೆಂಕಿಯಲ್ಲಿರುವ ಯೋಗಿ ಸರ್ಕಾರ

ಬೆಂಕಿಯಲ್ಲಿರುವ ಯೋಗಿ ಸರ್ಕಾರ

2017 ರಿಂದ, ಬ್ರಾಹ್ಮಣ ಸಮುದಾಯವು ಉತ್ತರಪ್ರದೇಶದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ ಹಾಗೂ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಬ್ರಾಹ್ಮಣ ಸಮುದಾಯವು ಹೊರಗುಳಿಯುತ್ತಿದೆ ಎಂಬ ಭಾವನೆಯೂ ಸಮುದಾಯದೊಳಗೆ ಹುಟ್ಟಿಕೊಂಡಿದೆ. ಈ ಸಮುದಾಯದಲ್ಲಿ ಅಸಮಾಧಾನ ಹುಟ್ಟಿಕೊಳ್ಳಲು ಪ್ರಮುಖ ಕಾರಣ ದರೋಡೆಕೋರ ವಿಕಾಸ್ ದುಬೆ ಎನ್‌ಕೌಂಟರ್‌. 2020 ರಲ್ಲಿ ದರೋಡೆಕೋರ ವಿಕಾಸ್ ದುಬೆ ಎನ್‌ಕೌಂಟರ್‌ ಬಳಿಕ ಈ ಸರ್ಕಾರ ತಮ್ಮ ಕಡೆಗಣಿಸುತ್ತಿದೆ ಎಂಬ ಮಾತು ಚಿಗುರೊಡೆಯಿತು.

ಹಲವಾರು ಬ್ರಾಹ್ಮಣ ಸಂಘಟನೆಗಳು ಎನ್‌ಕೌಂಟರ್‌ ಅನ್ನು ಖಂಡಿಸಿವೆ ಮತ್ತು ಈ ವಿಷಯದಲ್ಲಿ ನ್ಯಾಯಯುತ ವಿಚಾರಣೆಗೆ ಮನವಿ ಮಾಡಿದೆ. "ಆದಿತ್ಯನಾಥ್ ಸರ್ಕಾರದ ಆಡಳಿತದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 500 ಕ್ಕೂ ಹೆಚ್ಚು ಬ್ರಾಹ್ಮಣರು ಹತರಾಗಿದ್ದಾರೆ," ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ (ರ) ಅಧ್ಯಕ್ಷ ರಾಜೇಂದ್ರ ನಾಥ್ ತ್ರಿಪಾಠಿ ಆರೋಪಿಸಿದ್ದಾರೆ. ಹಿಂದಿನ ಸರ್ಕಾರಗಳಲ್ಲೂ ಬ್ರಾಹ್ಮಣರ ಮೇಲೆ ದೌರ್ಜನ್ಯ ನಡೆದಿತ್ತು. ಆದರೆ "ಈ ಸರ್ಕಾರದ ಅಡಿಯಲ್ಲಿ ಇಂತಹ ಘಟನೆಗಳ ಸಂಖ್ಯೆ ತೀವ್ರತರವಾಗಿ ಹೆಚ್ಚಾಗಿದೆ," ಎಂದು ತ್ರಿಪಾಠಿ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ. ಹಾಗೆಯೇ "ಬ್ರಾಹ್ಮಣ ಸಮುದಾಯದಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ದದ ಭುಗಿಳೆದ್ದ ಆಕ್ರೋಶಕ್ಕೆ ಇದು ಮುಖ್ಯ ಕಾರಣವಾಗಿದೆ," ಎಂದು ತ್ರಿಪಾಠಿ ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ಮಧ್ಯೆ ರಾಜಕೀಯ ಲಾಭ ಪಡೆದುಕೊಳ್ಳುವ ಯತ್ನವನ್ನು ಮುಂದುವರಿಸಿದ ಕಾಂಗ್ರೆಸ್‌ ಬಹಳ ಎಚ್ಚರಿಕೆಯಿಂದ ಹೆಜ್ಜೆ ಮುಂದಿರಿಸಿದೆ. ಆಗಿನ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಬ್ರಾಹ್ಮಣ ಹಕ್ಕುಗಳಿಗಾಗಿ ಹೋರಾಡಲು ಬ್ರಾಹ್ಮಣ ಚೇತನ ಪರಿಷತ್ ಅನ್ನು ಜುಲೈ 2020 ರಲ್ಲಿ ಆರಂಭಿಸಿದ್ದರು. ಅಕ್ಟೋಬರ್ 2020 ರಲ್ಲಿ ತಮ್ಮ 'ಬ್ರಾಹ್ಮಣ ಚೇತನ ಪರಿಷತ್' ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ 'ಟಿ -20' ತಂಡಗಳನ್ನು ರಚಿಸುವ ನಿರ್ಧಾರವನ್ನು ಘೋಷಿಸಿದರು. ಸಮುದಾಯದಲ್ಲಿ ಕಾನೂನು ಹೋರಾಟ ನಡೆಸುತ್ತಿರುವವರಿಗೆ ನೆರವು ನೀಡಿದರು.

 ಬಿಜೆಪಿ ಸರ್ಕಾರದ ವಿರುದ್ದ ಬ್ರಾಹ್ಮಣರ ಆಕ್ರೋಶ

ಬಿಜೆಪಿ ಸರ್ಕಾರದ ವಿರುದ್ದ ಬ್ರಾಹ್ಮಣರ ಆಕ್ರೋಶ

ಬ್ರಾಹ್ಮಣರ ಅಸಮಾಧಾನಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಯೋಗಿ ಆದಿತ್ಯನಾಥರ ಅಡಿಯಲ್ಲಿ ಬಿಜೆಪಿ ರಾಜಕೀಯದಲ್ಲಿ ಬ್ರಾಹ್ಮಣ ಸಮುದಾಯದ ಪ್ರಭಾವ ಕಡಿಮೆಯಾಗುತ್ತಿದೆ ಎಂಬುದಾಗಿದೆ. ಯುಪಿಯಲ್ಲಿನ 53 ಸದಸ್ಯರ ಸಂಸತ್ತಿನಲ್ಲಿ, ಒಂಬತ್ತು ಮಂದಿ ಬ್ರಾಹ್ಮಣರು. ಆದರೆ ದಿನೇಶ್ ಶರ್ಮಾ, ಶ್ರೀಕಾಂತ್ ಶರ್ಮಾ ಮತ್ತು ಬ್ರಜೇಶ್ ಪಾಠಕ್ ಮಾತ್ರ ಮುಖ್ಯವಾದ ಖಾತೆಗಳನ್ನು ಹೊಂದಿದ್ದಾರೆ, ಕ್ರಮವಾಗಿ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ, ಅಧಿಕಾರ ಮತ್ತು ಕಾನೂನು ಖಾತೆ ಹೊಂದಿದ್ದಾರೆ.

ಉಳಿದವರೆಲ್ಲರೂ ರಾಜ್ಯ ಸಚಿವರುಗಳು ಆಗಿದ್ದಾರೆ. ರಾಮ್ ನರೇಶ್ ಅಗ್ನಿಹೋತ್ರಿ (ಅಬಕಾರಿ), ನೀಲಕಂಠ ತಿವಾರಿ (ಪ್ರವಾಸೋದ್ಯಮ ಮತ್ತು ಸಂಸ್ಕೃತಿ, ಸ್ವತಂತ್ರ ಶುಲ್ಕ), ಸತೀಶ್ ದ್ವಿವೇದಿ (ಮೂಲ ಶಿಕ್ಷಣ), ಅನಿಲ್ ಶರ್ಮಾ (ಅರಣ್ಯ, ಪರಿಸರ), ಚಂದ್ರಿಕಾ ಪ್ರಸಾದ್ ಉಪಾಧ್ಯಾಯ (ಲೋಕೋಪಯೋಗಿ), ಮತ್ತು ಆನಂದ ಸ್ವರೂಪ್ ಶುಕ್ಲಾ (ಗ್ರಾಮೀಣ ಅಭಿವೃದ್ಧಿ) ಈ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಈ ಪೈಕಿ ಯಾರನ್ನೂ ಕೂಡಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಆಪ್ತರು ಎಂದು ಪರಿಗಣಿಸಲಾಗಿಲ್ಲ.

"ಈ ಆಡಳಿತದಲ್ಲಿ, ವಿಶೇಷವಾಗಿ ರಾಜಕೀಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಬ್ರಾಹ್ಮಣರ ವಿಭಾಗವನ್ನು ನಿರ್ಲಕ್ಷಿಸಲಾಗಿದೆ ಎಂದು ಬ್ರಾಹ್ಮಣರ ಒಂದು ಭಾಗ ಭಾವಿಸುತ್ತಿದೆ ಎಂಬುದು ನಿಜ" ಎಂದು ಅನಾಮಧೇಯತೆಯ ಸ್ಥಿತಿಯ ಬಗ್ಗೆ ಬಿಜೆಪಿ ಶಾಸಕರೊಬ್ಬರು ಹೇಳಿದರು. "ಈ ಹಿನ್ನೆಲೆ ಉತ್ತಮ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಅವುಗಳನ್ನು ತಡೆಯಲು ನಾವು ಸಾಕಷ್ಟು ಪ್ರಯತ್ನಿಸಬೇಕು. ಪಕ್ಷವು ಅದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತದೆ. ಪಕ್ಷವು ಟಿಕೆಟ್ ಹಂಚಿಕೆ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಬ್ರಾಹ್ಮಣ ಮತಗಳು ವಿಭಜನೆಯಾದರೆ, ಮತ್ತೆ ಇಷ್ಟು ದೊಡ್ಡ ಬಹುಮತದೊಂದಿಗೆ ಗೆಲ್ಲುವುದು ಸುಲಭವಲ್ಲ," ಎಂದು ಅಭಿಪ್ರಾಯಿಸಿದ್ದಾರೆ.

 ವಿಪಕ್ಷಗಳ ಕಾರ್ಯತಂತ್ರ

ವಿಪಕ್ಷಗಳ ಕಾರ್ಯತಂತ್ರ

ಆಡಳಿತಾರೂಢ ಬಿಜೆಪಿಯ ಮೇಲೆ ಬ್ರಾಹ್ಮಣ ಆಕ್ರೋಶವನ್ನು ಬಳಸಿಕೊಳ್ಳಲು ವಿರೋಧ ಪಕ್ಷಗಳು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಬ್ರಾಹ್ಮಣ ವಿರೋಧಿ ಸರ್ಕಾರವೆಂದು ಸಮುದಾಯದಲ್ಲಿ ಆಕ್ರೋಶ ಎದ್ದಿರುವಾಗ ಯೋಗಿ ಸರ್ಕಾರವನ್ನು ಬ್ರಾಹ್ಮಣ ವಿರೋಧಿ ಎಂದು ಬಿಂಬಿಸಲು ಪಕ್ಷಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಇತ್ತೀಚೆಗೆ ಆಡಳಿತಾರೂಢ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತಗಳ ಸಹಾಯದಿಂದ ಗೆದ್ದ ನಂತರ "ಸಮುದಾಯಕ್ಕೆ ಕಿರುಕುಳ ಮತ್ತು ಶೋಷಣೆ ಮಾಡುತ್ತಿದ್ದಾರೆ," ಎಂದು ಆರೋಪಿಸಿದರು.

"ಬಿಜೆಪಿ ಬ್ರಾಹ್ಮಣರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. ಆದರೆ ಸಮುದಾಯದ ಹಿತಕ್ಕಾಗಿ ಕೆಲಸ ಮಾಡುವ ಬದಲು ಅದು ಸಮುದಾಯದ ಜನರ ಮೇಲೆ ದೌರ್ಜನ್ಯ ಎಸಗಿದೆ. ಸಮುದಾಯದ ಹಲವಾರು ಮಂದಿ ಕಿರುಕುಳ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆ. ಬಿಜೆಪಿಗೆ ತಮ್ಮ ಬೆಂಬಲದಿಂದ ಪಶ್ಚಾತ್ತಾಪ ಪಡುತ್ತಿದ್ದಾರೆ. ಅದಕ್ಕಾಗಿಯೇ ಬಿಎಸ್‌ಪಿ ಈಗ ಬ್ರಾಹ್ಮಣ ಸಮುದಾಯವನ್ನು ಮತ್ತೊಮ್ಮೆ ಜಾಗೃತಗೊಳಿಸಲು ಸಮ್ಮೇಳನಗಳನ್ನು ಮಾಡಲು ಹೊರಟಿದೆ," ಎಂದು ಹೇಳಿದರು.

ಸಮಾಜವಾದಿ ಪಕ್ಷದ ಶಾಸಕ ಮನೋಜ್ ಪಾಂಡೆ ಯೋಗಿ ಸರ್ಕಾರದ ಅಡಿಯಲ್ಲಿ, ಬ್ರಾಹ್ಮಣರು ಸಹ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿರಲಿಲ್ಲ. ಈ ಆಡಳಿತದಲ್ಲಿ ಬ್ರಾಹ್ಮಣರು ಸಾಕಷ್ಟು ದೌರ್ಜನ್ಯಗಳನ್ನು ಎದುರಿಸಿದ್ದಾರೆ. ಯಾವುದೇ ಪ್ರಮುಖ ರಾಜಕೀಯ ಪ್ರಾತಿನಿಧ್ಯವಿಲ್ಲ ಬದಲಾಗಿ ಕೊಲೆಗಳು ಮತ್ತು ಎನ್‌ಕೌಂಟರ್‌ಗಳಷ್ಟೇ. ಹೆಚ್ಚಿನ ಸಂಖ್ಯೆಯ ಬ್ರಾಹ್ಮಣರು ಸಮಾಜವಾದಿ ಪಕ್ಷಕ್ಕೆ ಮತ ಹಾಕುತ್ತಾರೆ," ಎಂದು ಹೇಳಿಕೊಂಡಿದ್ದಾರೆ. "ನಾವು ಆಗಸ್ಟ್ 23 ರಂದು ಬಲಿಯಾದಿಂದ ಪ್ರಾರಂಭಿಸಿ ಪ್ರಭುದ್ ಜನ್ ಸಮ್ಮೇಳನಗಳನ್ನು ನಡೆಸಲಿದ್ದೇವೆ. ನಾವು ಇದನ್ನು ಇತರ ಜಿಲ್ಲೆಗಳಲ್ಲೂ ಆಯೋಜಿಸುತ್ತೇವೆ. ನಾವು ಇಂತಹ ಸಮ್ಮೇಳನಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ನಾನೇ 1997 ರಿಂದ ಅವುಗಳನ್ನು ಸಂಘಟಿಸುತ್ತಿದ್ದೇನೆ," ಎಂದೂ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ವರಿಷ್ಠ ಪ್ರಮೋದ್ ತಿವಾರಿ ಇತರ ಪಕ್ಷಗಳು ಬ್ರಾಹ್ಮಣರ ವಿರುದ್ಧ ಕೇವಲ ಓಲೈಕೆಯ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. "ಬ್ರಾಹ್ಮಣರಿಗೆ ಬಿಜೆಪಿ ಏನು ಮಾಡಿದೆ? ಬಿಎಸ್‌ಪಿ ಕೂಡ ಏನು ಮಾಡಿದೆ? ಇಲ್ಲಿಯವರೆಗೆ ಬ್ರಾಹ್ಮಣ ಸಿಎಂರನ್ನು ನೇಮಿಸಿದ್ದಾರೆಯೇ?," ಎಂದು ಪ್ರಶ್ನಿಸಿದ ತಿವಾರಿ "ಕಮಲಪತಿ ತ್ರಿಪಾಠಿ ಮತ್ತು ಎನ್ ಡಿ ತಿವಾರಿ ಸೇರಿದಂತೆ ಆರು ಬ್ರಾಹ್ಮಣ ಮುಖ್ಯಮಂತ್ರಿಗಳನ್ನು ನೀಡಿದ ಏಕೈಕ ಕಾಂಗ್ರೆಸ್ ಪಕ್ಷ ಇದು," ಎಂದಿದ್ದಾರೆ. ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ಪಕ್ಷವು ಶೀಘ್ರದಲ್ಲೇ ಬ್ರಾಹ್ಮಣ ಅಭ್ಯರ್ಥಿಯನ್ನು ಘೋಷಿಸಬಹುದು ಎಂದು ಯುಪಿ ಕಾಂಗ್ರೆಸ್ ಮೂಲಗಳು ಮಾಧ್ಯಮವೊಂದಕ್ಕೆ ತಿಳಿಸಿವೆ.

ಪ್ರತಿಪಕ್ಷಗಳ ಈ ಆರೋಪಕ್ಕೆ ಪ್ರತಿಯಾಗಿ, ಯುಪಿ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಎಸ್‌ಪಿ ಮತ್ತು ಬಿಎಸ್‌ಪಿ ಎರಡೂ ಜಾತಿ ಆಧಾರಿತ ಪಕ್ಷಗಳು ಎಂದು ದಿ ಪ್ರಿಂಟ್‌ಗೆ ತಿಳಿಸಿದರು. ಆ ಪಕ್ಷಗಳು ಯಾವಾಗಲೂ ಜಾತಿ ಮತ್ತು ಓಲೈಕೆಯ ರಾಜಕೀಯವನ್ನು ಮಾಡುತ್ತಾರೆ. ಬಿಜೆಪಿ ಅಭಿವೃದ್ಧಿಯ ರಾಜಕೀಯವನ್ನು ಮಾಡುತ್ತದೆ," ಎಂದು ಹೇಳಿದ್ದಾರೆ. "ಉತ್ತರ ಪ್ರದೇಶದ ಜನರು, ವಿಶೇಷವಾಗಿ ಬ್ರಾಹ್ಮಣ ಸಮುದಾಯವು ಪ್ರಬುದ್ಧವಾಗಿದೆ. ಜಾತಿಯ ರಾಜಕೀಯಕ್ಕೆ ಬೀಳುವುದಿಲ್ಲ. ರಾಜ್ಯದ ಅಭಿವೃದ್ಧಿ ಮತ್ತು ಭವಿಷ್ಯದ ಜೊತೆ ಹೋಗುತ್ತದೆ. ಯಾವುದೇ ಸಮುದಾಯವು ಈ ಬಾರಿ ವಿರೋಧದ ಬಲೆಗೆ ಬೀಳುವುದಿಲ್ಲ," ಎಂದರು.

 ಬ್ರಾಹ್ಮಣ ಮತಗಳ ಮಹತ್ವ

ಬ್ರಾಹ್ಮಣ ಮತಗಳ ಮಹತ್ವ

ಉತ್ತರಪ್ರದೇಶದಲ್ಲಿ, ಬ್ರಾಹ್ಮಣರು ರಾಜ್ಯದ ಜನಸಂಖ್ಯೆಯ ಶೇಕಡ 10-12ರ ನಡುವೆ ಇದ್ದಾರೆ. ಹಲವಾರು ವಿಧಾನಸಭಾ ವಿಭಾಗಗಳಲ್ಲಿ, ಶೇಕಡ 20 ಕ್ಕಿಂತ ಹೆಚ್ಚು ಮತ ಹಂಚಿಕೆಯನ್ನು ಹೊಂದಿದ್ದಾರೆ. ಯುಪಿ ಮೂಲದ ಹಲವಾರು ಬ್ರಾಹ್ಮಣ ಸಂಘಟನೆಗಳು ತ್ಯಾಗಿಗಳು ಮತ್ತು ಭೂಮಿಹಾರ್‌ಗಳನ್ನು ಬ್ರಾಹ್ಮಣ ಸಮುದಾಯಕ್ಕೆ ಸೇರಿಸಿದರೆ ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆಯು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ರಾಜ್ಯದಲ್ಲಿ ಬ್ರಾಹ್ಮಣರು ಶೇಕಡ 13 ಕ್ಕಿಂತ ಹೆಚ್ಚು ಇದ್ದಾರೆ. ಅತ್ಯಂತ ಪ್ರಭಾವಶಾಲಿ ಏಕ ಜಾತಿಯವರು ಎಂದು ಅಖಿಲ ಭಾರತೀಯ ಬ್ರಾಹ್ಮಣ ಸಂಘಟನೆ ಮಹಾಸಂಘದ ಅಧ್ಯಕ್ಷ ಅಸೀಮ್ ಪಾಂಡೆ ದಿ ಪ್ರಿಂಟ್‌ಗೆ ತಿಳಿಸಿದರು. "ಬ್ರಾಹ್ಮಣರು ಯುಪಿಯಲ್ಲಿ ಜನರನ್ನು ಅಧಿಕಾರಕ್ಕೆ ತರುತ್ತಾರೆ. ಆ ಅಧಿಕಾರದಿಂದ ಕೆಳಗೆ ಕೂಡಾ ಇಳಿಸುತ್ತಾರೆ. ಇದು ರಾಜ್ಯದ ರಾಜಕೀಯ ಇತಿಹಾಸವಾಗಿದೆ," ಎಂದು ಅಸೀಮ್ ಪಾಂಡೆ ಹೇಳಿದ್ದಾರೆ.

ದೆಹಲಿ ಮೂಲದ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟಿಗಳು (ಸಿಎಸ್‌ಡಿಎಸ್‌) ನಡೆಸಿದ ವಿವಿಧ ಅಧ್ಯಯನಗಳು 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಬ್ರಾಹ್ಮಣ ಮತಗಳೆಂದು ಸೂಚಿಸುತ್ತದೆ. ಸಿಎಸ್‌ಡಿಎಸ್‌ ಪ್ರಕಾರ, ಹಿಂದಿನ 2007 ಮತ್ತು 2012 ರ ವಿಧಾನಸಭಾ ಚುನಾವಣೆಗಳಲ್ಲಿ, 40 ಮತ್ತು 38 ಪ್ರತಿಶತ ಬ್ರಾಹ್ಮಣರು ಕ್ರಮವಾಗಿ ಬಿಜೆಪಿಗೆ ಮತ ಹಾಕಿದರು. ಆದರೆ 2017 ರಲ್ಲಿ ಸಮುದಾಯದ ಶೇಕಡ 80 ರಷ್ಟು ಮತಗಳು ಬಿಜೆಪಿ ಪಕ್ಷಕ್ಕೆ ಹೋಗಿದ್ದವು. "ಉದ್ವಿಗ್ನತೆಯ ಹೊರತಾಗಿಯೂ, ಪ್ರೊ. ಅಶುತೋಷ್ ಮಿಶ್ರಾ (ನಿವೃತ್ತ) ವಿರೋಧ ಪಕ್ಷವು ಬ್ರಾಹ್ಮಣರನ್ನು ಬಿಜೆಪಿಯಿಂದ ದೂರ ಮಾಡುವುದು ಕಷ್ಟ," ಎಂದರು.

"ಬ್ರಾಹ್ಮಣರು ರಾಜ್ಯದ ಪ್ರಮುಖ ಮತ-ಬ್ಯಾಂಕ್ ಆದರೆ ಅವರಿಗೆ, ಈ ಮೋದಿ-ಯೋಗಿ ಯುಗದಲ್ಲಿ ಹಿಂದುತ್ವ ಅಂಶಗಳು ಹೆಚ್ಚು ಮುಖ್ಯವಾಗಿವೆ," ಎಂದು ಮಿಶ್ರಾ ಹೇಳಿದರು. "ವಾಸ್ತವವಾಗಿ, ಬ್ರಾಹ್ಮಣರು ಮಾತ್ರವಲ್ಲ ಎಲ್ಲಾ ಮೇಲ್ಜಾತಿಯವರು ಇನ್ನೂ ಬಿಜೆಪಿಯೊಂದಿಗೆ ಇದ್ದಾರೆ. ಹೌದು, ಕೋವಿಡ್ ಸರಿಯಾಗಿ ನಿರ್ವಹಿಸದ ಬಗ್ಗೆ ಕೋಪವಿದೆ ಆದರೆ ಅವರಿಗೆ ಬೇರೆ ಯಾವುದೇ ರಾಜಕೀಯ ಪರ್ಯಾಯಗಳು ಸಿಕ್ಕಿಲ್ಲ," ಎಂದು ಕೂಡಾ ಮಿಶ್ರಾ ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+