ಬಿಜೆಪಿ ಸೋಲಿಸಿ, ಯೋಗಿಯನ್ನು ಉತ್ತರಾಖಂಡಕ್ಕೆ ವಾಪಸ್ ಕಳಿಸಿ: ಅಖಿಲೇಶ್ ಯಾದವ್
ಲಕ್ನೋ,
ಫೆಬ್ರವರಿ
5:
ಉತ್ತರ
ಪ್ರದೇಶ
ವಿಧಾನಸಭಾ
ಚುನಾವಣೆ
ಹಿನ್ನೆಲೆ
ಭಾರತೀಯ
ಜನತಾ
ಪಕ್ಷದ
ವಿರುದ್ಧ
ಸಮಾಜವಾದಿ
ಪಕ್ಷದ
ಮುಖ್ಯಸ್ಥ
ಅಖಿಲೇಶ್
ಯಾದವ್
ವಾಗ್ದಾಳಿ
ಮುಂದುವರಿಸಿದ್ದಾರೆ.
ಲಕ್ನೋದಲ್ಲಿ
ಶುಕ್ರವಾರ
ಮಾತನಾಡಿದ
ಅವರು,
ಆಡಳಿತಾರೂಢ
ಬಿಜೆಪಿ
ಹೇಳಿಕೊಳ್ಳುತ್ತಿರುವಂತೆ
ಅಪರಾಧಿಗಳು
ರಾಜ್ಯದಿಂದ
ಪಲಾಯನ
ಮಾಡುತ್ತಿರುವುದನ್ನು
ಯಾರಾದರೂ
ನೋಡಿದ್ದೀರಾ
ಎಂದು
ಅವರು
ಪ್ರಶ್ನೆ
ಮಾಡಿದ್ದಾರೆ.
ಯುಪಿಯಲ್ಲಿ ನಕಲಿ ಸಮಾಜವಾದಿಗಳು ಅಧಿಕಾರಕ್ಕೆ ಬಂದರೆ ಅಪಾಯ: ಮೋದಿ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಬಿಜೆಪಿಗೆ ಸೋಲನ್ನು ಖಚಿತಪಡಿಸುತ್ತದೆ. ತದನಂತರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉತ್ತರಾಖಂಡಕ್ಕೆ ವಾಪಸ್ ಕಳುಹಿಸಲಾಗುತ್ತದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿ
ವರ್ಸಸ್
ಸೋದರತ್ವದ
ಹೋರಾಟ:
"ಬಾಬಾಸಾಹೇಬ್
ಭೀಮರಾವ್
ಅಂಬೇಡ್ಕರ್
ದೇಶವನ್ನು
ಮುನ್ನೆಡೆಸುವುದಕ್ಕಾಗಿ
ನಮಗೆ
ಸಂವಿಧಾನವನ್ನು
ನೀಡಿದ್ದಾರೆ.
ಈ
ಚುನಾವಣೆಯು
ಸಂವಿಧಾನವನ್ನು
ರಕ್ಷಿಸುವ
ಬಹುಮುಖ್ಯವಾಗಿದೆ.
ಅದಕ್ಕಾಗಿ
ಸಮಾಜವಾದಿ
ಪಕ್ಷವು
ಎಲ್ಲಾ
ಗುಂಪಿನ
ಜನರನ್ನು
ಒಟ್ಟುಗೂಡಿಸಿ
ಕರೆದುಕೊಂಡು
ಹೋಗುತ್ತಿದೆ.
ಈ
ಚುನಾವಣೆಯು
ಬಿಜೆಪಿ
ಹಾಗೂ
ಸೋದರತ್ವದ
ವಿರುದ್ಧ
ನಡೆಯುತ್ತಿರುವ
ಹೋರಾಟ
ಎಂದು
ಎಸ್ಪಿ
ಮುಖ್ಯಸ್ಥ
ಅಖಿಲೇಶ್
ಯಾದವ್,
ತಮ್ಮ
ಮಿತ್ರಪಕ್ಷ
ರಾಷ್ಟ್ರೀಯ
ಲೋಕದಳ
(ಆರ್ಎಲ್ಡಿ)
ಮುಖ್ಯಸ್ಥ
ಜಯಂತ್
ಚೌಧರಿ
ಜೊತೆಗಿನ
ಸುದ್ದಿಗೋಷ್ಠಿಯಲ್ಲಿ
ಹೇಳಿದ್ದಾರೆ.
ಸಿಎಂ
ಯೋಗಿ
ಪೂರ್ವಜರ
ಮೂಲ
ಉಲ್ಲೇಖಿಸಿದ
ಅಖಿಲೇಶ್:
"ಉತ್ತರ
ಪ್ರದೇಶದ
ಮತದಾರರು
ಸಮಸ್ಯೆಗಳ
ಆಧಾರದ
ಮೇಲೆ
ಮತ
ಚಲಾಯಿಸುತ್ತಾರೆ.
ಈಗಿನ
ಮುಖ್ಯಮಂತ್ರಿಯನ್ನು
ಉತ್ತರಾಖಂಡಕ್ಕೆ
ವಾಪಸ್
ಕಳುಹಿಸುತ್ತಾರೆ,"
ಎಂದಿರುವ
ಅಖಿಲೇಶ್
ಯಾದವ್,
ಆ
ಮೂಲಕ
ಉತ್ತರಾಖಂಡದಲ್ಲಿ
ಯೋಗಿ
ಆದಿತ್ಯನಾಥ್
ಪೂರ್ವಜರ
ಮೂಲವನ್ನು
ಉಲ್ಲೇಖಿಸಿದ್ದಾರೆ.
ಓವೈಸಿ
ಕಾರಿನ
ಮೇಲೆ
ಗುಂಡಿನ
ದಾಳಿ
ವಿಚಾರ
ಪ್ರಸ್ತಾಪ:
ಮೀರತ್ನಲ್ಲಿ
ಎಐಎಂಐಎಂ
ಮುಖ್ಯಸ್ಥ
ಅಸಾದುದ್ದೀನ್
ಓವೈಸಿ
ಅವರ
ಕಾರಿನ
ಮೇಲೆ
ನಡೆದ
ಗುಂಡಿನ
ದಾಳಿ
ಕುರಿತು
ಕೇಳಿದ
ಪ್ರಶ್ನೆಗೆ
ಅಖಿಲೇಶ್
ಯಾದವ್
ಉತ್ತರಿಸಿದ್ದು,
ಪ್ರಜಾಪ್ರಭುತ್ವ
ರಾಷ್ಟ್ರದಲ್ಲಿ
ಇಂತಹ
ಘಟನೆಗಳು
ಸಂಭವಿಸಬಾರದು
ಎಂದರು.
''ಕ್ರಿಮಿನಲ್ಗಳು
ಉತ್ತರ
ಪ್ರದೇಶವನ್ನು
ತೊರೆದಿದ್ದಾರೆ
ಎಂದು
ಜನರು
ಹೇಳುತ್ತಿದ್ದಾರೆ,
ಆದರೆ
ಈ
ಕ್ರಿಮಿನಲ್ಗಳು
ರಾಜ್ಯವನ್ನು
ಬಿಡುವಾಗ
ಯಾರಾದರೂ
ನೋಡಿದ್ದೀರಾ?,
ಪ್ರಜಾಪ್ರಭುತ್ವದಲ್ಲಿ
ಹಿಂಸಾಚಾರ
ಒಪ್ಪಿಕೊಳ್ಳುವಂಥದ್ದಲ್ಲ.
ಇದು
ರಾಜ್ಯದ
ಕಾನೂನು
ಮತ್ತು
ಸುವ್ಯವಸ್ಥೆಯನ್ನೇ
ಪ್ರಶ್ನೆ
ಮಾಡುವಂತಿದೆ
ಎಂದು
ಅಖಿಲೇಶ್
ಹೇಳಿದರು.
ಬಿಜೆಪಿಯಿಂದ
ರೈತರಿಗೆ
ಸುಳ್ಳು
ಭರವಸೆ:
2022ರಲ್ಲಿ
ದೇಶದ
ರೈತರ
ಆದಾಯವನ್ನು
ದ್ವಿಗುಣಗೊಳಿಸುವುದಾಗಿ
ಬಿಜೆಪಿ
ಸರ್ಕಾರ
ಸುಳ್ಳು
ಭರವಸೆಯನ್ನು
ನೀಡುತ್ತಿದೆ.
''ಸರ್ಕಾರ
ಕೈಗಾರಿಕೋದ್ಯಮಿಗಳ
ಜೊತೆ
ನಿಂತಿದ್ದು,
ಈ
ಭಾಗದ
ಆಲೂಗೆಡ್ಡೆ
ರೈತರು
ಸಾಕಷ್ಟು
ತೊಂದರೆ
ಎದುರಿಸುತ್ತಿದ್ದಾರೆ.
ಕೆಲ
ರೈತರು
ತಮ್ಮ
ಆಲೂಗೆಡ್ಡೆಯನ್ನು
ಮುಖ್ಯಮಂತ್ರಿ
ನಿವಾಸದ
ಹೊರಗೆ
ಸುರಿದರು.
ನಂತರ
ಸರ್ಕಾರವು
ರೈತರಿಂದ
ಆಲೂಗಡ್ಡೆ
ಖರೀದಿಸುವುದಾಗಿ
ಘೋಷಿಸಿತು,
ಆದರೆ
ಖರೀದಿ
ಮಾಡಲಿಲ್ಲ.
ತಾವು
ಅಧಿಕಾರಕ್ಕೆ
ಬಂದ
ಮೇಲೆ
ಈ
ಭಾಗದ
ರೈತರ
ಬೆಳೆ
ವ್ಯರ್ಥವಾಗದಂತೆ
ವ್ಯವಸ್ಥೆ
ಮಾಡುತ್ತೇವೆ
ಎಂದು
ಅಖಿಲೇಶ್
ಯಾದವ್
ಹೇಳಿದರು.
ಏಳು
ಹಂತಗಳಲ್ಲಿ
ನಡೆಯಲಿರುವ
ಯುಪಿ
ಚುನಾವಣೆ
ಉತ್ತರ
ಪ್ರದೇಶದಲ್ಲಿ
ಫೆಬ್ರವರಿ
10,
ಫೆಬ್ರವರಿ
14,
ಫೆಬ್ರವರಿ
20,
ಫೆಬ್ರವರಿ
23,
ಫೆಬ್ರವರಿ
27,
ಮಾರ್ಚ್
3
ಮತ್ತು
ಮಾರ್ಚ್
7ರಂದು
ಒಟ್ಟು
ಏಳು
ಹಂತಗಳಲ್ಲಿ
ಮತದಾನ
ನಡೆಯಲಿದೆ.
ಅಂತಿಮವಾಗಿ
ಮಾರ್ಚ್
10ರಂದು
ಉತ್ತರ
ಪ್ರದೇಶ
ಸೇರಿದಂತೆ
ಐದು
ರಾಜ್ಯಗಳಲ್ಲಿ
ನಡೆದ
ವಿಧಾನಸಭೆ
ಚುನಾವಣೆಯ
ಫಲಿತಾಂಶ
ಪ್ರಕಟವಾಗಲಿದೆ.
ಈ
ಬಾರಿ
ವಿಧಾನಸಭೆ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ,
ಅಖಿಲೇಶ್
ಯಾದವ್
ನೇತೃತ್ವದ
ಸಮಾಜವಾದಿ
ಪಕ್ಷ,
ಕಾಂಗ್ರೆಸ್
ಮತ್ತು
ಮಾಯಾವತಿ
ನೇತೃತ್ವದ
ಬಹುಜನ
ಸಮಾಜವಾದಿ
ಪಕ್ಷದ
ನಡುವೆ
ಜಿದ್ದಾಜಿದ್ದಿನ
ಪೈಪೋಟಿ
ನಡೆಯುತ್ತಿದೆ.
ಈ
ಹಿಂದೆ
2017ರಲ್ಲಿ
ಉತ್ತರ
ಪ್ರದೇಶದಲ್ಲಿ
403
ವಿಧಾನಸಭೆಗಳಿಗೆ
ನಡೆದ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ
ಅತಿಹೆಚ್ಚು
ಸ್ಥಾನಗಳನ್ನು
ಗೆದ್ದು
ಅಧಿಕಾರದ
ಗದ್ದುಗೆ
ಏರಿತ್ತು.
ಒಟ್ಟು
403
ಕ್ಷೇತ್ರಗಳ
ಪೈಕಿ
ಬಿಜೆಪಿ
312
ಸ್ಥಾನಗಳನ್ನು
ಗೆದ್ದಿತ್ತು.
ಸಮಾಜವಾದಿ
ಪಕ್ಷ
47
ಸ್ಥಾನಗಳಲ್ಲಿ
ಗೆಲುವು
ಸಾಧಿಸಿದ್ದರೆ,
ಬಹುಜನ
ಸಮಾಜವಾದಿ
ಪಕ್ಷವು
19
ಕ್ಷೇತ್ರಗಳಲ್ಲಿ
ಗೆಲುವಿನ
ಬಾವುಟ
ಹಾರಿಸಿತ್ತು.
ರಾಷ್ಟ್ರೀಯ
ಪಕ್ಷ
ಕಾಂಗ್ರೆಸ್
ತೀವ್ರ
ಹಿನ್ನಡೆ
ಅನುಭವಿಸಿದ್ದು,
ಕೇವಲ
ಏಳು
ಕ್ಷೇತ್ರಗಳಲ್ಲಿ
ಮಾತ್ರ
ಗೆಲುವು
ಸಾಧಿಸುವಲ್ಲಿ
ಯಶಸ್ವಿಯಾಗಿತ್ತು.