ಬರೋಬ್ಬರಿ 4.5 ಲಕ್ಷಕ್ಕೆ ಮಾರಾಟವಾದ ಆಡು ಜೋಡಿ; ಯಾಕಿಷ್ಟು ದುಬಾರಿ?
ಲಖ್ನೋ, ಜುಲೈ 21: ಈದ್-ಅಲ್-ಅಧಾಗೂ ಮುನ್ನಾ ದಿನ ಮಂಗಳವಾರ ಉತ್ತರ ಪ್ರದೇಶದ ಲಖ್ನೋನಲ್ಲಿನ ಮಾರುಕಟ್ಟೆ ವಿವಿಧ ತಳಿಗಳ ಆಡು, ಕುರಿಗಳಿಂದ ತುಂಬಿಕೊಂಡಿತ್ತು. ಅವುಗಳಲ್ಲಿ ಆಡಿನ ಈ ಜೋಡಿಯೊಂದು ಎಲ್ಲರ ಗಮನ ಸೆಳೆಯುತ್ತಿದ್ದವು. ಬರೀ ನೋಟದಿಂದ ಮಾತ್ರವಲ್ಲ, ಇದರ ಬೆಲೆಯೂ ವಿಶೇಷವಾಗಿಯೇ ಇತ್ತು.
ಲಖ್ನೋನ ಗೋಮ್ಟಿ ನದಿ ತೀರದ ಮಾರುಕಟ್ಟೆಯಲ್ಲಿ ಈ ವಿಶೇಷವಾದ ಆಡುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಂದ ಹಾಗೆ ಈ ಜೋಡಿ ಆಡು ಮಾರಾಟವಾಗಿದ್ದು 4.5 ಲಕ್ಷ ರೂಪಾಯಿಗೆ. ಈ ಎರಡು ಆಡುಗಳಿಗೂ ಎರಡು ವರ್ಷವಾಗಿದ್ದು, ಒಂದು 170 ಕೆ.ಜಿ.ಯದ್ದಾದರೆ ಮತ್ತೊಂದು 150 ಕೆ.ಜಿ. ತೂಕ.

ಈ ಆಡುಗಳಿಗೆ ಏಕಿಷ್ಟು ದುಬಾರಿ ಬೆಲೆ? ಎಂದು ಪ್ರಶ್ನಿಸಿದರೆ, ಇವುಗಳನ್ನು ಬೆಳೆಸಿದ ರೀತಿಯೇ ಈ ದುಬಾರಿ ಬೆಲೆಗೆ ಕಾರಣ ಎನ್ನುತ್ತಾರೆ ಇವನ್ನು ಖರೀದಿಸಿದ ವ್ಯಕ್ತಿ. ಈ ಆಡುಗಳಿಗೆ ದಿನನಿತ್ಯವೂ ವಿಶೇಷವಾದ ಆಹಾರ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು.
ಮಾಮೂಲಿ ಹುಲ್ಲಿನ ಬದಲಾಗಿ ಪ್ರತಿದಿನವೂ ತಪ್ಪದೇ ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡಲಾಗುತ್ತಿತ್ತು. ಗೋಡಂಬಿ, ಪಿಸ್ತಾ, ಬಾದಾಮಿಯಂಥ ಪೌಷ್ಟಿಕ ಆಹಾರದ ಜೊತೆ ಸಿಹಿ ತಿನಿಸುಗಳನ್ನು ಕೂಡ ಈ ಆಡುಗಳಿಗೆ ನೀಡಲಾಗುತ್ತಿತ್ತು. ಹೀಗಾಗೇ ಇವುಗಳ ದೇಹ ಇಷ್ಟು ಸದೃಢವಾಗಿದೆ ಎಂದು ವಿವರಿಸಿದರು.
ಇಷ್ಟೇ ಅಲ್ಲ, ದಿನವೂ ಇವುಗಳನ್ನು ಶಾಂಪೂವಿನಿಂದ ಸ್ನಾನ ಮಾಡಿಸಿ ಶುದ್ಧವಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಜೊತೆಗೆ ಆಗಾಗ್ಗೆ ವೈದ್ಯಕೀಯ ಪರೀಕ್ಷೆಯನ್ನೂ ಮಾಡಿಸುತ್ತಿದ್ದರಂತೆ.
Recommended Video
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications