Get Updates
Get notified of breaking news, exclusive insights, and must-see stories!

ಅಶ್ಲೀಲ ನಿಂದನೆ ಪ್ರಕರಣ- ಬಂಧನ ಬಳಿಕ ಶ್ರೀಕಾಂತ್ ತ್ಯಾಗಿ ಹೇಳಿದ್ದೇನು?

ನೋಯ್ಡಾ ಆಗಸ್ಟ್ 10: ಪೊಲೀಸರ ಕೈಗೆ ಸಿಕ್ಕಿಬಿದ್ದ ಶ್ರೀಕಾಂತ್ ತ್ಯಾಗಿ ಮಾತು ಸದ್ಯ ಹಿಡಿತಕ್ಕೆ ಬಂದಂತೆ ಕಾಣಿಸುತ್ತಿದೆ. 'ಮಹಿಳೆ ತನ್ನ ಸಹೋದರಿ ಇದ್ದಂತೆ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ' ಎಂದು ಶ್ರೀಕಾಂತ್ ತ್ಯಾಗಿ ಹೇಳಿಕೊಂಡಿದ್ದಾರೆ. ರಾಜಕೀಯ ಸೇಡು ತೀರಿಸಿಕೊಳ್ಳಲು ನನ್ನೊಂದಿಗೆ ಈ ಸಂಚು ರೂಪಿಸಲಾಗಿದೆ ಎಂದು ಬಂಧನದ ನಂತರ ಶ್ರೀಕಾಂತ್ ತ್ಯಾಗಿ ಹೇಳಿದ್ದಾರೆ.

ಸೂರಜ್‌ಪುರ ನ್ಯಾಯಾಲಯವು ಶ್ರೀಕಾಂತ್ ತ್ಯಾಗಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಕಾಂತ್ ತ್ಯಾಗಿ, ಯಾರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೋ ಆ ಮಹಿಳೆ ನನ್ನ ಸಹೋದರಿ ಇದ್ದಂತೆ ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ನೋಯ್ಡಾದಲ್ಲಿ ಶ್ರೀಕಾಂತ್ ತ್ಯಾಗಿ ಅವರು ಮಹಿಳೆಗೆ ನಿಂದಿಸಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಅವರು ನೋಯ್ಡಾದಲ್ಲಿ ಮಹಿಳೆಯೊಬ್ಬರನ್ನು ನಿಂದಿಸುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ಆತನ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಕೊನೆಗೂ ಮಂಗಳವಾರ ಆತನನ್ನು ಬಂಧಿಸಿದ್ದಾರೆ.

ಶ್ರೀಕಾಂತ್ ಕಾರಿನ ಮೇಲೆ ಎಂಎಲ್ಎ ಸ್ಟಿಕ್ಕರ್

ಶ್ರೀಕಾಂತ್ ಕಾರಿನ ಮೇಲೆ ಎಂಎಲ್ಎ ಸ್ಟಿಕ್ಕರ್

ಆ ಘಟನೆಗೆ ಕ್ಷಮಿಸಿ, ಆಕೆ ನನ್ನ ಸಹೋದರಿ ಇದ್ದಂತೆ, ಈ ಘಟನೆ ರಾಜಕೀಯ, ನನ್ನನ್ನು ರಾಜಕೀಯವಾಗಿ ತೊಲಗಿಸಲು ಈ ರೀತಿ ಮಾಡಲಾಗಿದೆ ಎಂದು ಶ್ರೀಕಾಂತ್ ತ್ಯಾಗಿ ಹೇಳಿದ್ದಾರೆ. ಈ ಹಿಂದೆ, ಶ್ರೀಕಾಂತ್ ತ್ಯಾಗಿ ಅವರು ತಮ್ಮ ಕಾರಿನ ಮೇಲೆ ಎಂಎಲ್ಎ ಸ್ಟಿಕ್ಕರ್ ಬಳಸುತ್ತಿದ್ದರು ಎಂದು ನೋಯ್ಡಾ ಪೊಲೀಸರು ಹೇಳಿದ್ದಾರೆ. ಇದನ್ನು ವಿಧಾನ ಪರಿಷತ್ ಸದಸ್ಯರಾದ ಸ್ವಾಮಿ ಪ್ರಸಾದ್ ಮೌರ್ಯ ಅವರು ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರ ವಿಚಾರಣೆ ವೇಳೆ ಶ್ರೀಕಾಂತ್ ತ್ಯಾಗಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮೀರತ್‌ನಿಂದ ಬಂಧನ

ಮೀರತ್‌ನಿಂದ ಬಂಧನ

ನೋಯ್ಡಾ ಪೊಲೀಸ್ ಆಯುಕ್ತ ಅಲೋಕ್ ಸಿಂಗ್ ಮಂಗಳವಾರ ಸಂಜೆ ಶ್ರೀಕಾಂತ್ ತ್ಯಾಗಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆರಂಭದಲ್ಲಿ ತ್ಯಾಗಿ ಲಕ್ನೋಗೆ ಹೋಗಲು ಬಯಸಿದ್ದರು, ಆದರೆ ಇಲ್ಲಿಯವರೆಗೆ ಅವರು ಯಾವ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಆಯುಕ್ತರು, ಮೀರತ್ ಬಳಿ ತ್ಯಾಗಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಆತನ ಮೂವರು ಸಹಚರರನ್ನು ಕೂಡ ಬಂಧಿಸಲಾಗಿದೆ. ನೋಯ್ಡಾದ ಓಮ್ಯಾಕ್ಸ್ ಸೊಸೈಟಿಯ ಸೆಕ್ಟರ್ 93 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಆಗಸ್ಟ್ 5ರ ವಿಡಿಯೋ ಹೊರಬಿದ್ದ ಬಳಿಕ ನಮ್ಮ ತಂಡ ಆತನಿಗಾಗಿ ಹುಡುಕಾಟ ಆರಂಭಿಸಿದೆ ಎಂದು ಆಯುಕ್ತ ಅಲೋಕ್ ಸಿಂಗ್ ಹೇಳಿದ್ದಾರೆ. ಆದರೆ, ಈ ವಿಷಯ ಅಧಿಕೃತವಾಗಿ ಪೊಲೀಸರಿಗೆ ಬಂದಿಲ್ಲ. ಸಂತ್ರಸ್ತೆಯನ್ನು ಪೊಲೀಸರು ಸಂಪರ್ಕಿಸಿದ್ದು, ನಂತರ ಪ್ರಕರಣ ದಾಖಲಿಸಿಕೊಂಡು ತ್ಯಾಗಿಗಾಗಿ ಹುಡುಕಾಟ ಆರಂಭಿಸಿದ್ದರು. ತ್ಯಾಗಿಯನ್ನು ಹಿಡಿಯಲು ಆರಂಭದಲ್ಲಿ 8 ತಂಡಗಳನ್ನು ರಚಿಸಲಾಗಿತ್ತು. ಆದರೆ ತ್ಯಾಗಿ ಸ್ಥಳ ಬದಲಾಯಿಸುತ್ತಿದ್ದ ಕಾರಣ ಅವರನ್ನು ಹಿಡಿಯಲಾಗಲಿಲ್ಲ. ಇದಾದ ಬಳಿಕ ಭಾರೀ ಶೋಧ ಕಾರ್ಯಾಚರಣೆ ನಡೆಸಲಾಯಿತು. ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲಾಗಿತ್ತು ಎಂದರು.

ಎಲ್ಲೆಲ್ಲಿ ತಂಗಿದ್ದರು?

ಎಲ್ಲೆಲ್ಲಿ ತಂಗಿದ್ದರು?

ಶ್ರೀಕಾಂತ್ ತ್ಯಾಗಿ ಮೊದಲು ಮೀರತ್‌ಗೆ, ನಂತರ ಮುಜಾಫರ್‌ನಗರಕ್ಕೆ, ನಂತರ ಋಷಿಕೇಶ ಮತ್ತು ಹರಿದ್ವಾರಕ್ಕೆ ಹೋದರು. ಶೋಧ ಕಾರ್ಯಾಚರಣೆಯ ನಂತರ ತ್ಯಾಗಿಯನ್ನು ಆತನ ಸಹಚರರೊಂದಿಗೆ ಬಂಧಿಸಲಾಯಿತು. ಮಹಿಳೆಯೊಂದಿಗಿನ ವಿವಾದಕ್ಕೆ ಸಂಬಂಧಿಸಿದಂತೆ, ಸಾಮಾನ್ಯ ಪ್ರದೇಶದ ಬಳಕೆಗೆ ಸಂಬಂಧಿಸಿದಂತೆ ಈ ವಿವಾದವು 2019 ರಲ್ಲಿ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ ಎಂದು ಆಯುಕ್ತರು ಸ್ಪಷ್ಟವಾಗಿ ಹೇಳಿದರು. ತ್ಯಾಗಿ ಮೊದಲು ವಿಮಾನ ನಿಲ್ದಾಣಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರು ಎಂದು ಅವರು ಹೇಳಿದರು. ಆದರೆ ಆ ಹೊತ್ತಿಗೆ ಅವರ ವೀಡಿಯೊ ವೈರಲ್ ಆಗಿತ್ತು. ಇದರಿಂದಾಗಿ ಅವರು ಮೀರತ್‌ಗೆ ಹೋದರು. ರಾತ್ರಿ ಇಲ್ಲೇ ಕಳೆದು ಫೋನ್ ಬದಲಾಯಿಸಿದರು. ಇದಾದ ನಂತರ ಹರಿದ್ವಾರ, ಋಷಿಕೇಶಕ್ಕೆ ಹೋದರು. ತ್ಯಾಗಿ ವಿಐಪಿ ಸಂಖ್ಯೆ 001 ಬಳಸುತ್ತಿದ್ದರು. ಅದನ್ನು 1 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ.

ತ್ಯಾಗಿ ವಿರುದ್ಧ ಪ್ರಕರಣ

ತ್ಯಾಗಿ ವಿರುದ್ಧ ಪ್ರಕರಣ

ತ್ಯಾಗಿ ಅವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅವರ ಎರಡು ಫಾರ್ಚೂನರ್‌ಗಳು, ಎರಡು ಸಫಾರಿಗಳು, ಒಂದು ಹೋಂಡಾ ಸಿವಿಕ್ ಅನ್ನು ಜಪ್ತಿ ಮಾಡಲಾಗಿದೆ. ಆತನ ಚಾಲಕ ತನ್ನ ಪ್ರಭಾವವನ್ನು ತೋರಿಸಲು ವಾಹನದ ನಂಬರ್ ಪ್ಲೇಟ್‌ನಲ್ಲಿ ರಾಜ್ಯದ ಅಧಿಕೃತ ಚಿಹ್ನೆಯನ್ನು ಚಿತ್ರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತ್ಯಾಗಿ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ. ತ್ಯಾಗಿ ತಮ್ಮನ್ನು ಬಿಜೆಪಿಯ ಕಿಸಾನ್ ಮೋರ್ಚಾದ ನಾಯಕ ಎಂದು ಹೇಳಿಕೊಳ್ಳುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+