Get Updates
Get notified of breaking news, exclusive insights, and must-see stories!

ಬೃಂದಾವನದಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸಿದ ಪ್ರಧಾನಿ ಮೋದಿ

Recommended Video

      ಉತ್ತರಪ್ರದೇಶದ ಬೃಂದಾವನದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಬಡಿಸಿದ ನರೇಂದ್ರ ಮೋದಿ

      ಲಕ್ನೋ, ಫೆಬ್ರವರಿ 11: ಉತ್ತರ ಪ್ರದೇಶದ ಬೃಂದಾವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಷಯ ಪಾತ್ರಾ ಪ್ರತಿಷ್ಠಾನದ ಮೂರು ಶತಕೋಟಿಯ ಆಹಾರ ಪೂರೈಕೆ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಬಿಡಿಸಿದರು.

      ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಸಾಥ್ ನೀಡಿದರು.

      ಬಳಿಕ ಮೋದಿ ಅವರು ಬೃಂದಾವನ ಚಂದ್ರೋದಯ ಮಂದಿರ ಅವರಣದಲ್ಲಿ ಶಾಲಾ ಮಕ್ಕಳೊಂದಿಗೆ ಹರಟಿದರು.

      narendra modi serves midday meals to school children in uttar pradesh vrindavan

      ಬೆಂಗಳೂರು ಮೂಲಕ ಅಕ್ಷಯ ಪಾತ್ರಾ ಪ್ರತಿಷ್ಠಾನ 200೦ನೇ ಇಸವಿಯಿಂದ ದೇಶದ 12 ರಾಜ್ಯಗಳಲ್ಲಿ 14,702 ಶಾಲೆಗಳಲ್ಲಿ 1.76 ಮಿಲಿಯನ್‌ಗೂ ಅಧಿಕ ಮಕ್ಕಳಿಗೆ ಮಧ್ಯಾಹ್ನದ ಊಟ ಪೂರೈಸುತ್ತಿದೆ.

      ಪ್ರತಿಷ್ಠಾನವು ಮೂರು ಶತಕೋಟಿ ಊಟವನ್ನು ಪೂರೈಸಿದ ಸಲುವಾಗಿ ಆರಂಭಿಸಿದ ಕಾರ್ಯಕ್ರಮಕ್ಕೆ ಮೋದಿ ಅವರು ಚಾಲನೆ ನೀಡಿದರು.

      ಸಂಸದೆ ಹೇಮಾಮಾಲಿನಿ, ಉತ್ತರ ಪ್ರದೇಶ ಸಂಪುಟ ಸಚಿವರಾದ ಶ್ರೀಕಂಠ ಶರ್ಮಾ, ಲಕ್ಷ್ಮಿ ನಾರಾಯಣ ಚೌಧರಿ, ಅನುಪಮಾ ಜೈಸ್ವಾಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

      ಈ ಹಿಂದಿನ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ಮೋದಿ, ಮಕ್ಕಳ ಪೌಷ್ಟಿಕತೆ, ಲಸಿಕೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ತೀರಾ ನಿಧಾನಗತಿಯ ಕೆಲಸಗಳು ನಡೆದಿದ್ದವು. ಕಳೆದ 55 ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಮಕ್ಕಳು ಮತ್ತು ತಾಯಂದಿರಿಗೆ ಪೌಷ್ಟಿಕತೆ ಹಾಗೂ ಆರೋಗ್ಯದ ವಿಚಾರದಲ್ಲಿ ಕಾಳಜಿವಹಿಸಿದೆ ಎಂದು ಹೇಳಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+