ರಾಹುಲ್ ಗಾಂಧಿಯನ್ನು ಸೋಲಿಸಿದ್ದೇಕೆ: ಅಮೇಥಿ ವ್ಯಕ್ತಿ ಬಿಚ್ಚಿಟ್ಟ ಸತ್ಯ
Recommended Video
ಅಮೇಥಿ, ಮೇ 29: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲಿಗೆ ಕಾರಣವೇನು? ರಾಜಕೀಯ ಪಂಡಿತರು ಈಗಾಗಲೇ ಇದಕ್ಕೆ ಹಲವು ಕಾರಣಗಳನ್ನು ಕೊಟ್ಟಿದ್ದಾರೆ. ಆದರೆ ಅಸಲೀ ಕಾರಣ ಗೊತ್ತಾಗುವುದು ಅಲ್ಲಿನ ಜನರನ್ನು ಮಾತನಾಡಿಸಿದಾಗಲೇ!
ಅಮೇಥಿಯ ವ್ಯಕ್ತಿಯೊಬ್ಬರು 'ದಿ ಹಿಂದು' ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡುತ್ತ ತಾವು ರಾಹುಲ್ ಗಾಂಧಿ ಅವರನ್ನು ಸೋಲಿಸುವ ನಿರ್ಧಾರಕ್ಕೆ ಬಂದಿದ್ದೇಕೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ನಮ್ಮನ್ನು ರಾಹುಲ್ ಗಾಂಧಿ ಅವರು 'ಟೇಕನ್ ಫಾರ್ ಗ್ರ್ಯಾಂಟೆಡ್' ಎಂಬಂತೆ ನೋಡಿದ್ದರು. ನಾವ್ಯಾರೂ ಮೂರ್ಖರಲ್ಲ ಎಂಬುದನ್ನು ತೋರಿಸಿಕೊಡಬೇಕಿತ್ತು ಎಂದು ರಾಮ್ ಪ್ರಕಾಶ್ ಸೋಂಕರ್ ಎಂಬುವವರು ಹೇಳಿದ್ದಾರೆ.
ವಿವಿಐಪಿ ಸಂಸ್ಕೃತಿಯಿಂದ ವೋಟು ಪಡೆಯುವುದಕ್ಕಾಗುವುದಿಲ್ಲ ಎಂಬುದನ್ನು ನಾವು ಅಮೇಥಿಯ ಜನರು ತೋರಿಸಿಕೊಟ್ಟಿದ್ದೇವೆ ಎಂದು ಸೋಂಕರ್ ಹೇಳಿದರು.
ರಾಹುಲ್ ಸೋಲಿಗೆ ಸೋಂಕರ್ ಎಂಬ ಅಮೇಥಿಯ ಒಬ್ಬ ಸಾಮಾನ್ಯ ವ್ಯಕ್ತಿ ನೀಡಿದ ಕಾರಣಗಳು ಮತದಾರರನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಎಂದು ನೋಡುವ ಎಲ್ಲಾ ರಾಜಕಾರಣಿಗಳಿಗೂ ಛಾಟಿ ಏಟು. ಸೋಂಕರ್ ಮಾತಿನ ಸಾರಾಂಶ ಇಲ್ಲಿದೆ....

ವರ್ಷಕ್ಕೊಮ್ಮೆ ಬಂದು ಕೈಬೀಸಿ ಹೋದರೆ ಮುಗಿಯಿತೇ?
"ರಾಹುಲ್ ಗಾಂಧಿ ಅವರು ನಮ್ಮನ್ನು(ಅಮೇಥಿಯ ಜನರು) ಮೂರ್ಖರು ಎಂದುಕೊಂಡಿದ್ದರು ಅನ್ನಿಸುತ್ತೆ. ಒಮ್ಮೆ ಬಂದು ಕೈ ಬೀಸಿ ಹೋದರೆ ನಾವು ಅವರಿಗೆ ಮತಹಾಕಿಬಿಡುತ್ತೇವೆ ಎಂದುಕೊಂಡಿದ್ದರು. ಆದರೆ ಅವರು ನಮ್ಮ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂಬುದನ್ನು ನಾವು ಯೋಚಿಸುವುದಕ್ಕೆ ಆರಂಭಿಸಿದ್ದೆವು!"

ವಿವಿಐಪಿ ಸಂಸ್ಕೃತಿ
"2014 ರಲ್ಲಿ ಗೆದ್ದ ನಂತರವೂ ರಾಹುಲ್ ಗಾಂಧಿ ಅಪರೂಪಕ್ಕೊಮ್ಮೆ ಅಮೇಥಿಗೆ ಬಂದರೂ ಅನುಸರಿಸುತ್ತಿದ್ದುದು ವಿವಿಐಪಿ ಸಂಸ್ಕೃತಿ. ಕೆಲವು ಆಯ್ದ ಖ್ಯಾತನಾಮರನ್ನು ಮಾತ್ರ ರಾಹುಲ್ ಗಾಂಧಿ ಭೇಟಿ ಮಾಡಿ ಹೋಗುತ್ತಿದ್ದರು. ಜನ ಸಾಮಾನ್ಯರಿಗೆ ಬೇಕಿದ್ದುದು ತಮ್ಮ ಅಹವಾಲು ಕೇಳುವ ಸಂಸದ"

ಸೋತರೂ ಕ್ಷೇತ್ರಕ್ಕೆ ಬರುತ್ತಿದ್ದ ಸ್ಮೃತಿ ಇರಾನಿ
"ರಾಹುಲ್ ಗಾಂಧಿ ಗೆದ್ದ ಮೇಲೆ ಅಮೇಥಿಗೆ ಬಂದಿದ್ದೇ ಕಡಿಮೆ. ಆದರೆ ಸ್ಮೃತಿ ಇರಾನಿ ಅವರು ಸೋತರೂ ಎಷ್ಟೋ ಬಾರಿ ಅಮೇಥಿಗೆ ಬಂದು ಇಲ್ಲಿನ ಜನರ ನಾಡಿಮಿಡಿತ ಅರಿವ ಯತ್ನ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಅಮೇಥಿಯ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೆಲಸ ಮಾಡಿದ್ದಾರೆ. ತಮ್ಮನ್ನು ಸೋಲಿಸಿದ ಜನರ ಮೇಲೂ ವಿಶ್ವಾಸ ಇರಿಸಿಕೊಂಡು, ನಮ್ಮ ಸೇವೆ ಮಾಡಿದ ಅವರ ನಡೆ ನಮ್ಮಲ್ಲಿ ಅವರ ಮೇಲಿನ ಗೌರವವನ್ನು ಹೆಚ್ಚಿಸಿತ್ತು"

ಬಿಜೆಪಿಯತ್ತ ವಾಲಿದ ಮತದಾರ
"2017 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಸಮಯದಲ್ಲೇ ಅಮೇಥಿಯ ಜನರು ಕಾಂಗ್ರೆಸ್ ವಿರುದ್ಧ ವಾಲುತ್ತಿದ್ದರು. ಅಮೇಥಿ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ 2017 ರಲ್ಲೇ ರಾಜಕೀಯ ಚಿತ್ರಣ ಬದಲಾಗಿತ್ತು. ಮತದಾರ ಕಾಂಗ್ರೆಸ್ ತೊರೆಯವ ಸೂಚನೆಯನ್ನು ಆಗಲೇ ನೀಡಿದ್ದ. ಆದರೆ ಅದನ್ನು ರಾಹುಲ್ ಗಾಂಧಿಯಾಗಲೀ, ಸ್ಥಳೀಯ ಕಾಂಗ್ರೆಸ್ ಮುಖಂಡರಾಗಲೀ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದರ ಪರಿಣಾಮವೇ ಲೋಕಸಭೆ ಚುನಾವಣೆ ಫಲಿತಾಂಶ"
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications