ಸಿರತುನಲ್ಲಿ ಕೇಶವ್ ಪ್ರಸಾದ್ ಮೌರ್ಯ ಈ ತಪ್ಪು ಮಾಡದಿದ್ದರೆ ಗೆಲ್ಲುತ್ತಿದ್ದರು
ಲಕ್ನೋ ಮಾರ್ಚ್ 12: ಏಳು ಹಂತಗಳ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮಾರ್ಚ್ 10 ರಂದು ಹೊರಬಿದ್ದಿದ್ದು, ಅನೇಕ ರಾಜಕೀಯ ದಿಗ್ಗಜರನ್ನು ಅಚ್ಚರಿಗೊಳಿಸಿದೆ. ಅವರಲ್ಲಿ ಒಬ್ಬರು ಉತ್ತರ ಪ್ರದೇಶದ ಮಾಜಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸಿರತು ವಿಧಾನಸಭಾ ಕ್ಷೇತ್ರದಿಂದ ಸೋತಿದ್ದಾರೆ. ಒಂದೆಡೆ ಭಾರತೀಯ ಜನತಾ ಪಕ್ಷ ಯುಪಿಯಲ್ಲಿ ಮರು ಚುನಾವಣೆಯಲ್ಲಿ ಗೆದ್ದು ದಾಖಲೆ ಸೃಷ್ಟಿಸಿದೆ. ಕೇಶವ್ ಪ್ರಸಾದ್ ಮೌರ್ಯ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಕೇಶವ್ ಪ್ರಸಾದ್ ಮೌರ್ಯ ಅವರ ಸೋಲು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಒಬಿಸಿಯ ಪ್ರಮುಖ ನಾಯಕರಾದ ಮೌರ್ಯ ಅವರು ಸಮಾಜವಾದಿ ಪಕ್ಷ (ಎಸ್ಪಿ) ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ಅಪ್ನಾ ದಳ (ಕಾಮೆರವಾಡಿ) ನಾಯಕಿ ಪಲ್ಲವಿ ಪಟೇಲ್ ರ ವಿರುದ್ಧ ಸೋತಿದ್ದಾರೆ. ಸಿರತು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಪಲ್ಲವಿ ಪಟೇಲ್ ಅವರು ಕೇಶವ್ ಪ್ರಸಾದ್ ಮೌರ್ಯ ಅವರನ್ನು 7,337 ಮತಗಳಿಂದ ಸೋಲಿಸಿದ್ದಾರೆ. ಹಾಗಾದರೆ ಮೌರ್ಯ ಅವರ ಸೋಲಿಗೆ ಕಾರಣವೇನು ಎಂದು ನೋಡುವುದಾದರೆ ಬಹುಳಷ್ಟು ವಿಷಯಗಳು ಕಣ್ಣ ಮುಂದಿವೆ. ದಿ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಮೌರ್ಯ, ತಮ್ಮ ಗೆಲುವಿನ ಬಗ್ಗೆ ಯಾವುದೇ ಅನುಮಾನವಿರಲಿಲ್ಲ. ಆದರೆ ಅವರು ತಮ್ಮ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೆಚ್ಚಿನ ಸಮಯವನ್ನು ನೀಡಬೇಕಾಗಿತ್ತು ಎಂದರು.
'ನಮಗೆ ಇಡೀ ರಾಜ್ಯವೇ ಮುಖ್ಯ ಎಂದು ನಾನು ಭಾವಿಸಿದ್ದೇನೆ. ಪಕ್ಷಕ್ಕೆ ಅಗತ್ಯವಿರುವ ಕಡೆ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದರು. ನನ್ನ ಸ್ವಂತ ಕ್ಷೇತ್ರದಲ್ಲಿ ಒಂದೂವರೆ ದಿನ ಮಾತ್ರ ಪ್ರಚಾರ ನೀಡಲು ಸಾಧ್ಯವಾಯಿತು. ನಾನು ಇಲ್ಲಿ (ಸಿರತು) ಹೆಚ್ಚಿನ ಸಮಯವನ್ನು ನೀಡಬೇಕಾಗಿತ್ತು. ನನ್ನ ಕ್ಷೇತ್ರದ ಜನರ ಮೇಲೆ ನನಗೆ ನಂಬಿಕೆ ಇತ್ತು. ಆದರೂ ಜನಾದೇಶವನ್ನು ನಾನು ಸ್ವೀಕರಿಸುತ್ತೇನೆ ಎಂದಿದ್ದಾರೆ.

ಮೌರ್ಯ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಮೌರ್ಯ ಅವರನ್ನು ಕೇಳಿದಾಗ, ಮೌರ್ಯ ಹೇಳಿದರು, "ನನ್ನ ಪಕ್ಷ ನನಗೆ ಯಾವ ಜವಬ್ದಾರಿಯನ್ನು ನೀಡುತ್ತದೆ ಅದನ್ನು ನಾನು ಮಾಡುತ್ತೇನೆ. ನಾನು ಅದನ್ನು ಅನುಸರಿಸುತ್ತೇನೆ. ಅದರ ಬಗ್ಗೆ ನಾನು ಈಗಲೇ ಏನನ್ನೂ ಹೇಳಲಾರೆ." ಪಲ್ಲವಿ ದಿವಂಗತ ಕುರ್ಮಿ (ಪಟೇಲ್) ನಾಯಕ ಸೋನೆಲಾಲ್ ಪಟೇಲ್ ಅವರ ಪುತ್ರಿ. ಅಪ್ನಾ ದಳ (ಸೋನೆಲಾಲ್) ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಅನುಪ್ರಿಯಾ ಪಟೇಲ್ ಅವರ ಹಿರಿಯ ಸಹೋದರಿ. ಸಿರತು ಹೊರತುಪಡಿಸಿ ಆಡಳಿತ ಪಕ್ಷವು ಮಂಜನ್ಪುರವನ್ನು ಕಳೆದುಕೊಂಡರೆ, ಬಿಜೆಪಿ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೆಲಾಲ್) ಕೌಶಂಬಿ ಜಿಲ್ಲೆಯ ಚೈಲ್ ಕ್ಷೇತ್ರದಿಂದ ಸೋತಿದೆ.

ಪ್ರಧಾನಿ ಮೋದಿ, ಅಮಿತ್ ಶಾ ರ್ಯಾಲಿ
ಪ್ರಧಾನಿ ನರೇಂದ್ರ ಮೋದಿ,ಗೃಹ ಸಚಿವ ಅಮಿತ್ ಶಾ ಅವರು ಮೌರ್ಯ ಅವರ ಕ್ಷೇತ್ರದಲ್ಲಿ ರ್ಯಾಲಿ ಕೈಗೊಂಡಿದ್ದರು. ಮೌರ್ಯ ಅವರ ಚುನಾವಣಾ ಪ್ರಚಾರಕ್ಕಾಗಿ ಸಿರತುದಲ್ಲಿ ನೆಲೆಸಲು ಹೊರಗಿನಿಂದ ಕರೆತಂದ ಬಿಜೆಪಿ ನಾಯಕರೊಬ್ಬರು, ಕ್ಷೇತ್ರದ ಮತದಾರರಲ್ಲಿ ಹೆಚ್ಚಿನ ಭಾಗವಾಗಿರುವ ಪಾಸಿ (ದಲಿತ ಸಮುದಾಯ) ವನ್ನು ಪಕ್ಷದ ಕಾರ್ಯಕರ್ತರು ತಲುಪಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಮೇಲ್ಜಾತಿ ಬಿಜೆಪಿ ನಾಯಕರ ನಡುವೆ ಸೌಹಾರ್ದತೆ ಏರ್ಪಡಲು ಸಾಧ್ಯವಾಗಿಲ್ಲ. ಇದು ಮೌರ್ಯ ಸೋಲಿಗೆ ಕಾರಣ ಎಂದಿದ್ದಾರೆ.

ಮತ್ತೊಬ್ಬ ಸ್ಥಳೀಯ ಬಿಜೆಪಿ ನಾಯಕ ಮಾತನಾಡಿ, "ಸಿರತುನಲ್ಲಿ ಪ್ರಚಾರ ಮಾಡುವಾಗ ಹೊರಗಿನಿಂದ ಕೆಲಸ ಮಾಡಿದ ಹೆಚ್ಚಿನ ಬಿಜೆಪಿ ನಾಯಕರು ದಲಿತ ಮತ್ತು ಒಬಿಸಿ ಕಾರ್ಯಕರ್ತರೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿಲ್ಲ. ಇದು ಬೂತ್ ಮಟ್ಟದ ಸಮಸ್ಯೆಯಾಗಿದೆ" ಎಂದು ಹೇಳಿದರು. ಸಿರತುವಿನಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಕುರ್ಮಿ (ಒಬಿಸಿ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕುರ್ಮಿ ನಾಯಕರೂ ಆಗಿರುವ ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರು ಈ ಸ್ಥಾನದಲ್ಲಿ ಪ್ರಚಾರ ನಡೆಸಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications