ಪತ್ರಕರ್ತರು ಸತ್ಯ ಬರೆದರೆ ಮೋದಿ ಹೊಡೆಯುತ್ತಾರೆ: ರಾಹುಲ್ ಗಾಂಧಿ
ಅಮೇಥಿ, ಏಪ್ರಿಲ್ 22: ಪತ್ರಕರ್ತರು ತಮ್ಮ ಮನದ ಮಾತನ್ನು ಬರೆದುಬಿಟ್ಟರೆ, ಮೋದಿ, ಅವರಿಗೆ ಕೋಲು ತೆಗೆದುಕೊಂಡು ಹೊಡೆಯುತ್ತಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಉಮೇದುವಾರಿಕೆ ಸಲ್ಲಿಸಿರುವ ಅಮೇಥಿಯಲ್ಲಿ ಇಂದು ಬೃಹತ್ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ಈ ಸಮಯ ರಾಹುಲ್ ಗಾಂಧಿ ಚೌಕೀದಾರ್ ಎಂದರೆ ಜನ 'ಚೋರ್ ಹೇ' ಎಂದರು ಈ ಸಮಯ ಎದುರಿಗಿದ್ದ ಪತ್ರಕರ್ತರು ನಗುತ್ತಿದ್ದರು ಇದನ್ನು ಕಂಡು ರಾಹುಲ್ ಗಾಂಧಿ ಮೇಲಿನಂತೆ ಹೇಳಿದರು.
ಚೌಕಿದಾರ್ ಚೋರ್ ಹೈ ಹೇಳಿಕೆ: ಸುಪ್ರೀಂಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿಷಾದ
'ಪರ್ತಕರ್ತರು ನಗುತ್ತಿದ್ದಾರೆ, ಅವರ ನಗುವಿಗೆ ಕಾರಣ ನಾನು ಹೇಳುತ್ತೇನೆ, ಪತ್ರಕರ್ತರು ತಮ್ಮ ಮನದ ಮಾತು ಬರೆದರೆ ಮೋದಿ ಎರಡು ಏಟು ಹೊಡೆಯುತ್ತಾರೆ, ಹಾಗಾಗಿ ಅವರು ಮೋದಿ ಅವರ ಮನದ ಮಾತನ್ನು ನಗುತ್ತಲೇ ವರದಿ ಮಾಡಬೇಕಾಗಿ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಮುಂದುವರೆದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ 'ಚಿಂತೆ ಮಾಡಬೇಡಿ, 2019ರ ಚುನಾವಣೆ ನಂತರ ನೀವು ಭಯಬಿಟ್ಟು ನಿಮ್ಮ ವೃತ್ತಿ ಮಾಡಬಹುದಾಗಿರುತ್ತದೆ, ಆಗ ನಮ್ಮ ಬಗ್ಗೆಯೂ ಟೀಕೆ ಮಾಡುವಹಾಗಿದ್ದರೆ ಮಾಡಿ ಚಿಂತೆ ಇಲ್ಲ' ಎಂದು ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಗಾಂಧಿ ಅಮೇಥಿ ನಾಮಪತ್ರಕ್ಕೆ 'ಸಿಂಧುತ್ವ' ಪರೀಕ್ಷೆಯಲ್ಲಿ ಜಯ
ಮೋದಿ ವಿರುದ್ಧ ಬರೆದರೆ ಅಥವಾ ವರದಿ ಮಾಡಿದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಅವರು ಹೇಳುವ ಯತ್ನವನ್ನು ತಮ್ಮ ಭಾಷಣದಲ್ಲಿ ಮಾಡಿದರು.
#WATCH Rahul Gandhi in Amethi: Press wale has rahe hain kyunki inhone agar apne 'mann ki baat' kardi to inko do dande padenge, Narendra Modi ji maarenge........ghabraiye mat 2019 ke chunaav ke baad aapko jo likhna ho likhna, humare khilaaf bhi likhna hoga likh lena. pic.twitter.com/PxQOl7jTYB
— ANI UP (@ANINewsUP) April 22, 2019
ರಾಹುಲ್ ಗಾಂಧಿ ಅವರು ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಅವರಿಗೆ ಎದುರಾಗಿ ಬಿಜೆಪಿಯ ಸ್ಮೃತಿ ಇರಾನಿ ಅವರು ಸ್ಪರ್ಧಿಸಿದ್ದಾರೆ. ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ಕೇರಳದ ವೈನಾಡಿನಿಂದಲೂ ಚುನಾವಣೆಗೆ ಸ್ಪರ್ಧಿಸಿದ್ದಾರೆ.