ಪತ್ರಕರ್ತರು ಸತ್ಯ ಬರೆದರೆ ಮೋದಿ ಹೊಡೆಯುತ್ತಾರೆ: ರಾಹುಲ್ ಗಾಂಧಿ
ಅಮೇಥಿ, ಏಪ್ರಿಲ್ 22: ಪತ್ರಕರ್ತರು ತಮ್ಮ ಮನದ ಮಾತನ್ನು ಬರೆದುಬಿಟ್ಟರೆ, ಮೋದಿ, ಅವರಿಗೆ ಕೋಲು ತೆಗೆದುಕೊಂಡು ಹೊಡೆಯುತ್ತಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಉಮೇದುವಾರಿಕೆ ಸಲ್ಲಿಸಿರುವ ಅಮೇಥಿಯಲ್ಲಿ ಇಂದು ಬೃಹತ್ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ಈ ಸಮಯ ರಾಹುಲ್ ಗಾಂಧಿ ಚೌಕೀದಾರ್ ಎಂದರೆ ಜನ 'ಚೋರ್ ಹೇ' ಎಂದರು ಈ ಸಮಯ ಎದುರಿಗಿದ್ದ ಪತ್ರಕರ್ತರು ನಗುತ್ತಿದ್ದರು ಇದನ್ನು ಕಂಡು ರಾಹುಲ್ ಗಾಂಧಿ ಮೇಲಿನಂತೆ ಹೇಳಿದರು.
'ಪರ್ತಕರ್ತರು ನಗುತ್ತಿದ್ದಾರೆ, ಅವರ ನಗುವಿಗೆ ಕಾರಣ ನಾನು ಹೇಳುತ್ತೇನೆ, ಪತ್ರಕರ್ತರು ತಮ್ಮ ಮನದ ಮಾತು ಬರೆದರೆ ಮೋದಿ ಎರಡು ಏಟು ಹೊಡೆಯುತ್ತಾರೆ, ಹಾಗಾಗಿ ಅವರು ಮೋದಿ ಅವರ ಮನದ ಮಾತನ್ನು ನಗುತ್ತಲೇ ವರದಿ ಮಾಡಬೇಕಾಗಿ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಮುಂದುವರೆದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ 'ಚಿಂತೆ ಮಾಡಬೇಡಿ, 2019ರ ಚುನಾವಣೆ ನಂತರ ನೀವು ಭಯಬಿಟ್ಟು ನಿಮ್ಮ ವೃತ್ತಿ ಮಾಡಬಹುದಾಗಿರುತ್ತದೆ, ಆಗ ನಮ್ಮ ಬಗ್ಗೆಯೂ ಟೀಕೆ ಮಾಡುವಹಾಗಿದ್ದರೆ ಮಾಡಿ ಚಿಂತೆ ಇಲ್ಲ' ಎಂದು ರಾಹುಲ್ ಗಾಂಧಿ ಹೇಳಿದರು.
ಮೋದಿ ವಿರುದ್ಧ ಬರೆದರೆ ಅಥವಾ ವರದಿ ಮಾಡಿದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಅವರು ಹೇಳುವ ಯತ್ನವನ್ನು ತಮ್ಮ ಭಾಷಣದಲ್ಲಿ ಮಾಡಿದರು.
#WATCH Rahul Gandhi in Amethi: Press wale has rahe hain kyunki inhone agar apne 'mann ki baat' kardi to inko do dande padenge, Narendra Modi ji maarenge........ghabraiye mat 2019 ke chunaav ke baad aapko jo likhna ho likhna, humare khilaaf bhi likhna hoga likh lena. pic.twitter.com/PxQOl7jTYB
— ANI UP (@ANINewsUP) April 22, 2019
ರಾಹುಲ್ ಗಾಂಧಿ ಅವರು ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಅವರಿಗೆ ಎದುರಾಗಿ ಬಿಜೆಪಿಯ ಸ್ಮೃತಿ ಇರಾನಿ ಅವರು ಸ್ಪರ್ಧಿಸಿದ್ದಾರೆ. ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ಕೇರಳದ ವೈನಾಡಿನಿಂದಲೂ ಚುನಾವಣೆಗೆ ಸ್ಪರ್ಧಿಸಿದ್ದಾರೆ.
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications