ಗಂಡು ಮಗು ಹೆರಲಿಲ್ಲವೆಂದು ಹೆಂಡತಿಯನ್ನು ತುಂಡು-ತುಂಡಾಗಿ ಕತ್ತರಿಸಿ ಮಿಕ್ಸಿಗೆ ಹಾಕಿದ
ಲಖನೌ, ಜನವರಿ 16: ಗಂಡು ಮಗುವನ್ನು ಹೆರಲಿಲ್ಲವೆಂದು ಹೆಂಡತಿಯನ್ನು ಮಗಳ ಎದುರೇ ತುಂಡು-ತುಂಡಾಗಿ ಕಡಿದು, ಹಿಟ್ಟು ರುಬ್ಬುವ ಯಂತ್ರಕ್ಕೆ ಹಾಕಿ ರುಬ್ಬಿ, ಉಳಿದ ದೇಹದ ಭಾಗವನ್ನು ಸುಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ರಾಯ್ ಬರೇಲಿ ಬಳಿ ಘಟನೆ ನಡೆದಿದ್ದು, ರವೀಂದ್ರ ಕುಮಾರ್ (35) ಎಂಬಾತ ತನ್ನ 27 ವರ್ಷದ ಗರ್ಭಿಣಿ ಹೆಂಡತಿ ಊರ್ಮಿಳಾಳನ್ನು ಜನವರಿ 4 ರಂದು ಮನೆಯಲ್ಲಿಯೇ ಕೊಂದು ತುಂಡು-ತುಂಡು ಮಾಡಿ ಕೆಲವು ಭಾಗವನ್ನು ಮಿಕ್ಸಿಗೆ ಹಾಕಿ ನಂತರ ಉಳಿದ ದೇಹದ ಭಾಗವನ್ನು ರಾಯ್ ಬರೇಲಿ ನಗರದ ಹೊರವಲಯದಲ್ಲಿ ಬಿಸಾಡಿದ್ದಾನೆ. ಈ ಎಲ್ಲಾ ರಾಕ್ಷಸೀ ಕೃತ್ಯವನ್ನು ತನ್ನ ಮಗಳ ಎದುರೇ ಆತ ಮಾಡಿದ್ದಾನೆ.
ಜನವರಿ 4 ರಂದೇ ಆತ ಕೊಲೆ ಮಾಡಿದ್ದ. ಆತನ ಮಗಳು ಕಳೆದ ಮಂಗಳವಾರ ತನ್ನ ಅಜ್ಜಿಯ ಮನೆಗೆ ಹೋಗಿ ನಡೆದ ಘಟನೆಯನ್ನೆಲ್ಲಾ ಹೇಳಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದ್ದು ಘಟನೆ ನಂತರ ತಲೆಮರೆಸಿಕೊಂಡಿದ್ದ ಪಾಪಿ ಪತಿ ರವೀಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ರವೀಂದ್ರನಿಗೆ 2011 ರಲ್ಲಿ ಊರ್ಮಿಳಾ ಜೊತೆ ವಿವಾಹವಾಗಿ 11 ಮತ್ತು 8 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದರು. ಈಗ ಮತ್ತೆ ಹೆಂಡತಿ ಗರ್ಭಿಣಿ ಆಗಿದ್ದರು. ಆದರೆ ಈ ಭಾರಿಯೂ ಹೆಣ್ಣು ಮಗುವೇ ಆಗುತ್ತದೆಂದುಕೊಂಡು ಸಿಟ್ಟಿನಲ್ಲಿ ಹೆಂಡತಿಯನ್ನು ಕೊಂದಿದ್ದಾನೆ.
ಹೆಂಡತಿಯನ್ನು ಕೊಂದ ನಂತರ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಹೆಂಡತಿ ಕಾಣೆ ಆಗಿದ್ದಾಳೆ ಎಂದು ದೂರು ಸಹ ನೀಡಿದ್ದ ರವೀಂದ್ರ. ಊರ್ಮಿಳಾ ಸಹೋದರಿ ಸಹ ಜನವರಿ 10 ರಂದು ದೀಹ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ರವೀಂದ್ರನ ದೊಡ್ಡ ಮಗಳು ಹೇಳಿರುವಂತೆ ಊರ್ಮಿಳೆಯ ಕೊಲೆಯಲ್ಲಿ ರವೀಂದ್ರನ ತಂದೆ ಕರಂ ಚಂದರ್, ಸಹೋದರರಾದ ಸಂಜೀವ್, ಬ್ರಿಜೆಶ್ ಸಹ ಜೊತೆಯಾಗಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿರುವ ರವಿಂದ್ರ ತಾನು ಹರಿತವಾದ ಆಯುಧದಿಂದ ಹೆಂಡತಿಯನ್ನು ಕೊಂದು ತುಂಡಾಗಿ ಕತ್ತರಿಸಿ ಸಹೋದರನ ಫ್ಲೋರ್ ಮಿಲ್ನಲ್ಲಿ ದೇಹದ ಭಾಗಗಳನ್ನು ರುಬ್ಬಿ, ಉಳಿದ ದೇಹದ ಭಾಗಗಳನ್ನು ಸುಟ್ಟು ಎಲ್ಲವನ್ನೂ ರಾಯ್ ಬರೇಲಿಯಿಂದ ನಾಲ್ಕು ಕಿ.ಮೀ ಹೊರಕ್ಕೆ ಸಾಗಿಸಿ ಕಂದಕಕ್ಕೆ ಬಿಸಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications