ಕರಾಳ ಕ್ಷಣ: ಜೀವ ಉಳಿಸಿಕೊಳ್ಳಲು ಹೆಣಗಳ ಮೇಲೆ ಹತ್ತುತ್ತಿದ್ದರು!
ಆಗ್ರಾ, ಜುಲೈ 09: "ಬಸ್ಸಿನಿಂದ ಹೊರಬಂದು ಜೀವ ಉಳಿಸಿಕೊಳ್ಳುವ ಸಲುವಾಗಿ ಕೆಲವರು ಹೆಣಗಳ ಮೇಲೆ ಹತ್ತುತ್ತಿದ್ದರು" ಎಂದು ಯಮುನಾ ಎಕ್ಸ್ ಪ್ರೆಸ್ ವೇ ದುರಂತದ ಕರಾಳ ಕ್ಷಣಗಳನ್ನು ಪ್ರತ್ಯಕ್ಷದರ್ಶಿ, ಗಾಯಾಳುವೊಬ್ಬರು ಹಂಚಿಕೊಂಡಿದ್ದಾರೆ.
ಜುಲೈ 09 ರಂದು ಲಕ್ನೋದಿಂದ ದೆಹಲಿಗೆ ಹೊರಟಿದ್ದ ಡಬಲ್ ಡೆಕ್ಕರ್ ಬಸ್ಸೊಂದು ಯಮುನಾ ಎಕ್ಸ್ ಪ್ರೆಸ್ ವೇಲ್ಲಿ ತೆರಳುತ್ತಿದ್ದಾಗ ನಲವತ್ತು ಅಡಿ ಆಳದ ಪ್ರಪಾತಕ್ಕೆ ಬಿದ್ದಿತ್ತು. ಈ ಘಟನೆಯಲ್ಲಿ ಬಸ್ಸಿನಲ್ಲಿದ್ದ 53 ಜನರಲ್ಲಿ 29 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮಿಕ್ಕವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆಯ ಬಗ್ಗೆ ರಿಷಿ ಯಾದವ್ ಎಂಬ ಗಾಯಾಳುವೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. "ಬೆಳಗ್ಗಿನ ಜಾವವಾಗಿದ್ದರಿಂದ ನಾವೆಲ್ಲರೂ ಗಾಢ ನಿದ್ದೆಯಲ್ಲಿದ್ದೆವು. ಇದ್ದಕ್ಕಿದ್ದಂತೇ ಬಸ್ಸು ದೊಡ್ಡ ಸಪ್ಪಳದೊಂದಿಗೆ ಕೆಳಗೆ ಬಿತ್ತು. ಒಂದು ನಿಮಿಷ ಆಕ್ರಂದನ ಮುಗಿಲುಮುಟ್ಟಿತ್ತು. ನಂತರ ಎಲ್ಲವೂ ಸ್ತಬ್ಧವಾಗಿತ್ತು. ಹೋದವರು ಹೋದರು, ಆದರೆ ಜೀವ ಇದ್ದವರು ಹೇಗಾದರು ಮಾಡಿ ಬಸ್ಸಿನಿಂದ ಹೊರಬರಬೇಕಲ್ಲ, ಹಲವರು ಹೆಣಗಳ ಮೇಲೆಯೇ ಹತ್ತಿಬಂದು ಜೀವ ಉಳಿಸಿಕೊಂಡರು. ಅವರಿಗೆ ಬೇರೆ ದಾರಿಯೂ ಇರಲಿಲ್ಲ" ಎಂದು ರಿಷಿ ಆ ದುರಂತವನ್ನು ನೆನಪಿಸಿಕೊಂಡರು.

"ಬಸ್ಸು ತುಂಬಾ ವೇಗವಾಗಿ ಚಲಿಸುತ್ತಿತ್ತು ಎನ್ನಿಸುತ್ತದೆ. ಆದರೆ ಚಾಲಕನಿಗೆ ಮಂಪರು ಹತ್ತಿರಬೇಕು. ಆದ್ದರಿಂದ ನಿಯಂತ್ರಣ ತಪ್ಪಿ ಬಸ್ಸು ಕೆಳಗೆ ಬಿದ್ದಿದೆ" ಎಂದು ರಿಷಿ ಹೇಳಿದ್ದಾರೆ.
ಸೋಮವಾರ ಬೆಳಗ್ಗಿನ ಜಾವ ಸುಮಾರು 4:15 ರ ಸಮಯದಲ್ಲಿ ಘಟನೆ ನಡೆದಿದ್ದು, ಇದುವರೆಗೂ ಮೃತರಲ್ಲಿ ಹಲವರ ಗುರುತನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಕೋಮಾ ಸ್ಥಿತಿಯಲ್ಲಿದ್ದಾರೆ.
ಇನ್ನು ಅರಿಬಾ ಖಾನ್ ಎಂಬ ಮೃತ ಯುವತಿಯ ತಾಯಿ ಈ ಕರಾಳ ಘಟನೆಯ ಬಗ್ಗೆ ಮಾತನಾಡಿದ್ದು, "ತಂದೆಗೆ ಹೃದಯಾಘಾತವಾಗಿದ್ದರಿಂದ ಮನೆಗೆ ಬಂದು ಮುಂಬೈಗೆ ವಾಪಸ್ಸಾಗುತ್ತಿದ್ದಳು.ಈ ಸಂದರ್ಭದಲ್ಲಿ ಅಪಘಾತವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾಳೆ . ನಮ್ಮ ಕುಟುಂಬದಲ್ಲಿ ಆದಾಯ ಗಳಿಸುತ್ತಿದ್ದ ಏಕೈಕ ಸದಸ್ಯೆ ಆಕೆ. ಮುಂದೆ ನಮ್ಮ ಗತಿ ಏನು?" ಎಂದು ಕಣ್ಣೀರು ಇಡುತ್ತಾರೆ ಅವರ ತಾಯಿ.
ತಮ್ಮ ಗೃಹಪ್ರವೇಶಕ್ಕೆಂದು ಲಕ್ನೋಕ್ಕೆ ಬಂದಿದ್ದ ಅವಿನಾಶ್ ಅವಸ್ಥಿ ಸೋಮವಾರ ಆಫೀಸಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆಯಲ್ಲಿ ಮೃತರಾಗಿದ್ದಾರೆ.
ಈ ಕರಾಳ ಘಟಣೆಯ ಹಿಂದೆ ಕರುಳುಕಿವುಚುವ ಇಂಥ ಹಲವು ಕಥೆಗಳಿದ್ದು, ಮೃತರ ಗುರುತನ್ನು ಪತ್ತೆ ಮಾಡುವುದೇ ಹರಸಾಹಸವೆನ್ನಿಸಿದೆ.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications