ಆನೆ ಮೇಲೆ ಯೋಗ ಮಾಡಲು ಹೋಗಿ ಉರುಳಿ ಬಿದ್ದ ರಾಮ್ದೇವ್: ವೈರಲ್ ವಿಡಿಯೋ
ಮಥುರಾ, ಅಕ್ಟೋಬರ್ 13: ವೇದಿಕೆ, ಮೈದಾನ ಸೇರಿದಂತೆ ವಿವಿಧೆಡೆ ಯೋಗ ಪ್ರದರ್ಶನ ಮಾಡುತ್ತಿದ್ದ ಯೋಗ ಗುರು ಬಾಬಾ ರಾಮ್ದೇವ್ ಆನೆಯ ಮೇಲೆ ಯೋಗಾಸನ ಮಾಡಲು ಹೋಗಿ ಉರುಳಿಬಿದ್ದು ನಗೆಪಾಟಲಿಗೀಡಾಗಿದ್ದಾರೆ. ರಾಮ್ದೇವ್ ಅವರ 'ಗಜ ಯೋಗಾಸನ'ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಮಥುರಾದ ರಾಮನಾರತಿಯಲ್ಲಿನ ಮಹಾವನದಲ್ಲಿ ಇರುವ ಗುರು ಶರಣನ್ ಆಶ್ರಮದಲ್ಲಿ ಸೋಮವಾರ ನಡೆದಿದೆ ಎನ್ನಲಾಗಿದೆ. ಸನ್ಯಾಸಿಗಳಿಗೆ ಯೋಗಾಭ್ಯಾಸದ ಬೋಧನೆ ಮಾಡುತ್ತಿದ್ದ ವೇಳೆ ರಾಮ್ದೇವ್ ಆನೆಯ ಮೇಲೆ ಕುಳಿತು ವಿಭಿನ್ನ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಈ ಘಟನೆ 22 ಸೆಕೆಂಡುಗಳ ವಿಡಿಯೋದಲ್ಲಿ ದಾಖಲಾಗಿದೆ.
ಆನೆಯ ಮೇಲೆ ಕುಳಿತ ಬಾಬಾ ರಾಮ್ದೇವ್ ಯೋಗಾಸನ ಮಾಡುವುದು ವಿಡಿಯೋದಲ್ಲಿ ದಾಖಲಾಗಿದೆ. ಯೋಗಾಸನ ಮಾಡುವ ಸಂದರ್ಭದಲ್ಲಿ ಆನೆ ಕೊಂಚ ಅಲುಗಾಡಿದೆ. ಆಗ ಸಮತೋಲನ ತಪ್ಪಿದ ರಾಮ್ದೇವ್ ಕೆಳಗೆ ಬಿದ್ದಿದ್ದಾರೆ. ಮುಂದೆ ಓದಿ.

ಅಪಾಯದಿಂದ ಪಾರಾದ ರಾಮ್ದೇವ್
ಆನೆಯ ಬೆನ್ನಿನ ಮೇಲಿಂದ ನೆಲಕ್ಕೆ ಬಿದ್ದರೂ ಅದೃಷ್ಟವಶಾತ್ ಬಾಬಾ ರಾಮ್ದೇವ್ ಅವರಿಗೆ ಗಾಯಗಳಾಗಿಲ್ಲ. ಸಾವರಿಸಿಕೊಂಡು ನೆಲದಿಂದ ಎದ್ದ ಕೂಡಲೇ ರಾಮ್ದೇವ್ ಜೋರಾಗಿ ನಗುತ್ತಾ, ಎಲ್ಲರ ಮುಖದಲ್ಲಿಯೂ ನಗು ಮೂಡಿಸಿದರು.
|
ಸೈಕಲ್ನಿಂದ ಬಿದ್ದಿದ್ದ ರಾಮ್ದೇವ್
ಕೆಲವು ದಿನಗಳ ಹಿಂದಷ್ಟೇ ಮಳೆಯಿಂದ ನೆಂದಿದ್ದ ನೆಲದ ಮೇಲೆ ವೇಗವಾಗಿ ಸೈಕಲ್ ಓಡಿಸುತ್ತಾ ಹೋಗಿದ್ದ ಬಾಬಾ ರಾಮ್ದೇವ್ ತಿರುವಿನಲ್ಲಿ ಉರುಳಿ ಬಿದ್ದಿದ್ದರು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಸ್ತುವಾಗಿವೆ.
|
ದೇಶದ ಜಿಡಿಪಿ ಪತನದ ಹೋಲಿಕೆ
ಸೈಕಲ್ ಮತ್ತು ಆನೆಯಿಂದ ಬಿದ್ದ ರಾಮ್ದೇವ್ ವಿಡಿಯೋಗಳನ್ನು ಹಂಚಿಕೊಂಡಿರುವ ನೆಟ್ಟಿಗರು, ಇದು ದೇಶದ ಜಿಡಿಪಿಯ ಪತನವನ್ನು ತೋರಿಸುವ ಜಿಡಿಪಿ ಯೋಗ ಎಂದು ಲೇವಡಿ ಮಾಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದರೆ ಭ್ರಷ್ಟಾಚಾರ ಉರುಳಿ ಬೀಳುತ್ತದೆ ಎಂದು ರಾಮ್ದೇವ್ ಒಮ್ಮೆ ಹೇಳಿದ್ದರು ಎನ್ನುವ ಮೂಲಕ ಅವರು ಬಿದ್ದಿದ್ದನ್ನು ಭ್ರಷ್ಟಾಚಾರದ ಪತನಕ್ಕೆ ಹೋಲಿಸಿದ್ದಾರೆ.

ಯೋಗ ಅಲ್ಲ, ಪ್ರಚಾರ
ಆ ಆನೆಯು ಕಾಂಗ್ರೆಸ್ನಿಂದ ನಿಧಿಯನ್ನು ಪಡೆದುಕೊಂಡಿದೆ ಎಂದು ಕೆಲವರು ಹೇಳಿದ್ದರೆ, ಬಾಬಾ ರಾಮ್ದೇವ್ ಅವರು ಬೀಳುವ ಘಟನೆಗಳಿಗೆ ಕೊನೆಯೇ ಇಲ್ಲ ಎಂದು ಕೆಲವರು ಬರೆದಿದ್ದಾರೆ. ಆನೆಯ ಮೇಲೆ ಅವರು ಮಾಡುತ್ತಿದ್ದದ್ದು ಯೋಗ ಅಲ್ಲ, ಪ್ರಚಾರದ ಸ್ಟಂಟ್ ಅಷ್ಟೇ ಎಂದು ಅನೇಕರು ಟೀಕಿಸಿದ್ದಾರೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications