ಆನೆ ಮೇಲೆ ಯೋಗ ಮಾಡಲು ಹೋಗಿ ಉರುಳಿ ಬಿದ್ದ ರಾಮ್ದೇವ್: ವೈರಲ್ ವಿಡಿಯೋ
ಮಥುರಾ, ಅಕ್ಟೋಬರ್ 13: ವೇದಿಕೆ, ಮೈದಾನ ಸೇರಿದಂತೆ ವಿವಿಧೆಡೆ ಯೋಗ ಪ್ರದರ್ಶನ ಮಾಡುತ್ತಿದ್ದ ಯೋಗ ಗುರು ಬಾಬಾ ರಾಮ್ದೇವ್ ಆನೆಯ ಮೇಲೆ ಯೋಗಾಸನ ಮಾಡಲು ಹೋಗಿ ಉರುಳಿಬಿದ್ದು ನಗೆಪಾಟಲಿಗೀಡಾಗಿದ್ದಾರೆ. ರಾಮ್ದೇವ್ ಅವರ 'ಗಜ ಯೋಗಾಸನ'ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಮಥುರಾದ ರಾಮನಾರತಿಯಲ್ಲಿನ ಮಹಾವನದಲ್ಲಿ ಇರುವ ಗುರು ಶರಣನ್ ಆಶ್ರಮದಲ್ಲಿ ಸೋಮವಾರ ನಡೆದಿದೆ ಎನ್ನಲಾಗಿದೆ. ಸನ್ಯಾಸಿಗಳಿಗೆ ಯೋಗಾಭ್ಯಾಸದ ಬೋಧನೆ ಮಾಡುತ್ತಿದ್ದ ವೇಳೆ ರಾಮ್ದೇವ್ ಆನೆಯ ಮೇಲೆ ಕುಳಿತು ವಿಭಿನ್ನ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಈ ಘಟನೆ 22 ಸೆಕೆಂಡುಗಳ ವಿಡಿಯೋದಲ್ಲಿ ದಾಖಲಾಗಿದೆ.
ಆನೆಯ ಮೇಲೆ ಕುಳಿತ ಬಾಬಾ ರಾಮ್ದೇವ್ ಯೋಗಾಸನ ಮಾಡುವುದು ವಿಡಿಯೋದಲ್ಲಿ ದಾಖಲಾಗಿದೆ. ಯೋಗಾಸನ ಮಾಡುವ ಸಂದರ್ಭದಲ್ಲಿ ಆನೆ ಕೊಂಚ ಅಲುಗಾಡಿದೆ. ಆಗ ಸಮತೋಲನ ತಪ್ಪಿದ ರಾಮ್ದೇವ್ ಕೆಳಗೆ ಬಿದ್ದಿದ್ದಾರೆ. ಮುಂದೆ ಓದಿ.

ಅಪಾಯದಿಂದ ಪಾರಾದ ರಾಮ್ದೇವ್
ಆನೆಯ ಬೆನ್ನಿನ ಮೇಲಿಂದ ನೆಲಕ್ಕೆ ಬಿದ್ದರೂ ಅದೃಷ್ಟವಶಾತ್ ಬಾಬಾ ರಾಮ್ದೇವ್ ಅವರಿಗೆ ಗಾಯಗಳಾಗಿಲ್ಲ. ಸಾವರಿಸಿಕೊಂಡು ನೆಲದಿಂದ ಎದ್ದ ಕೂಡಲೇ ರಾಮ್ದೇವ್ ಜೋರಾಗಿ ನಗುತ್ತಾ, ಎಲ್ಲರ ಮುಖದಲ್ಲಿಯೂ ನಗು ಮೂಡಿಸಿದರು.
|
ಸೈಕಲ್ನಿಂದ ಬಿದ್ದಿದ್ದ ರಾಮ್ದೇವ್
ಕೆಲವು ದಿನಗಳ ಹಿಂದಷ್ಟೇ ಮಳೆಯಿಂದ ನೆಂದಿದ್ದ ನೆಲದ ಮೇಲೆ ವೇಗವಾಗಿ ಸೈಕಲ್ ಓಡಿಸುತ್ತಾ ಹೋಗಿದ್ದ ಬಾಬಾ ರಾಮ್ದೇವ್ ತಿರುವಿನಲ್ಲಿ ಉರುಳಿ ಬಿದ್ದಿದ್ದರು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಸ್ತುವಾಗಿವೆ.
|
ದೇಶದ ಜಿಡಿಪಿ ಪತನದ ಹೋಲಿಕೆ
ಸೈಕಲ್ ಮತ್ತು ಆನೆಯಿಂದ ಬಿದ್ದ ರಾಮ್ದೇವ್ ವಿಡಿಯೋಗಳನ್ನು ಹಂಚಿಕೊಂಡಿರುವ ನೆಟ್ಟಿಗರು, ಇದು ದೇಶದ ಜಿಡಿಪಿಯ ಪತನವನ್ನು ತೋರಿಸುವ ಜಿಡಿಪಿ ಯೋಗ ಎಂದು ಲೇವಡಿ ಮಾಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದರೆ ಭ್ರಷ್ಟಾಚಾರ ಉರುಳಿ ಬೀಳುತ್ತದೆ ಎಂದು ರಾಮ್ದೇವ್ ಒಮ್ಮೆ ಹೇಳಿದ್ದರು ಎನ್ನುವ ಮೂಲಕ ಅವರು ಬಿದ್ದಿದ್ದನ್ನು ಭ್ರಷ್ಟಾಚಾರದ ಪತನಕ್ಕೆ ಹೋಲಿಸಿದ್ದಾರೆ.

ಯೋಗ ಅಲ್ಲ, ಪ್ರಚಾರ
ಆ ಆನೆಯು ಕಾಂಗ್ರೆಸ್ನಿಂದ ನಿಧಿಯನ್ನು ಪಡೆದುಕೊಂಡಿದೆ ಎಂದು ಕೆಲವರು ಹೇಳಿದ್ದರೆ, ಬಾಬಾ ರಾಮ್ದೇವ್ ಅವರು ಬೀಳುವ ಘಟನೆಗಳಿಗೆ ಕೊನೆಯೇ ಇಲ್ಲ ಎಂದು ಕೆಲವರು ಬರೆದಿದ್ದಾರೆ. ಆನೆಯ ಮೇಲೆ ಅವರು ಮಾಡುತ್ತಿದ್ದದ್ದು ಯೋಗ ಅಲ್ಲ, ಪ್ರಚಾರದ ಸ್ಟಂಟ್ ಅಷ್ಟೇ ಎಂದು ಅನೇಕರು ಟೀಕಿಸಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications