ಅಖಿಲೇಶ್ ರಥಯಾತ್ರೆಯಲ್ಲಿ ಅಂಬೇಡ್ಕರ್ ಪ್ರತಿಮೆ ಉಡುಗೊರೆ
ಲಕ್ನೋ ಡಿಸೆಂಬರ್ 29: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಮರಳುವ ಅವಕಾಶವನ್ನು ಹೆಚ್ಚಿಸಲು ರಥಯಾತ್ರೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ರಾಜಕೀಯದಲ್ಲಿ ರಥಯಾತ್ರೆಗೆ ವಿಶೇಷ ರಾಜಕೀಯ ಮಹತ್ವವಿದೆ. ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸುವ ಗುರಿಯನ್ನು ಹೊಂದಿದ ಅಖಿಲೇಶ್ ಯಾದವ್ ಅವರು ಚುನಾವಣಾ ಪ್ರಚಾರದ ಭಾಗವಾಗಿ ರಥಯಾತ್ರೆಯನ್ನು ಮಾಡುತ್ತಿದ್ದಾರೆ.
ಉನ್ನಾವೊದಲ್ಲಿ ಅವರ ರಥಯಾತ್ರೆಗೆ ಅಪಾರ ಜನಸ್ತೋಮವೇ ನೆರೆದು ಅಖಿಲೇಶ್ ಯಾದವ್ ಅವರನ್ನು ಬರಮಾಡಿಕೊಂಡಿದೆ. ಕಣ್ಣಾಯಿಸಿದಲ್ಲೆಲ್ಲ ಜನರೇ ಕಾಣಿಸಿದ ಉನ್ನಾವೋದಲ್ಲಿ ಅಖಿಲೇಶ್ ರಥಯಾತ್ರೆ ನಡೆಸಿದರು. ಈ ವೇಳೆ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಉಡುಗೊರೆಗಳನ್ನು ಸ್ವೀಕರಿಸಿದರು. ಸಾರ್ವಜನಿಕರ ಗಮನ ಸೆಳೆದ ಛಾಯಾಚಿತ್ರಗಳಲ್ಲಿ ಭಗವಾನ್ ಹನುಮಾನ್ ಫೋಟೋದ ಉಡುಗೊರೆ ಕೂಡ ಸೇರಿದೆ.
ಭಗವಾನ್ ಹನುಮಂತನ ಛಾಯಾಚಿತ್ರದ ಕೆಳಭಾಗದಲ್ಲಿ ಸಮಾಜವಾದಿ ಪಕ್ಷದ 'ಬೈಸಿಕಲ್' ಚಿಹ್ನೆಯೂ ಇದೆ. ಇದನ್ನು ಅಖಿಲೇಶ್ ಯಾದವ್ಗೆ ಉಡುಗೊರೆಯಾಗಿ ನೀಡಿದ ಪಕ್ಷದ ಕಾರ್ಯಕರ್ತನ ಹೆಸರೂ ಇದೆ. ಮತ್ತೊಂದು ಛಾಯಾಚಿತ್ರದಲ್ಲಿ, ಅಖಿಲೇಶ್ ಯಾದವ್ ಭಗವಾನ್ ಹನುಮಂತನ ಪ್ರಸಿದ್ಧ ಆಯುಧವಾದ 'ಗದಾ' (ಗದೆ) ಅನ್ನು ಹಿಡಿದಿದ್ದಾರೆ. ಎಡಗೈಯಲ್ಲಿ ಗದಾ ಹಿಡಿದುಕೊಂಡ ಯಾದವ್ ಉನ್ನಾವೋ ರಸ್ತೆಯಲ್ಲಿ ಬೆಂಬಲಿಗರ ಗುಂಪನ್ನು ಸ್ವಾಗತಿಸಿದರು.