ಭಾರತದ ಕೆಲ ನಗರಗಳಲ್ಲಿ ಉಸಿರಾಡಿಸಲೂ ಸಾಧ್ಯವಿಲ್ಲ : ಡೊನಾಲ್ಡ್ ಟ್ರಂಪ್ ವ್ಯಂಗ್ಯ
ಲಂಡನ್, ಜೂನ್ 06: ಆದ್ಯತಾ ವಹಿವಾಟಿನಲ್ಲಿ ಭಾರತಕ್ಕೆ ಸುಂಕರಹಿತ ಸೌಲಭ್ಯ ನೀಡುವುದನ್ನು ಮುಂದುವರಿಸುವುದಿಲ್ಲ ಎನ್ನುವ ಮೂಲಕ ಭಾರತಕ್ಕೆ ಆಘಾತ ನೀಡಿರುವ ಟ್ರಂಪ್ ಇದೀಗ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಭಾರತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಲಂಡನ್ ಪ್ರವಾಸದಲ್ಲಿರುವ ಡೊನಾಲ್ಡ್ ಟ್ರಂಪ್ ಬ್ರಿಟಿಶ್ ಮಾಧ್ಯಮವೊಂದಕ್ಕೆ ಸಂದರ್ಶನ ನೀದುವ ಸಂದರ್ಭದಲ್ಲಿ, "ಪರಿಸರ ಮಾಲಿನ್ಯದ ಬಗ್ಗೆ ಭಾರತ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ" ಎಂದರು. "ಉತ್ತಮ ಗಾಳಿ, ಶುದ್ಧ ನೀರಿನ ಬಗ್ಗೆ ಭಾರತಕ್ಕಾಗಲೀ, ಚೀನಾ, ರಷ್ಯಾಕ್ಕಾಗಲಿ ಕಾಳಜಿ ಇಲ್ಲ" ಎಂದು ಅವರು ಸಂದರ್ಶನದಲ್ಲಿ ಹೇಳಿದರು.
ಕೆಲವರಿಗೆ ಪರಿಸರ ಪ್ರಜ್ಞೆ ಎಂಬುದಿಲ್ಲ ಎಂದ ಟ್ರಂಪ್, ಭಾರತ, ಚೀನಾ ಮತ್ತು ರಷ್ಯಾ ಹೆಸರನ್ನು ನೇರವಾಗಿಯೇ ಹೇಳಿ, ಈ ಮೂರು ದೇಶಗಳನ್ನು ದೂರಿದರು.
ಮೂರು ದಿನಗಳ ಲಂಡನ್ ಪ್ರವಾಸದಲ್ಲಿರುವ ಅವರು ಕ್ವೀನ್ ಎಲೆಜಬೆತ್ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು.

ಭಾರತಕ್ಕೆ ಪರಿಸರ ಪ್ರಜ್ಞೆ ಇಲ್ಲ!
ಬ್ರಿಟಿಶ್ ಚಾನೆಲ್ ಐಟಿವಿಗೆ ಟ್ರಂಪ್ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಜೂನ್ ಐದರಂದು ಪರಿಸರ ದಿನವಾದ ಕಾರಣ, ಪರಿಸರದ ಉಳಿವಿಗೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಗತ್ತಿನ ರಾಷ್ಟ್ರಗಳು ನಡೆಸುತ್ತಿರುವ ಪ್ರಯತ್ನವೇನು ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಉತ್ತರಿಸಿದ ಟ್ರಂಪ್, ಜಗತ್ತಿನ ಕೆಲವು ರಾಷಹ್ಟ್ರಗಳಿಗೆ ಪರಿಸರ ಪ್ರಜ್ಞೆಯೇ ಇಲ್ಲ ಎಂದರು. ಆ ಸಂದರ್ಭದಲ್ಲಿ ಭಾರತ, ಚೀನಾ ಮತ್ತು ರಷ್ಯಾ ಹೆಸರನ್ನು ಉಲ್ಲೇಖಿಸಿದರು.

ಅಮೆರಿಕದ್ದು ಸ್ವಚ್ಛ ಪರಿಸರ
"ನಾನು ಸಂತಸದಿಂದ ಹೇಳುತ್ತೇನೆ, ಜಗತ್ತಿನ ಅತ್ಯಂತ ಸ್ವಚ್ಛ ದೇಶಗಳಲ್ಲಿ ಅಮೆರಿಕ ಅಗ್ರಸ್ಥಾನ ಪಡೆಯುತ್ತದೆ. ಎಲ್ಲಾ ಅಂಕಿ-ಸಂಖ್ಯೆಗಳನ್ನು ನೋಡಿಯೇ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ಗಾಳಿ, ನೀರಿನ ಬಗ್ಗೆ ಕಾಳಜಿ ಇಲ್ಲ!
"ಚೀನಾ, ಭಾರತ ಮತ್ತು ರಷ್ಯಾ, ಇನ್ನಿತರ ದೇಶಗಳಲ್ಲಿ ಉತ್ತಮ ಗಾಳಿ ಇಲ್ಲ, ಉತ್ತಮ ನೀರೂ ಇಲ್ಲ. ಅವನ್ನು ಉತ್ತಮವಾಗಿ ಉಳಿಸಿಕೊಳ್ಳುವ ಬಗ್ಗೆ ಆ ದೇಶಗಳಿಗೆ ಕಾಳಜಿಯೂ ಇಲ್ಲ" ಎಂದು ಟ್ರಂಪ್ ದೂರಿದರು.

ಉಸಿರಾಡುವುದಕ್ಕೂ ಸಾಧ್ಯವಿಲ್ಲ!
ಭಾರತ, ಚೀನಾ, ರಷ್ಯಾ ಹೆಸರನ್ನು ಹೇಳಿದ ನಂತರ, "ಕೆಲವು ನಗರಗಳಿಗೆ ನೀವು ತೆರಳಿದರೆ ಉಸಿರಾಡುವುದಕ್ಕೂ ಸಾಧ್ಯವಿಲ್ಲ. ಅಷ್ಟು ಕೊಳಕಾಗಿರುತ್ತದೆ. ಆ ನಗರಗಳು ಯಾವವು ಎಂಬುದನ್ನು ನಾನಿಲ್ಲಿ ಉಲ್ಲೇಖಿಸುವುದಿಲ್ಲ" ಎಂದು ಟ್ರಂಪ್ ಒಗಟಾಗಿ ಮಾತನಾಡಿದರು.
-
ಇರಾನ್ ಮೇಲೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ, ಇರಾನ್ ಮುಂದೆ ಮಂಡಿಯೂರಿತೇ ಅಮೆರಿಕ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ











Click it and Unblock the Notifications