ಕೊಪ್ಪಳದಲ್ಲಿ ಪ್ರಜಾಧ್ವನಿ ಬಸ್ ಯಾತ್ರೆ: ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು
ಕೊಪ್ಪಳ, ಜನವರಿ, 18: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸಿದೆ. ಅದರ ಭಾಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೆಯೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಕುಟುಂಬದ ಮಹಿಳೆಯೊಬ್ಬರಿಗೆ ತಿಂಗಳಿಗೆ 2,000 ರೂಪಾಯಿ ಕೊಡುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಬಸ್ ಯಾತ್ರೆ ಹಮ್ಮಿಕೊಂಡಿದೆ. ಹೊಸಪೇಟೆ ಕಾರ್ಯಕ್ರಮ ಮುಗಿಸಿಕೊಂಡು ಕಾಂಗ್ರೆಸ್ ನಾಯಕರು ಬಸ್ ಮೂಲಕ ಕೊಪ್ಪಳ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರು ನೇರವಾಗಿ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಬಳಿಕ ಬಸವೇಶ್ವರ ವೃತ್ತದಿಂದ ತಾಲೂಕ ಕ್ರೀಡಾಂಗಣದವರೆಗೂ ರೋಡ್ ಶೋ ನಡೆಸಲಾಯಿತು. ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಸುಳ್ಳು ಹೇಳಿ ಯುವಕರನ್ನು ದಾರಿ ತಪ್ಪಿಸಿದ್ದು, ಯುವಕರನ್ನು ಹಾಳು ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿ
ಕೊಟ್ಟ
ಭರವಸೆ
ಏನು?
ಪ್ರಜಾಧ್ವನಿ
ಯಾತ್ರೆಯಲ್ಲಿ
ರಾಜ್ಯ
ಉಸ್ತುವಾರಿ
ರಣದೀಪ
ಸುರ್ಜೆವಾಲ,
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ.
ಶಿವಕುಮಾರ್,
ವಿಪಕ್ಷ
ನಾಯಕ
ಸಿದ್ದರಾಮಯ್ಯ,
ವಿಧಾನ
ಪರಿಷತ್
ಪ್ರತಿಪಕ್ಷ
ನಾಯಕ
ಬಿ.ಕೆ.
ಹರಿಪ್ರಸಾದ್,
ಕೆಪಿಸಿಸಿ
ಕಾರ್ಯಾಧ್ಯಕ್ಷ
ಸತೀಶ್
ಜಾರಕಿಹೋಳಿ
ಸೇರಿದಂತೆ
ಹಲವಾರು
ರಾಜ್ಯ
ಹಾಗೂ
ಸ್ಥಳೀಯ
ನಾಯಕರು
ಭಾಗಿಯಾಗಿದ್ದರು.
ಈ
ವೇಳೆ
ಮಾತನಾಡಿದ
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ.
ಶಿವಕುಮಾರ್
ನಾನು
ಗವಿಸಿದ್ದೇಶ್ವರ
ಸನ್ನಿಧಿಯಲ್ಲಿ
ನಿಂತು
ಹೇಳುತ್ತಿದ್ದೇನೆ
ನಮ್ಮ
ಪಕ್ಷ
ಅಧಿಕಾರಕ್ಕೆ
ಬಂದರೆ
200
ಯುನಿಟ್
ಉಚಿತ
ವಿದ್ಯುತ್
ಹಾಗೂ
ಕುಟುಂಬದ
ಮಹಿಳೆಯೊಬ್ಬರಿಗೆ
ತಿಂಗಳಿಗೆ
2,000
ರೂಪಾಯಿ
ಕೊಡುವುದಾಗಿ
ಹೇಳಿದರು.
ಸಿದ್ದರಾಮಯ್ಯ
ಪರ
ಜಯಘೋಷ
ಸಿದ್ದರಾಮಯ್ಯ
ಭಾಷಣ
ಆರಂಭಿಸಲು
ವೇದಿಕೆ
ಮೇಲೆ
ಬಂದಾಗ
ನೆರೆದಿದ್ದ
ಅಭಿಮಾನಿಗಳು
ಸಿದ್ದರಾಮಯ್ಯ
ಪರ
ಜಯಘೋಷ
ಕೂಗಿದರು.
ಈ
ವೇಳೆ
ಸಿದ್ದರಾಮಯ್ಯ
ಅಭಿಮಾನಿಗಳಿಗೆ
ಸುಮ್ಮನಿರಲು
ಹೇಳಿದ
ಬಳಿಕ
ಸುಮ್ಮನಾದರು.
ಒಟ್ಟಿನಲ್ಲಿ
ವಿಧಾನಸಭೆ
ಚುನಾವಣೆಯಲ್ಲಿ
ಕೊಪ್ಪಳ
ಜಿಲ್ಲೆಯ
ಐದು
ವಿಧಾನಸಭಾ
ಕ್ಷೇತ್ರಗಳಲ್ಲಿ
ಶತಾಯುಗತಾಯ
ಗೆಲ್ಲಲೇಬೇಕೆಂದು
ಪಣತೊಟ್ಟಿರುವ
ಕಾಂಗ್ರೆಸ್
ಪ್ರಜಾಧ್ವನಿ
ಯಾತ್ರೆ
ಹಮ್ಮಕೊಂಡಿದ್ದು,
ಈ
ಯಾತ್ರೆ
ಎಷ್ಟರಮಟ್ಟಿಗೆ
ಫಲ
ನೀಡುತ್ತದೆಯೋ
ಎನ್ನುವುದನ್ನು
ಕಾದುನೋಡಬೇಕಿದೆ.