ಕೊಪ್ಪಳದ ಬಳಿ ಭೀಕರ ಅಪಘಾತ 4 ಸಾವು, 8 ಮಂದಿಗೆ ಗಾಯ
ಕೊಪ್ಪಳ, ಫೆಬ್ರವರಿ 08: ಇಲ್ಲಿನ ಕುಕನೂರಿನ ಬನ್ನಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ -63 ರಲ್ಲಿ ಟ್ರ್ಯಾಕ್ಟರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಗುರುವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದು. 8 ಜನ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಉತ್ತರಾಖಂಡದಲ್ಲಿ ಕಣಿವೆಗುರುಳಿದ ಕಾರು: 8 ಜನ ದುರ್ಮರಣ
ಮೃತರನ್ನು ಚನ್ನಪ್ಪ ಈರಪ್ಪ ಹಡಪದ (35), ಈರಮ್ಮ ಹಡಪದ (55), ಬಿಬಿಜಾನ್ ಕವಲೂರು (40) ಮಹಮದ್ ರಫಿ (19). ಎಲ್ಲರೂ ಬನ್ನಿಕೊಪ್ಪ ಗ್ರಾಮದವರು ಎಂದು ತಿಳಿದು ಬಂದಿದೆ. ಡೀಸೆಲ್ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮುಂಜಾನೆ ಚಾಲಕ ನಿದ್ದೆಯಲ್ಲಿದ್ದ ಕಾರಣ ಅಪಘಾತ ಸಂಭವಿಸಿದೆ ಎಂದು ಅನುಮಾನಿಸಲಾಗಿದ್ದು. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
In Koppal a massive accident between tracker and a Diesel tanker. 4 people died, 8 injured. case booked in Kukanoor Police station.
Story first published: Thursday, February 8, 2018, 9:55 [IST]