ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬಣಕಲ್ಗೆ ಸ್ಥಾನ
ನವದೆಹಲಿ, ಮೇ 21: ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನೆಸ್ಕೋ ವತಿಯಿಂದ ತಯಾರಾಗುತ್ತಿರುವ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಹಿರೇಬಣಕಲ್ ಸ್ಥಾನ ಪಡೆದಿದೆ.
ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಿರೇಬಣಕಲ್ ಸೇರಿದಂತೆ ಭಾರತದ ಇತರ ಆರು ಐತಿಹಾಸಿಕ ಸ್ಥಳಗಳು ಜಾಗ ಪಡೆದಿವೆ. ಭಾರತದ ಪ್ರಾಚ್ಯವಸ್ತುಗಳ ಇಲಾಖೆ (ಎಎಸ್ಐ) ಒಟ್ಟು 9 ಸ್ಥಾನಗಳ ವಿವರಗಳನ್ನು ಹಾಗೂ ಅವುಗಳ ಮಹತ್ವವನ್ನು ದಾಖಲಿಸಿ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಯುನೆಸ್ಕೋಗೆ ಮನವಿ ಮಾಡಿತ್ತು.
ಅವುಗಳಲ್ಲಿ 6 ಸ್ಥಳಗಳನ್ನು ಯುನೆಸ್ಕೋ ಆಯ್ಕೆ ಮಾಡಿಕೊಂಡಿದ್ದು, ಈ ಮೂಲಕ ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಒಟ್ಟು ಪಾರಂಪರಿಕ ಸ್ಥಳಗಳ ಸಂಖ್ಯೆ 48ಕ್ಕೇರಿದೆ.

ಹಿರೇಬಣಕಲ್ ವಿಶೇಷವೇನು?
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಪಶ್ಚಿಮಕ್ಕೆ ಸುಮಾರು 10 ಕಿ.ಮೀ ದೂರದಲ್ಲಿ ಹಿರೇಬಣಕಲ್ ಇದೆ. ಇದೊಂದು ಗುಡ್ಡಗಾಡು ಪ್ರದೇಶವಾಗಿದ್ದು, ಮನುಷ್ಯನ ವಿಕಾಸ ಹಂತದ ಪ್ರಮುಖ ಘಟ್ಟವಾದ ಶಿಲಾಯುಗದ ಅಂತಿಮ ಹಂತ ನವಶಿಲಾಯುಗದ ಕಾಲಘಟ್ಟದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಈ ಜಾಗವನ್ನು ಬಳಸಿರುವ ಕುರುಹುಗಳಿವೆ ಎಂದು ತಿಳಿದುಬಂದಿದೆ.
ಇದಕ್ಕೆ ಸಂಬಂಧಪಟ್ಟಂತೆ ಅತೀ ದೊಡ್ಡ ಸ್ಮಶಾನವೊಂದು ಇದ್ದು, 1955ರಿಂದಲೇ ಭಾರತೀಯ ಪ್ರಾಚ್ಯವಸ್ತು ಇಲಾಖೆಯ (ಧಾರವಾಡ ವೃತ್ತ) ಸುಪರ್ದಿಯಲ್ಲಿರುವ ಈ ಪ್ರದೇಶ, ದಕ್ಷಿಣ ಭಾರತದಲ್ಲಿ ಪತ್ತೆಯಾದ 2000ಕ್ಕೂ ಹೆಚ್ಚು ನವಶಿಲಾಯುಗದ ಸ್ಮಶಾನಗಳಲ್ಲೇ ಅತೀ ದೊಡ್ಡದು ಎಂದು ಹೇಳಲಾಗಿದೆ.

ಬೆಟ್ಟದ ವೈಶಿಷ್ಟ್ಯವೇನು?
- 7 ಗುಡ್ಡ ಪ್ರದೇಶದ ಗುಹೆಗಳಲ್ಲಿ ಆದಿ ಮಾನವರು ಚಿತ್ರಿಸಿದ ಗುಹಾಂತರ ಚಿತ್ರಗಳು
- ಮೌರ್ಯರ ಬೆಟ್ಟದಲ್ಲಿ ಶಿಲಾಸಮಾಧಿ
- ಪ್ರವಾಸೋದ್ಯಮಕ್ಕೆ ಅನುಕೂಲ, ಸ್ಥಳೀಯರಿಗೆ ಉದ್ಯೋಗಾವಕಾಶ
ಹೊಸದಾಗಿ ಆಯ್ಕೆಯಾದ ಸ್ಥಳಗಳು
Recommended Video
- ಹಿರೇಬಣಕಲ್ (ಕೊಪ್ಪಳ)
- ಸಾತ್ಪುರ ಹುಲಿ ಮೀಸಲು ಪ್ರದೇಶ (ಮಧ್ಯಪ್ರದೇಶ)
- ವಾರಾಣಸಿಯ ನದಿ ಬಯಲು (ಉತ್ತರ ಪ್ರದೇಶ)
- ಮರಾಠಾ ಮಿಲಿಟರಿ ಪಾರಂಪರಿಕ ಕಟ್ಟಡ (ಮಹಾರಾಷ್ಟ್ರ)
- ನರ್ಮದಾ ನದಿ ಕಣಿವೆಯ ಬೇಡಘಾಟ್ ಲಾಮಾಘಾಟ್ (ಮಧ್ಯಪ್ರದೇಶ)
- ಕಾಂಚೀಪುರಂ ದೇವಸ್ಥಾನಗಳು (ತಮಿಳುನಾಡು)
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications