Get Updates
Get notified of breaking news, exclusive insights, and must-see stories!

'ಈ ರಾಷ್ಟ್ರವು ಎಲ್ಲರಿಗೂ ಸೇರಿದೆ': ಸ್ವಾತಂತ್ರ್ಯ ಹಿನ್ನೆಲೆ ಹಾಡು ಬರೆದ ಮಮತಾ

ಕೋಲ್ಕತ್ತಾ, ಆ. 15: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಏಕತೆ ಮತ್ತು ಜನರ ಸಂಕೇತವಾಗಿ ಹಾಡನ್ನು ಬರೆದಿದ್ದಾರೆ. ಮಮತಾ ಬ್ಯಾನರ್ಜಿ ಶನಿವಾರ ತಡರಾತ್ರಿ ಈ ಹಾಡನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಈ ಹಾಡನ್ನು ಬಂಗಾಳಿ ಕಲಾವಿದರಾದ ಇಂದ್ರನಿಲ್ ಸೇನ್, ಮೊನೊಮೊಯ್ ಭಟ್ಟಾಚಾರ್ಯ, ತ್ರಿಶಾ ಪಾರುಯಿ ಮತ್ತು ದೇಬೋಜ್ಯೋತಿ ಘೋಷ್ ಹಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರ ಸಾಹಿತ್ಯವು "ದೇಶ್ ತಾ ಸೊಬಾರ್ ನಿಜರ್" ಅಂದರೆ ಈ ದೇಶವು ನಮ್ಮೆಲ್ಲರದ್ದು ಎಂದು ಹೇಳುತ್ತದೆ. ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿದ ಮಮತಾ ಬ್ಯಾನರ್ಜಿ, ''75 ನೇ ಸ್ವಾತಂತ್ರ್ಯ ದಿನಾಚರಣೆಯಂದು, ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಗುರಿಯನ್ನು ಹೊಂದಿರುವ ಎಲ್ಲಾ ಶಕ್ತಿಗಳ ವಿರುದ್ಧ ನಮ್ಮ ಧ್ವನಿಯನ್ನು ಬಲಪಡಿಸಲು ನಾವೆಲ್ಲರೂ ಒಟ್ಟಾಗೋಣ. ಈ ದಿನಕ್ಕಾಗಿ ಸುದೀರ್ಘ ಮತ್ತು ಕಠಿಣ ಹೋರಾಟ ಮಾಡಿದವರ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು,'' ಎಂದು ಹೇಳಿದ್ದಾರೆ. ಹಾಗೆಯೇ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಹಾರ್ದಿಕ ಶುಭಾಶಯಗಳು. ಜೈ ಹಿಂದ್ ಎಂದು ಟ್ವೀಟ್‌ ಮಾಡಿದ್ದಾರೆ.

ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕದ 74 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿಯೂ ಭಾರತ ಸರಳವಾಗಿ ಆಚರಣೆ ಮಾಡಿದೆ. ಈಗ 75 ನೇ ಸ್ವಾತಂತ್ರ್ಯ ದಿನಾಚರಣೆಯ ಈ ಅಮೃತ ಮಹೋತ್ಸವದಂದು ಕೂಡಾ ಭಾರತವು ಎರಡನೇಯ ಕೊರೊನಾ ವೈರಸ್‌ ಸಾಂಕ್ರಾಮಿಕ ಅಲೆಯ ಸಂದರ್ಭದಲ್ಲಿದೆ. ಹಾಗೆಯೇ ಮುಂದೆ ಮಕ್ಕಳಿಗೆ ಹೆಚ್ಚು ಪ್ರಭಾವ ಬೀರಬಲ್ಲ ಮೂರನೇ ಕೋವಿಡ್‌ ಅಲೆಯ ಭೀತಿಯಲ್ಲಿದೆ. ಈ ನಡುವೆ ಕೊರೊನಾ ವೈರಸ್‌ ರೂಪಾಂತರ ಡೆಲ್ಟಾದ ರೂಪಾಂತರ ಡೆಲ್ಟಾ ಪ್ಲಸ್‌ ದೇಶದಲ್ಲಿ ಹೆಚ್ಚು ವ್ಯಾಪಸುತ್ತಲಿದೆ. ಮಹಾರಾಷ್ಟ್ರದಲ್ಲಿ ಅಧಿಕ ಡೆಲ್ಟಾ ಪ್ಲಸ್‌ ಪ್ರಕರಣಗಳು ವರದಿಯಾಗುತ್ತಿದೆ.

 This nation belongs to all: Mamata Banerjee pens song on 75th Independence Day

ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕವನ್ನು 75 ನೇ ಸ್ವಾತಂತ್ರದ ಸಂಭ್ರಮಕ್ಕಾಗಿ ಸ್ಮಾರಕದ ಭಾಗದಲ್ಲಿ 7,500 ಚದರ ಅಡಿಗಳಷ್ಟು ಬೃಹತ್ ತ್ರಿವರ್ಣವನ್ನು ಹೊದಿಸಲಾಗಿದೆ. ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನ ಬಿಳಿ ಅಮೃತಶಿಲೆ ರಾಷ್ಟ್ರೀಯ ಧ್ವಜದ ಮೂರು ಬಣ್ಣಗಳಿಗೆ ಒತ್ತು ನೀಡುತ್ತದೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರು ಮತ್ತೊಂದು ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಬೃಹತ್ ಧ್ವಜವನ್ನು ಬಿಡುಗಡೆ ಮಾಡಲಾಗುವುದು ಎಂದು ಪಿಟಿಐ ವರದಿ ಮಾಡಿದೆ.

ಹಿಮಾಲಯ ಪರ್ವತಾರೋಹಣ ಸಂಸ್ಥೆಯಿಂದ ಹೊಲಿಯಲ್ಪಟ್ಟ ಧ್ವಜವನ್ನು ಕೋಲ್ಕತ್ತಾ ನಗರದ ನಿಜವಾದ ಪ್ರತಿಮೆಯಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನ ತಾರಸಿಯಲ್ಲಿ ಕೇವಲ ಒಂದು ದಿನ ಮಾತ್ರ ಹಾಕಲಾಗುತ್ತದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಐದು ದಿನಗಳ ದೆಹಲಿ ಭೇಟಿ ಮಾಡಿದ್ದು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ಚುನಾವಣೆಯ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ ಎಂಬುವುದು ಸ್ಪಷ್ಟವಾಗಿದೆ. ಹಾಗೆಯೇ ಮಮತಾ ಬ್ಯಾನರ್ಜಿ ತನ್ನ ಐದು ದಿನಗಳ ದೆಹಲಿ ಭೇಟಿಯು ''ಯಶಸ್ವಿಯಾಗಿದೆ'' ಎಂದು ದೆಹಲಿಯಿಂದ ಹಿಂದಕ್ಕೆ ತೆರಳುವ ಸಂದರ್ಭದಲ್ಲಿ ಹೇಳಿದ್ದಾರೆ. ಹಾಗೆಯೇ ವಿರೋಧ ಪಕ್ಷಗಳನ್ನು ಒಟ್ಟು ಸೇರಿಸಿ ಮಮತಾ ಬ್ಯಾನರ್ಜಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಸಫಲ ಒಕ್ಕೂಟ ರಚಿಸಲಿದ್ದಾರೆಯೇ ಎಂಬ ಪ್ರಶ್ನೆಯೂ ಕೂಡಾ ಮೂಡಿದೆ.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+