ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಆರಂಭ, ಮುಂದಿನ ಬಜೆಟ್ ಗೆ ಕಾಯಿರಿ! ದೀದಿ ನಾಡಲ್ಲಿ ಮೋದಿ ಮೋಡಿ!

|
Google Oneindia Kannada News

ಕೋಲ್ಕತ್ತಾ, ಫೆಬ್ರವರಿ 02: "ಇದು ಈಗ ಆರಂಭ ಅಷ್ಟೆ. ಲೋಕಸಭಾ ಚುನಾವಣೆಯ ನಂತರ ನಾವು ಮಂಡಿಸುವ ಮತ್ತೊಂದು ಬಜೆಟ್ ಯುವಕರು, ರೈತರು ಮತ್ತು ಸಮಾಜದ ಎಲ್ಲ ರಂಗದ ಜನರಿಗೆ ಬೋನಸ್ ನೀಡಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ: ನಡುಗುತ್ತಾರಾ ದೀದಿ! ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ: ನಡುಗುತ್ತಾರಾ ದೀದಿ!

ಪಶ್ಚಿಮ ಬಂಗಾಳದ ಠಾಕೂರ್ ನಗರದಲ್ಲಿ ನಡೆದ ಸಮಾವೇಶದಲ್ಲಿ ಶನಿವಾರ ಮೋದಿ ಮಾತನಾಡುತ್ತಿದ್ದರು. 2019 ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೋದಿಯವರು ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ.

ಮೋದಿಯನ್ನು ಇಳಿಸುವುದೇ ವಿರೋಧಿಗಳ ಅಜೆಂಡಾ : ಆರ್‌ಎಸ್‌ಪಿ ವ್ಯಂಗ್ಯಮೋದಿಯನ್ನು ಇಳಿಸುವುದೇ ವಿರೋಧಿಗಳ ಅಜೆಂಡಾ : ಆರ್‌ಎಸ್‌ಪಿ ವ್ಯಂಗ್ಯ

"ಬಿಜೆಪಿ ಶುಕ್ರವಾರ ಮಂಡಿಸಿದ ಬಜೆಟ್ ಆರಂಭವಷ್ಟೆ. ಲೋಕಸಭಾ ಚುನಾವಣೆಯ ನಂತರ ನಾವು ಮತ್ತೆ ಅಧಿಕಾರಕ್ಕೆ ಬಂದು, ಮತ್ತೆ ಬಜೆಟ್ ಮಂಡಿಸುತ್ತೇವೆ. ಅದು ಯುವಕರು, ರೈತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರಿಗೂ ಸಹಾಯಕವಾಗಲಿದೆ." ಎಂದು ಅವರು ಹೇಳಿದರು.

Lok Sabha elections: Modi addresses rally in West Bengal

ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿದ ಮೋದಿ, 'ಸಮಾವೇಶಕ್ಕೆ ಇಷ್ಟೊದು ಜನಸಾಗರವೇ ಹರಿದುಬಂದಿದ್ದು, ಮಮತಾ ದೀದಿ ಅವರಿಗೆ ಭಯ ಮೂಡಿಸಿರಬೇಕು' ವ್ಯಂಗ್ಯವಾಡಿದರು.

ಪಶ್ಚಿಮ ಬಂಗಾಳದ ಒಟ್ಟು 42 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳನ್ನು ಗೆಲ್ಲುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ. 2014 ರಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 22 ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿರುವ ಹಿನ್ನೆಲೆಯಲ್ಲಿ ಮೋದಿ, ಅಮಿತ್ ಶಾ ಮುಂತಾದ ಗಣ್ಯರು ಪಶ್ಚಿಮ ಬಂಗಾಳದಲ್ಲಿ ಅಡಿಗಡಿಗೆ ಸಮಾವೇಶ ನಡೆಸಲಿದ್ದಾರೆ.

English summary
Prime Minister Narendra Modi addressing a public rally in Thakurnagar, West Bengal: This is just the beginning, the main budget after Lok Sabha election will have much more for the youth, farmers, and other sections of the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X