ದೀದಿ ನಿಮ್ಮ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಮೋದಿ ಬಾಂಬ್
Recommended Video
ಸೆರಾಂಪೊರ್, ಏಪ್ರಿಲ್ 29: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ಸುಮಾರು 40 ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅವರು ಟಿಎಂಸಿ ತೊರೆದು ಬಿಜೆಪಿಯನ್ನು ಸೇರಿಕೊಳ್ಳಲಿದ್ದಾರೆ ಎಂದು ಮೋದಿ ಹೇಳಿದರು.
ಪಶ್ಚಿಮ ಬಂಗಾಳದ ಸೆರಾಂಪೊರ್ನಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಮೋದಿ ಅವರು 'ದೀದಿ' ಮಮತಾ ಬ್ಯಾನರ್ಜಿ ಅವರಲ್ಲಿ ನಡುಕ ಹುಟ್ಟಿಸಿದ್ದಾರೆ. ನಾಲ್ಕನೆಯ ಹಂತದ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಅವರು ಈ ಬಾಂಬ್ ಸಿಡಿಸಿದರು.
ಬೆಡ್ ಟೀ ಕೊಟ್ಟಿದ್ದು ತಡವಾಯ್ತು, ಗಲಾಟೆಯಾಗಿದ್ದೇ ಗೊತ್ತಿಲ್ಲ ಎಂದ ಟಿಎಂಸಿ ಅಭ್ಯರ್ಥಿ!
ಬಿಜೆಪಿಯ ದಿಗ್ವಿಜಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಮೇ 23ರ ಮತ ಎಣಿಕೆಯ ದಿನದಂದು ಎಲ್ಲೆಡೆ ಬಿಜೆಪಿ ಇರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
'ನಿಮ್ಮ ಎಂಎಲ್ಎ ಗಳು ನಿಮ್ಮನ್ನು ಎಸೆದು ಬಿಟ್ಟುಬರುತ್ತಾರೆ. ಇದು ಏಕೆಂದರೆ ನೀವು ಅವರ ನಂಬಿಕೆಗೆ ಮೋಸ ಮಾಡಿದ್ದೀರಿ. ಇದು ನಿಮಗೆ ಇನ್ನು ಸಂಕಷ್ಟವಾಗಿ ಪರಿಣಮಿಸಲಿದೆ ಮಮತಾ ದೀದಿ' ಎಂದು ಹೇಳಿದರು.
Array |
40 ಶಾಸಕರು ಸಂಪರ್ಕದಲ್ಲಿದ್ದಾರೆ
'ದೀದಿ, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗ ಎಲ್ಲಡೆ ಕಮಲ ಅರಳುತ್ತದೆ. ಮತ್ತು ನಿಮ್ಮ ಶಾಸಕರು ನಿಮ್ಮನ್ನು ಬಿಟ್ಟು ಬರುತ್ತಾರೆ. ಇಂದಿಗೂ, ದೀದಿ, ನಿಮ್ಮ 40 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ' ಎಂದು ಮೋದಿ ತಿಳಿಸಿದರು.
ಪ.ಬಂಗಾಳ: ಮತಗಟ್ಟೆಯಲ್ಲಿ ಭುಗಿಲೆದ್ದ ಹಿಂಸೆ, ಲಾಠಿ ಪ್ರಹಾರ
ದೆಹಲಿ ದೂರ ಇದೆ ದೀದಿ
ಮುಷ್ಟಿಯಷ್ಟು ಸೀಟುಗಳನ್ನಿಟ್ಟುಕೊಂಡು 'ದೀದಿ' ನೀವು ದೆಹಲಿಯನ್ನು ತಲುಪಲು ಸಾಧ್ಯವಿಲ್ಲ. ದೆಹಲಿ ತುಂಬಾ ದೂರವಿದೆ. ತಮ್ಮ ಸೋದರಳಿಯನನ್ನು ಪಶ್ಚಿಮ ಬಂಗಾಳದಲ್ಲಿ ಬೆಳೆಸಲು ಮಮತಾ ಬಯಸಿದ್ದಾರೆ ಎಂದು ಮೋದಿ ಟೀಕಿಸಿದರು.
ಕಾನೂನಿನ ಭಯವೇ ಇಲ್ಲ! ಗನ್ ಹಿಡಿದು ಪ್ರಚಾರ ಮಾಡಿದ ಮಮತಾ ಬೆಂಬಲಿಗ
ಜನತೆ ನಿರ್ಧಾರ ಮಾಡಿದ್ದಾರೆ.
ನೀವು, ನಿಮ್ಮ ಕಾರ್ಯಕರ್ತರು ಮತ್ತು ನಿಮ್ಮ ಗುಂಡಾಗಳು ಎಷ್ಟು ಬೇಕಾದರೂ ಹಿಂಸಾಚಾರ ನಡೆಸಲಿ. ಆದರೆ, ಪಶ್ಚಿಮ ಬಂಗಾಳದ ಜನತೆ ತಮ್ಮ ನಿರ್ಧಾರವನ್ನು ಕೈಗೊಂಡಿದ್ದಾರೆ. ಟಿಎಂಸಿಯನ್ನು ರಾಜ್ಯದಲ್ಲಿ ಸೋಲಿಸಲಿದ್ದಾರೆ ಎಂದು ಮೋದಿ ಹೇಳಿದರು.
|
ಮತ ಹಾಕಲು ಬಿಡುತ್ತಿಲ್ಲ
ಪಶ್ಚಿಮ ಬಂಗಾಳದಲ್ಲಿ ದೀದಿ ಎಲ್ಲ ಮಿತಿಗಳನ್ನೂ ದಾಟಿದ್ದಾರೆ. ಜನರು ಮತ ಹಾಕುವುದನ್ನು ತಡೆಯಲು ಟಿಎಂಸಿಯ ಗೂಂಡಾಗಳು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಪ್ರಚಾರ ಮಾಡಲು ಅವರು ಬಿಡುತ್ತಿಲ್ಲ ಎಂದು ಆರೋಪಿಸಿದರು.