ಚಿಂತಾಮಣಿ ಹಸಿರನ್ನು ಕಾಪಾಡುತ್ತಿರುವ ಹಿರಿಯ.. ನಿಜಕ್ಕೂ ಕೋಟಿಗೊಬ್ಬ!
ಚಿಂತಾಮಣಿ, ಸೆಪ್ಟೆಂಬರ್ 21: ಚಿಂತಾಮಣಿ ನಗರಕ್ಕೆ ಕಳಶವಿಟ್ಟ0ತಿರುವ ಕೈಲಾಸಗಿರಿ, ಅಂಬಾಜಿದುರ್ಗ ಮತ್ತು ಕಾಡುಮಲ್ಲೇಶ್ವರ ಬೆಟ್ಟ ಪ್ರದೇಶಗಳಲ್ಲಿ ನೀವೇನಾದರು ಓಡಾಡಿದಲ್ಲಿ ಸುಮಾರು 70 ವರ್ಷ ವಯಸ್ಸಿನ ಹಿರಿಯ ಜೀವಿ ಅಲ್ಲಿ ಗಿಡಗಳನ್ನು ನೆಡುತ್ತಲೋ, ಇಲ್ಲ ನೆಟ್ಟಿರುವ ಗಿಡಗಳ ರಕ್ಷಣೆಗಾಗಿ ಬೇಲಿ ಹಾಕುತ್ತಲೋ ಅಥವಾ ನೀರು ನಿಲ್ಲಲು ಬದುಗಳನ್ನು ಮಾಡುತ್ತಲೋ ಕಾಣುತ್ತಾರೆ.
ಬ್ರಹ್ಮಚೈತನ್ಯ ಎನ್ನುವ ಈ ಹಿರಿಯ ಯುವಕ ಸಾಮಾನ್ಯರಲ್ಲ. ಗೌರಿಬಿದನೂರು ತಾಲ್ಲೂಕಿನ ಸೊನಗಾನಹಳ್ಳಿ ಇವರ ಜನ್ಮ ಸ್ಥಳವಾದರೂ ಚಿಂತಾಮಣಿಯನ್ನು ತಮ್ಮ ಕರ್ಮ ಭೂಮಿಯನ್ನಾಗಿ ಮಾಡಿಕೊಂಡು ಪ್ರಕೃತಿ ಸೇವೆ ಸಲ್ಲಿಸುತ್ತಿದ್ದಾರೆ.

ಜಲಾನಯನ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಇವರು ಈ ದಿನ ಸಂಜೆ ಬೆಟ್ಟದ ಕಡೆ ನಾವು ಹಾಕಿದ್ದ ಬೀಜದುಂಡೆಗಳ ಬೆಳವಣಿಗೆಯನ್ನು ವೀಕ್ಷಿಸಲು ಹೋದಾಗ ಸಿಕ್ಕರು.
ಸೊಗಸಾಗಿ ಇಂಗ್ಲೀಷ್ ಮಾತಾಡ್ತಾರೆ!
ಉತ್ತಮವಾಗಿ ಇಂಗ್ಲಿಷ್ ಕೂಡ ಮಾತಾಡುವ ಇವರು ತಮ್ಮ ಪ್ರಕೃತಿ ಸೇವೆಯ ಬಗ್ಗೆ ಹೇಳಿದ್ದಿಷ್ಟು, 'ನನ್ನ ಎಪ್ಪತ್ತು ವರ್ಷದ ಜೀವನಕ್ಕೆ ಪ್ರಕೃತಿ ಆಧಾರವಾಗಿದೆ. ಈಗ ನಿವೃತ್ತಿಯಾದ ನಂತರ ಪ್ರಕೃತಿಯ ಸೇವೆಯನ್ನು ಮಾಡಿ ಸ್ವಲ್ಪವಾದರೂ ನನ್ನ ಋಣವನ್ನು ತೀರಿಸಲು ಯತ್ನಿಸುತ್ತಿದ್ದೇನೆ!'

Recommended Video

ಇತರರೂ ಕೈ ಜೋಡಿಸಲಿ!
ಇಂಥ ಮನಸ್ಥಿತಿಯ ವ್ಯಕ್ತಿಗಳು ಕೋಟಿಗೊಬ್ಬರು. ಇವರ ಸೇವೆ ಹೀಗೆ ಮುಂದುವರೆಯಲಿ, ಇವರೊಂದಿಗೆ ಇನ್ನಷ್ಟು ಮಂದಿ ಕೈ ಜೋಡಿಸಿ ನಮ್ಮೂರಿಗೆ ಹಸಿರು ಹೊದಿಕೆಯೊಂದು ಸೃಷ್ಟಿಯಾಗಲಿ.
ಮಾಸಿಕ 20 ಸಾವಿರ ಪಿಂಚಣಿ!
ಅದೆಲ್ಲಾ ಸರಿ, ಇವರ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಅವರ ಬಳಿಯೇ ಇದೆ. ಜಲಾನಯನ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಮಾಸಿಕ 20 ಸಾವಿರ ರು. ಪಿಂಚಣಿ ಬರುತ್ತಿದೆ. ಹೀಗಾಗಿ, ಜೀವನ ನಿರ್ವಹಣೆಗೇನೂ ಕೊರತೆಯಿಲ್ಲ. ಹಾಗಾಗಿ, ತಾವು ಸಂತೋಷದಿಂದ ಪ್ರಕೃತಿ ಸೇವೆಯಲ್ಲಿ ನಿರತರಾಗಿರುವುದಾಗಿ ಅವರು ತಿಳಿಸಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications