ಸೈಟ್ ಮಾರಿ ಬಡವರಿಗೆ ಅನ್ನ ಕೊಡುತ್ತಿದ್ದಾರೆ ಕೋಲಾರದ ಈ ಸೋದರರು
ಕೋಲಾರ, ಏಪ್ರಿಲ್ 08: ದೇಶದಾದ್ಯಂತ ಕೊರೊನಾ ಆತಂಕ ಆವರಿಸಿದೆ. ಜೊತೆಗೆ ಕೊರೊನಾ ತಡೆಗೆಂದು ದೇಶಾದ್ಯಂತ ಲಾಕ್ ಡೌನ್ ಕೂಡ ಹೇರಲಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ ಕೂಲಿ ಕಾರ್ಮಿಕರು, ಬಡವರು, ರೈತರು ತತ್ತರಿಸಿ ಹೋಗಿದ್ದಾರೆ. ದಿನಗೂಲಿ ನೆಚ್ಚಿಕೊಂಡವರ ಸ್ಥಿತಿಯಂತೂ ಕೇಳುವುದೇ ಬೇಡ. ಅಸಂಘಟಿತ ಕಾರ್ಮಿಕ ವಲಯದ ಕುಟುಂಬಗಳು ಈಗ ದಿನ ದೂಡುವುದೇ ಕಷ್ಟಕರವಾಗಿದೆ.
ಇಂತಹ ಸಮಯದಲ್ಲಿ ಕೋಲಾರ ನಗರದಲ್ಲಿ ಸಹೋದರರಿಬ್ಬರು ತಮ್ಮ 25 ಲಕ್ಷ ಮೌಲ್ಯದ ಸೈಟ್ ಮಾರಿ ಬಡವರ ನೆರವಿಗೆ ನಿಂತಿದ್ದಾರೆ. ಇವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಬಡವರ ಸ್ಥಿತಿ ಕಂಡು ಮರುಗಿದ ಸೋದರರು
ಬಡವರ ಈ ಸ್ಥಿತಿಯನ್ನು ಕಂಡು ಮರುಗಿದವರು ಕೋಲಾರದ ಹೌಸಿಂಗ್ ಬೋರ್ಡ್ ಬಡಾವಣೆಯ ಸಹೋದರರಾದ ತಜ್ಮುಲ್ ಪಾಷಾ ಹಾಗೂ ಮುಜ್ಮುಲ್ ಪಾಷಾ. ಈಗ ಕೋಲಾರದಲ್ಲಿ ಕಷ್ಟದಲ್ಲಿದ್ದವರು ಫೋನ್ ಕರೆ ಮಾಡಿದರೆ, ಅವರಿಗೆ ಉಚಿತವಾಗಿ ಮನೆಗೆ ರೇಷನ್ ನೀಡುತ್ತಿದ್ದಾರೆ. ಒಂದು ಪ್ಯಾಕೆಟ್ನಲ್ಲಿ 10 ಕೆ.ಜಿ. ಅಕ್ಕಿ, ಬೇಳೆ, ಸಕ್ಕರೆ, ಗೋಧಿ ಹಿಟ್ಟು, ಸಕ್ಕರೆ, ಮೈದಾ ಹಿಟ್ಟು, ರವೆ, ಎಣ್ಣೆ, ಟೀ ಪುಡಿ, ಮಸಾಲೆ ಪದಾರ್ಥಗಳು ಸೇರಿದಂತೆ ಒಟ್ಟು15 ಬಗೆಯ ದಿನಸಿ ಪದಾರ್ಥಗಳು, ಜೊತೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡುತ್ತಿದ್ದಾರೆ.

ಬಾಳೆ ಹಣ್ಣು ವ್ಯಾಪಾರ ಇವರ ಕೆಲಸ
ಬಾಳೆ ಹಣ್ಣು ವ್ಯಾಪಾರ ಮಾಡುತ್ತಿರುವ ಈ ಸಹೋದರರು ಆಹಾರ ದಿನಸಿ ಪೂರೈಸಲು ತಮ್ಮ ಸೈಟ್ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ನಿತ್ಯ ಸಮಾಜ ಸೇವೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ತಮ್ಮ ನಿವಾಸವನ್ನೇ ದಿನಸಿ ಪದಾರ್ಥಗಳನ್ನು ಶೇಖರಣೆ ಮಾಡಿಕೊಳ್ಳಲು ಬಳಸಿಕೊಂಡಿದ್ದಾರೆ. ದಿನಸಿ ಸಾಮಗ್ರಿಗಳಿಂದ ಮನೆಯ ಕೊಠಡಿಗಳೆಲ್ಲ ತುಂಬಿ ಹೋಗಿದೆ.

ಸೈಟ್ ಮಾರಿ ಸಮಾಜ ಸೇವೆಗೆ ನಿಂತರು
ಲಾಕ್ ಡೌನ್ ನಿಂದ ಕಷ್ಟ ಅನುಭವಿಸುತ್ತಿರುವ ಮಂದಿಯನ್ನು ಕಂಡ ಈ ಅಣ್ಣ ತಮ್ಮ ತಮ್ಮ ಜಾಗವನ್ನೇ ಮಾರಿದ್ದಾರೆ. ಅದರಿಂದ ಬಂದ ಹಣದಿಂದ ಈ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇದುವರೆಗೆ 2000 ಪಾಕೆಟ್ ದಿನಸಿ ವಸ್ತುಗಳನ್ನು ಬಡವರಿಗೆ ಹಂಚಿದ್ದಾರೆ. ಈಗ ಮತ್ತೊಮ್ಮೆ 2700 ದಿನಸಿ ಪಾಕೆಟ್ ಗಳನ್ನ ಕಟ್ಟಿ ಬಡವರ ಮನೆಗಳಿಗೆ ಹಂಚುವ ಮೂಲಕ 21 ದಿನಗಳ ಕಾಲ ಮನೆಯಲ್ಲೇ ಇರುವ ಪ್ರಧಾನಿ ಮೋದಿ ಅವರ ಸಂದೇಶವನ್ನು ಪ್ರಚಾರ ಮಾಡ್ತಿದ್ದಾರೆ.

ಸಹೋದರರ ಸೇವೆಗೆ ಎಲ್ಲೆಡೆ ಮೆಚ್ಚುಗೆ
ಸಹೋದರರ ಈ ಸಮಾಜ ಸೇವೆಗೆ ನಗರದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿರುವ ಸಹೋದರರು, "ಸಮಾಜ ಸೇವೆಗೆ ಯಾವುದೇ ಜಾತಿ, ಧರ್ಮ ಬೇಧ-ಭಾವವಿಲ್ಲ. ಹೀಗಾಗೇ ನಾವು ಉಚಿತವಾಗಿ ರೇಷನ್ ನೀಡುತ್ತಿದ್ದೇವೆ. ಬಡವರು ದಯಮಾಡಿ ಹೊರಗೆ ಬಾರದೆ ಪ್ರಧಾನಿ ಮೋದಿಯವರ ಆಶಯವನ್ನು ಈಡೇರಿಸಿ. ರೇಷನ್ ಬೇಕೆಂದರೆ ತಮಗೆ ಕರೆ ಮಾಡಿದರೆ ಉಚಿತವಾಗಿ ಮನೆಗೆ ತಲುಪಿಸುತ್ತೇವೆ" ಎಂದು ತಿಳಿಸಿದ್ದಾರೆ. ನಮ್ಮನ್ನು ನೋಡಿ ಸಿರಿವಂತರು ಧಾನ ಧರ್ಮ ಮಾಡಲು ಮುಂದೆ ಬರಲಿ, ಬಡವರಿಗೆ ನೆರವಾಗಲಿ ಎಂದೂ ಮನವಿ ಮಾಡಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications