ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ : ಚುನಾವಣೆಗೂ ಮುನ್ನ 8 ಕಾಂಗ್ರೆಸ್ ನಾಯಕರ ಅಮಾನತು

|
Google Oneindia Kannada News

Recommended Video

Kolar: 8 ಕಾಂಗ್ರೆಸ್ ನಾಯಕರನ್ನ ಅಮಾನತು ಮಾಡಿದ ಕೋಲಾರ ಕಾಂಗ್ರೆಸ್ | Oneindia Kannada

ಕೋಲಾರ, ಏಪ್ರಿಲ್ 17 : ಲೋಕಸಭಾ ಚುನಾವಣೆಗೆ ಒಂದು ದಿನ ಮೊದಲು ಕೋಲಾರ ಕಾಂಗ್ರೆಸ್ 8 ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದೆ. ಇವರಲ್ಲಿ ಮುಳಬಾಗಿಲು ಜಿಲ್ಲಾ ಪಂಚಾಯಿತಿಯ ಮೂವರು ಸದಸ್ಯರು ಸೇರಿದ್ದಾರೆ.

ಕೋಲಾರ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರು 8 ನಾಯಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 18ರ ಗುರುವಾರ ನಡೆಯಲಿದೆ.

ಕೋಲಾರ ಲೋಕಸಭಾ ಕ್ಷೇತ್ರದ ಪರಿಚಯ

ಪಕ್ಷ ವಿರೋಧಿ ಚಟುವಟಿಕೆ ಮತ್ತು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿರುದ್ಧ ಪ್ರಚಾರ ನಡೆಸಿದ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರವಾಗಿ ಅವರು ಪ್ರಚಾರ ನಡೆಸುತ್ತಿದ್ದರು.

ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?

Congress suspends 8 leaders in Kolar

ಮಂಡ್ಯದಲ್ಲಿಯೂ ಕಾಂಗ್ರೆಸ್ ಇದೇ ತಂತ್ರವನ್ನು ಅನುಸರಿಸಿತ್ತು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸುತ್ತಿದ್ದ ಏಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತುಗೊಳಿಸಿತ್ತು.

ಅಮಾನತುಗೊಂಡವರು

* ಪ್ರಕಾಶ್ ರಾಮಚಂದ್ರ (ಜಿ.ಪಂಚಾಯಿತಿ ಸದಸ್ಯ)
* ನಾಗಮಣಿ (ಜಿ.ಪಂಚಾಯಿತಿ ಸದಸ್ಯೆ)
* ಕೃಷ್ಣಪ್ಪ (ಜಿ.ಪಂಚಾಯಿತಿ ಸದಸ್ಯ)
* ವಿವೇಕಾನಂದ (ಎಪಿಎಂಸಿ ಸದಸ್ಯ)
* ಗಂಗಿ ರೆಡ್ಡಿ (ಪಿಎಲ್‌ಡಿ ಬ್ಯಾಂಕ್)
* ಶ್ರೀನಾಥ್ (ಪಿಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ)
* ಶ್ರೀನಿವಾಸ್ (ತಾ.ಪಂಚಾಯಿತಿ ಸದಸ್ಯ)
* ಮಂಜುನಾಥ್ (ಎಪಿಎಂಸಿ ಅಧ್ಯಕ್ಷ)

English summary
Kolar district Congress president K.Chandra Reddy suspended 8 party leaders for campaign against Congress-JD(S) candidate K.H.Muniyappa. Election will be held on April 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X