ಕೋಲಾರ : ಚುನಾವಣೆಗೂ ಮುನ್ನ 8 ಕಾಂಗ್ರೆಸ್ ನಾಯಕರ ಅಮಾನತು
Recommended Video
ಕೋಲಾರ, ಏಪ್ರಿಲ್ 17 : ಲೋಕಸಭಾ ಚುನಾವಣೆಗೆ ಒಂದು ದಿನ ಮೊದಲು ಕೋಲಾರ ಕಾಂಗ್ರೆಸ್ 8 ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದೆ. ಇವರಲ್ಲಿ ಮುಳಬಾಗಿಲು ಜಿಲ್ಲಾ ಪಂಚಾಯಿತಿಯ ಮೂವರು ಸದಸ್ಯರು ಸೇರಿದ್ದಾರೆ.
ಕೋಲಾರ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರು 8 ನಾಯಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 18ರ ಗುರುವಾರ ನಡೆಯಲಿದೆ.
ಪಕ್ಷ ವಿರೋಧಿ ಚಟುವಟಿಕೆ ಮತ್ತು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿರುದ್ಧ ಪ್ರಚಾರ ನಡೆಸಿದ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರವಾಗಿ ಅವರು ಪ್ರಚಾರ ನಡೆಸುತ್ತಿದ್ದರು.
ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?
ಮಂಡ್ಯದಲ್ಲಿಯೂ ಕಾಂಗ್ರೆಸ್ ಇದೇ ತಂತ್ರವನ್ನು ಅನುಸರಿಸಿತ್ತು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸುತ್ತಿದ್ದ ಏಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತುಗೊಳಿಸಿತ್ತು.
ಅಮಾನತುಗೊಂಡವರು
*
ಪ್ರಕಾಶ್
ರಾಮಚಂದ್ರ
(ಜಿ.ಪಂಚಾಯಿತಿ
ಸದಸ್ಯ)
*
ನಾಗಮಣಿ
(ಜಿ.ಪಂಚಾಯಿತಿ
ಸದಸ್ಯೆ)
*
ಕೃಷ್ಣಪ್ಪ
(ಜಿ.ಪಂಚಾಯಿತಿ
ಸದಸ್ಯ)
*
ವಿವೇಕಾನಂದ
(ಎಪಿಎಂಸಿ
ಸದಸ್ಯ)
*
ಗಂಗಿ
ರೆಡ್ಡಿ
(ಪಿಎಲ್ಡಿ
ಬ್ಯಾಂಕ್)
*
ಶ್ರೀನಾಥ್
(ಪಿಲ್ಡಿ
ಬ್ಯಾಂಕ್
ಮಾಜಿ
ಅಧ್ಯಕ್ಷ)
*
ಶ್ರೀನಿವಾಸ್
(ತಾ.ಪಂಚಾಯಿತಿ
ಸದಸ್ಯ)
*
ಮಂಜುನಾಥ್
(ಎಪಿಎಂಸಿ
ಅಧ್ಯಕ್ಷ)