ಗೋಕರ್ಣ ಈಗ ಟೆಕ್ಕಿಗಳ ಹೊಸ ಲಾಗ್ ಇನ್ ತಾಣ!
ಕಾರವಾರ, ಸೆಪ್ಟೆಂಬರ್ 29: ಕೇಂದ್ರ ಸರ್ಕಾರ ಅನ್ ಲಾಕ್ 4.0 ಘೋಷಿಸಿದ ಬಳಿಕ ಹೋಂ ಸ್ಟೇಗಳು, ಹೋಟೆಲ್- ರೆಸ್ಟೋರೆಂಟ್ ಗಳು ತೆರೆದುಕೊಂಡು ಕಾರ್ಯಾಚರಿಸುತ್ತಿವೆ. ಇಷ್ಟು ದಿನ ವರ್ಕ್ ಫ್ರಂ ಹೋಮ್ ನಲ್ಲಿದ್ದ ಸಾಫ್ಟ್ವೇರ್ ಎಂಜಿನಿಯರ್ ಗಳು ಅನ್ ಲಾಕ್ ಘೋಷಣೆಯ ಬಳಿಕ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಹೋಂ ಸ್ಟೇಗಳನ್ನ ತಮ್ಮ ಲಾಗ್ ಇನ್ ತಾಣಗಳನ್ನಾಗಿ ಮಾಡಿಕೊಂಡಿದ್ದಾರೆ.
ಹೌದು. ಇಷ್ಟು ದಿನ ಕೊರೊನಾ ಲಾಕ್ ಡೌನ್ ನಿಂದಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಟೆಕ್ಕಿಗಳಂತೂ ಮನೆಯಿಂದಲೇ ಕೆಲಸ ಶುರು ಮಾಡಿಕೊಂಡಿದ್ದರು. ಬೆಳಗ್ಗೆದ್ದರೆ ಆನ್ಲೈನ್ ಮೀಟಿಂಗ್, ಚಾಟಿಂಗ್, ಅಸೈನ್ಮೆಂಟ್, ಪ್ರಾಜೆಕ್ಟ್ಸ್... ಒಟ್ಟಾರೆಯಾಗಿ, ಮನೆಯಲ್ಲಿದ್ದರೂ ನೆಮ್ಮದಿ ಇಲ್ಲದಂತೆ ಕಂಪ್ಯೂಟರ್, ಲ್ಯಾಪ್ಟಾಪ್ ಗಳನ್ನೇ ರಾತ್ರಿಯವರೆಗೂ ಜೊತೆಗಾರನನ್ನಾಗಿ ಮಾಡಿಕೊಂಡಿದ್ದರು.
ಇದೀಗ ಲಾಕ್ ಡೌನ್ 4.0 ಘೋಷಿಸಿದ ಬಳಿಕ ಸಾಕಷ್ಟು ಚಟುವಟಿಕೆಗಳು ಪುನರಾರಂಭಗೊಂಡಿದೆ. ಹೋಂ ಸ್ಟೇಗಳು ಕೂಡ ಕೋವಿಡ್ ಮಾರ್ಗಸೂಚಿಗಳಂತೆ ತೆರೆದುಕೊಂಡಿವೆ. ಗೋಕರ್ಣದಲ್ಲಿನ ಹೋಂ ಸ್ಟೇಗಳಿಗೆ ಬೇಡಿಕೆಯೂ ಹೆಚ್ಚಾಗಿದೆ.

ಗೋಕರ್ಣದತ್ತ ಮುಖ ಮಾಡುತ್ತಿರುವ ಟೆಕ್ಕಿಗಳು
ಗೋಕರ್ಣದ ಹೋಂ ಸ್ಟೇಗಳು ಉಳಿದೆಡೆಯ ಹೋಂ ಸ್ಟೇಗಳಿಗಿಂತ ಸ್ವಲ್ಪ ಭಿನ್ನ. ಇಲ್ಲಿ ಮನೆಯೂಟದ ರುಚಿ, ಮನೆಯವರಂತೆ ಅತಿಥಿಗಳಿಗೆ ಸತ್ಕಾರ, ಜೊತೆಗೆ ಕಡಲ ತೀರದಲ್ಲಿ ಸ್ವಚ್ಛಂದವಾಗಿ ಓಡಾಡುವ ಅವಕಾಶ. ಧಾರ್ಮಿಕ, ಪುರಾಣ ಪ್ರಸಿದ್ಧ ತಾಣಗಳು, ಒಟ್ಟಾರೆಯಾಗಿ ರಿಫ್ರೆಶ್ ಮೂಡಲ್ಲಿ ಕಾರ್ಯನಿರ್ವಹಿಸಲು ಹೇಳಿ ಮಾಡಿಸಿದಂಥ ಜಾಗ ಗೋಕರ್ಣ ಬಿಟ್ಟರೆ ಬೇರೆಲ್ಲಿಯೂ ಸಿಗುವುದು ಕಡಿಮೆ. ಹೀಗಾಗಿ, ವರ್ಕ್ ಫ್ರಾಮ್ ಹೋಮ್ ನಿಂದಾಗಿ ದಣಿದಿದ್ದ ಟೆಕ್ಕಿಗಳು ಈಗ ಗೋಕರ್ಣದತ್ತ ಮುಖ ಮಾಡಿದ್ದಾರೆ.

ಕಡಲ ತೀರದ ಆಕರ್ಷಣೆ
ಗೋಕರ್ಣದಲ್ಲಿ ಬೆಳಿಗ್ಗೆ ಕಡಲತೀರದಲ್ಲಿ ವಾಯುವಿಹಾರ ಮಾಡಿ ಉಪಾಹಾರ ಮುಗಿಸಿ ಕೆಲಸಕ್ಕೆ ಕೂರುವ ಟೆಕ್ಕಿಗಳು, ಮಧ್ಯಾಹ್ನ ಮನೆ ರುಚಿಯ ಗ್ರಾಮೀಣ ಶೈಲಿಯ ಭೋಜನ ಸವಿಯುತ್ತಿದ್ದಾರೆ. ಸಂಜೆಯ ವೇಳೆಗೆ ಕೆಲಸಗಳನ್ನು ಪೂರ್ಣಗೊಳಿಸಿಕೊಂಡು ಮತ್ತೆ ಕಡಲತೀರದತ್ತ ಹೊರಳುತ್ತಿದ್ದಾರೆ.

ಹೋಂ ಸ್ಟೇನಲ್ಲಿ ಇಂಟರ್ನೆಟ್ ಸೌಲಭ್ಯ
ಸದ್ಯ ಗೋಕರ್ಣದ ಬಹುತೇಕ ಹೋಂ ಸ್ಟೇಗಳು ಬೆಂಗಳೂರು, ಆಂಧ್ರ, ಕೇರಳ, ಮುಂಬೈ ಮೂಲದ ಟೆಕ್ಕಿಗಳಿಂದ ಭರ್ತಿಯಾಗಿವೆ. ಅಲ್ಲಿಂದ ಇಲ್ಲಿಗೆ ಬರಲು ಕಾರಣ ಕೂಡ ಇದೆ. ಗೋಕರ್ಣದಲ್ಲಿ ಸ್ವಚ್ಛಂದ ವಾತಾವರಣದ ಜೊತೆಗೆ ಇಂಟರ್ನೆಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೋಂ ಸ್ಟೇ ಮಾಲೀಕರು ಒದಗಿಸುತ್ತಿದ್ದಾರೆ.

ಗೋಕರ್ಣದಲ್ಲೀಗ ಜನರ ಕಲರವ
ಹೀಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿರುವ ಕಾರಣ ಸಾಕಷ್ಟು ಮಂದಿ ಸದ್ಯ ಗೋಕರ್ಣಕ್ಕೆ ಲಗ್ಗೆ ಇಡುತ್ತಿದ್ದಾರೆ. ಕಳೆದ ಐದಾರು ತಿಂಗಳ ಲಾಕ್ ಡೌನ್ ನಿಂದಾಗಿ ವಿದೇಶಿಗರೂ ಇಲ್ಲದೆ ಭಣಗುಡುತ್ತಿದ್ದ ಗೋಕರ್ಣದಲ್ಲಿ ಈಗ ಟೆಕ್ಕಿಗಳ ಕಲರವ ಆರಂಭವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications