RV Deshpande: ಗೆದ್ದರೂ ಸೋತರೂ ಇತಿಹಾಸ ಸೃಷ್ಟಿಸಲಿರುವ ಆರ್.ವಿ. ದೇಶಪಾಂಡೆಗೆ ಶಿಷ್ಯನೇ ಎದುರಾಳಿ!
ಕಾರವಾರ, ಏಪ್ರಿಲ್ 22: ರಾಜ್ಯದ ಅತ್ಯಂತ ಹಿರಿಯ ಶಾಸಕ ಹಾಗೂ ಅತಿ ಹೆಚ್ಚು ಬಾರಿ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿರುವವರ ಪೈಕಿ ಒಬ್ಬರಾಗಿರುವ ಆರ್.ವಿ ದೇಶಪಾಂಡೆ ಈ ಬಾರಿ ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಗೆ ಮುಂದಾಗಿದ್ದಾರೆ.
ಹಳಿಯಾಳ ಕ್ಷೇತ್ರದಿಂದ ಒಟ್ಟು 9 ಬಾರಿ ಸ್ಪರ್ಧೆ ಮಾಡಿದ್ದ ಆರ್.ವಿ. ದೇಶಪಾಂಡೆ 8 ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಇದೀಗ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ 9 ಬಾರಿ ಸಿದ್ದರಾಮಯ್ಯ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಇದೀಗ ಆರ್.ವಿ. ದೇಶಪಾಂಡೆ 9ನೇ ಬಾರಿ ಗೆಲುವಿಗಾಗಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು ಗೆದ್ದರೇ ರಾಜ್ಯ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ.

ಈವರೆಗೆ ವಿಧಾನಸಭೆ ಆಯ್ಕೆಯಾಗಿರುವವರ ಪೈಕಿ ಆರ್ ವಿ ದೇಶಪಾಂಡೆ ಮತ್ತು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಮಾತ್ರ ಒಂದೇ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಸ್ಪರ್ಧಿಸಿದವರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ 9ನೇ ಬಾರಿ ಸ್ಪರ್ಧೆ ಮಾಡುವಾಗ ಕ್ಷೇತ್ರ ಬದಲಿಸಿದ್ದರು. ಆದರೆ ಈ ಬಾರಿ ಆರ್.ವಿ ದೇಶಪಾಂಡೆ ಗೆದ್ದರೇ ಒಂದೇ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಗೆದ್ದ ಏಕೈಕ ರಾಜಕಾರಣಿ ಎಂಬ ದಾಖಲೆ ಸೃಷ್ಟಿಯಾಗಲಿದೆ. ಒಂದೊಮ್ಮೆ ಸೋತರು ಕೂಡ ಒಂದೇ ಕ್ಷೇತ್ರದಿಂದ 10 ಬಾರಿ ಸ್ಪರ್ಧೆ ಮಾಡಿದ ರಾಜ್ಯದ ಏಕೈಕ ನಾಯಕರಾಗಲಿದ್ದಾರೆ.
ಹಳಿಯಾಳ ಆರ್.ವಿ. ದೇಶಪಾಂಡೆ ಪಾಲಿಗೆ ಭದ್ರಕೋಟೆ. ಆದರೆ ಈ ಭದ್ರಕೋಟೆಯಲ್ಲಿ ಈ ಹಿಂದೆ ತನ್ನ ನೆಚ್ಚಿನ ಶಿಷ್ಯನೇ ಬಂಡಾಯವೆದ್ದಾಗ ಕೋಟೆ ಅಲುಗಾಡಿದ ಉದಾಹರಣೆ ಕೂಡ 2008ರಲ್ಲಿ ನಡೆದಿದೆ. ಇಂತಹದೇ ಸನ್ನಿವೇಶ ಇದೀಗ ಮತ್ತೊರ್ವ ಶಿಷ್ಯನಿಂದ ಈ ಬಾರಿಯೂ ಎದುರಾಗಿದ್ದು ಆರ್.ವಿ ದೇಶಪಾಂಡೆಗೆ ಮತ್ತೆ ಕಠಿಣ ಸವಾಲು ಎದುರಾಗಿದೆ.
ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ ದೇಶಪಾಂಡೆ ಸೋಲಿಲ್ಲದ ಸರದಾರನಾಗಿ ಗೆಲುವು ಸಾಧಿಸುತ್ತಲೇ ಬರುತ್ತಿರುವಾಗ 2008ರಲ್ಲಿ ಅವರ ಶಿಷ್ಯ ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ ತಮಗೆ ಎರಡನೇ ಬಾರಿ ಎಂಎಲ್ಸಿ ಟಿಕೆಟ್ ನೀಡದಕ್ಕೆ ಬಂಡಾಯ ಸಾರಿದ್ದರು. ಪರಿಣಾಮ ಜೆಡಿಎಸ್ ಅಭ್ಯರ್ಥಿ ಸುನೀಲ್ ಹೆಗಡೆ(ಈಗ ಬಿಜೆಪಿಯಲ್ಲಿದ್ದಾರೆ) ವಿರುದ್ಧ 5,425 ಮತಗಳ ಅಂತರದಿಂದ ದೇಶಪಾಂಡೆ ಸೋತಿದ್ದರು.
ಇದೀಗ ಅವರ ಮತ್ತೋರ್ವ ಶಿಷ್ಯ ಎಸ್.ಎಲ್ ಘೋಟ್ನೆಕರ್ ಕಾಂಗ್ರೆಸ್ ಟಿಕೆಟ್ ಬಯಸಿ ಸಿಗದೆ ಇದ್ದಾಗ ಈ ಬಾರಿ ಜೆಡಿಎಸ್ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೇ ತ್ರಿಕೋನ ಸ್ಪರ್ಧೆ ಎದುರಾಗಿದೆ. ಕೊನೆಯ ಚುನಾವಣೆ ಎದುರಿಸುತ್ತಿರುವ ಆರ್.ವಿ ದೇಶಪಾಂಡೆಗೆ ಕಠಿಣ ಸವಾಲು ಎದುರಾಗಿದೆ.
ಇನ್ನು ಕುತೂಹಲಕಾರಿ ವಿಚಾರ ಎಂದರೆ ಈ ಪ್ರತಿಸ್ಪರ್ಧಿಗಳಿಬ್ಬರೂ ದೇಶಪಾಂಡೆ ಅವರ ಒಂದು ಕಾಲದ ಶಿಷ್ಯರು. ಸುನೀಲ್ ಹೆಗಡೆ ಬಹಳ ಹಿಂದೆಯೇ ಕಾಂಗ್ರೆಸ್ ತೊರೆದಿದ್ದಾರೆ. ಆದರೆ ಘೋಟ್ನೇಕರ್ ಅವರು ದೇಶಪಾಂಡೆ ಅವರ ಜೊತೆಗಿದ್ದು ಎರಡು ಬಾರಿ ಎಂಎಲ್ಸಿಯೂ ಆಗಿರುವ ದೀರ್ಘಕಾಲದ ಮಿತ್ರರಾಗಿದ್ದರು. ಆದರೆ ಇದೀಗ ಶಿಷ್ಯರಿಂದಲೇ ದೇಶಪಾಂಡೆ ಸವಾಲು ಎದುರಿಸಬೇಕಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications