ಯಲ್ಲಾಪುರ; 40 ದಿನದ ಮಗುವನ್ನು ಬಾವಿಗೆ ಎಸೆದ ತಂದೆ ತಾಯಿ
ಕಾರವಾರ, ಆಗಸ್ಟ್ 05: ಯಲ್ಲಾಪುರದಲ್ಲಿ 40 ದಿನದ ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಹೆತ್ತ ತಂದೆ- ತಾಯಿಯೇ ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
Recommended Video
Kabini Reservoir ಪ್ರದೇಶದಲ್ಲಿ ಭಾರೀ ಮಳೆ; ಒಳಹರಿವು ಏರಿಕೆ | Oneindia Kannada
ಯಲ್ಲಾಪುರದ ರಾಮನಕೊಪ್ಪದಲ್ಲಿ ಆಗಸ್ಟ್ 2ರಂದು 40 ದಿನದ ಹೆಣ್ಣು ಮಗುವಿನ ಮೃತದೇಹ ಬಾವಿಯಲ್ಲಿ ದೊರೆತಿತ್ತು. ತೊಟ್ಟಿಲಲ್ಲಿ ಮಲಗಿದ್ದ ಮಗು ಮರು ದಿನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿತ್ತು.

ಈ ಸಂಬಂಧ ಮಗುವಿನ ತಂದೆ ಚಂದ್ರಶೇಖರ್ ಭಟ್, ತಾಯಿ ಪ್ರಿಯಾಂಕಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹೆಣ್ಣು ಮಗುವೆಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಗುವನ್ನು ಬಾವಿಗೆ ಎಸೆದು ಮಗು ನಾಪತ್ತೆಯಾಗಿದೆ ಎಂದು ಪಾಲಕರು ಹೇಳಿಕೊಂಡಿದ್ದರು.












Click it and Unblock the Notifications