ಕಾರ್ಕಳ ಮದರಸಾದ 21 ವಿದ್ಯಾರ್ಥಿಗಳನ್ನ ಕರೆದೊಯ್ಯುತ್ತಿದ್ದ ಆರೋಪಿ ಬಂಧನ
ಕಾರವಾರ, ನವೆಂಬರ್ 4: ಉಡುಪಿಯ ಕಾರ್ಕಳದ ಮದರಸಾದಲ್ಲಿ ಓದುತ್ತಿದ್ದ ಬಿಹಾರದ 21 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಶುಕ್ರವಾರ ಬಂಧಿಸಿ, ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿಯ ಕಾರ್ಕಳದ ಜಾಮಿಯಾ ಮದಿನುಲ್ಲಾ ಉಲೂಮ್ ಮದರಸಾದಲ್ಲಿ ಓದುತ್ತಿದ್ದರು. ಆದರೆ, ಅಲ್ಲಿನ ಶಿಕ್ಷಕ ಮೊಹಮ್ಮದ್ ತಹೀಬ್ ಮದರಸಾಕ್ಕೆ ತಿಳಿಸದೇ ಮಕ್ಕಳನ್ನು ರೈಲಿನಲ್ಲಿ ಗುಟ್ಟಾಗಿ ಕರೆದೊಯ್ಯುತ್ತಿದ್ದ. ಈ ಬಗ್ಗೆ ಮದರಸಾದ ವ್ಯವಸ್ಥಾಪಕ ಡಾ.ಮೊಹಮ್ಮದ್ ಮನ್ಸೂರ್ ಶುಕ್ರವಾರ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಳಿಕ ಅವರು ಎಲ್ಲ ಠಾಣೆಗಳಿಗೆ ಈ ಮಾಹಿತಿ ರವಾನಿಸಿದ್ದು, ಕುಮಟಾ ಪಿಎಸ್ಐ ಇ.ಸಿ ಸಂಪತ್ ನೇತೃತ್ವದ ತಂಡ ಕುಮಟಾಕ್ಕೆ ಆಗಮಿಸಿದ್ದ ಮತ್ಸ್ಯಗಂಧ ರೈಲನ್ನು ಪರಿಶೀಲಿಸಿದಾಗ ಅದರಲ್ಲಿ ಎಲ್ಲ ವಿದ್ಯಾರ್ಥಿಗಳ ಸಹಿತ ಆರೋಪಿಯು ಸಿಕ್ಕಿದ್ದಾನೆ.

ಮದರಸಾದ ಆಡಳಿತ ಮಂಡಳಿಯ ಜತೆ ಭಿನ್ನಾಭಿಪ್ರಾಯ ಉಂಟಾಗಿ ಉಡುಪಿ ಮದರಸಾದಲ್ಲಿ ಓದುತ್ತಿದ್ದ ಬಿಹಾರದ ವಿದ್ಯಾರ್ಥಿಗಳನ್ನು ಪಾಟ್ನಾಕ್ಕೆ ಕರೆದೊಯ್ಯಲು ಸ್ಕೆಚ್ ಹಾಕಿದ್ದ.












Click it and Unblock the Notifications