ಸಂಶೋಧನಾ ಹಡಗಿನ ಇಂಜಿನ್ ವೈಫಲ್ಯ: 8 ವಿಜ್ಞಾನಿಗಳು ಸೇರಿ 36 ಸಿಬ್ಬಂದಿ ರಕ್ಷಿಸಿದ ಕೋಸ್ಟ್ಗಾರ್ಡ್
ಕಾರವಾರ, ಜುಲೈ 28: ಸಮುದ್ರದ ನಡುವೆ ಇಂಜಿನ್ ವೈಫಲ್ಯಗೊಂಡು ಆತಂಕದಲ್ಲಿದ್ದ ಕೇಂದ್ರ ಸರ್ಕಾರದ ಸಂಶೋಧನಾ ಹಡಗಿನ ಎಂಟು ವಿಜ್ಞಾನಿಗಳನ್ನೂ ಸೇರಿದಂತೆ 36 ಸಿಬ್ಬಂದಿಯನ್ನು ಕೋಸ್ಟ್ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಚಲಿಸುತ್ತಿದ್ದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಸಂಶೋಧನಾ ಹಡಗು ಆರ್ವಿ ಸಿಂಧುವಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಸಿಬ್ಬಂದಿ ಪರೀಕ್ಷಿಸಿದಾಗ ಹಡಗಿನ ಇಂಜಿನ್ ವಿಫಲಗೊಂಡಿರುವುದು ತಿಳಿದುಬಂದಿದೆ.

ಹಡಗಿನಲ್ಲಿ ಒಟ್ಟು 36 ಮಂದಿ ಇದ್ದು, ಎಲ್ಲರೂ ಆತಂಕಿತರಾಗಿದ್ದರು. ತಕ್ಷಣ ಕೋಸ್ಟ್ಗಾರ್ಡ್ ಅಪಾಯದ ಬಗ್ಗೆ ಸೂಚನೆ ರವಾನಿಸಲಾಯಿತು. ಹಡಗು ಸಂಕಷ್ಟದಲ್ಲಿರುವ ಬಗ್ಗೆ ಕೋಸ್ಟ್ಗಾರ್ಡ್ ಮಾಹಿತಿ ಸ್ವೀಕರಿಸಿ ಪರಿಶೀಲಿಸಿದಾಗ ಕಾರವಾರದಿಂದ 20 ನಾಟಿಕಲ್ ಮೈಲು ದೂರದಲ್ಲಿ ಹಡಗು ಕೆಟ್ಟು ನಿಂತಿರುವುದು ಗಮನಕ್ಕೆ ಬಂದಿದೆ.
ಆರ್ವಿ ಸಿಂಧು ಅತ್ಯಾಧುನಿಕ ಸಂಶೋಧನಾ ನೌಕೆಯಾಗಿದ್ದು, ಬೆಲೆಬಾಳುವ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಡಾಟಾಗಳನ್ನು ಹೊತ್ತೊಯ್ಯುತ್ತಿದ್ದರಿಂದ ಪರಿಸ್ಥಿತಿ ನಿರ್ಣಾಯಕವಾಗಿತ್ತು. ಅಲ್ಲದೇ ಹಡಗು ಸೂಕ್ಷ್ಮ ಕರಾವಳಿ ತೀರವಾದ ಕಾರವಾರಕ್ಕೆ ಸಮೀಪದಲ್ಲಿದ್ದು, ಒಂದುವೇಳೆ ತೈಲ ಸೋರಿಕೆಯಂಥ ಅಘಡವೇನಾದರೂ ಸಂಭವಿಸಿದಲ್ಲಿ ವಿನಾಶಕಾರಿ ಮಾಲಿನ್ಯ ಉಂಟಾಗುವ ಸಾಧ್ಯತೆಯ ಇತ್ತು. ಇದನ್ನರಿತ ಭಾರತೀಯ ಕೋಸ್ಟ್ಗಾರ್ಡ್ ತಕ್ಷಣವೇ ಕಾರ್ಯಪ್ರವೃತ್ತವಾಗಿ, ಹೆಚ್ಚಿನ ಆದ್ಯತೆಯ ರಕ್ಷಣಾ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಿತು. ನುರಿತ ತಂಡದೊಂದಿಗೆ ತಮ್ಮ ಹೆಚ್ಚು ಸುಧಾರಿತ ಹಡಗನ್ನು ಅಪಾಯ ಉಂಟಾಗಿರುವ ಪ್ರದೇಶಕ್ಕೆ ರವಾನಿಸಿತು.

ಪ್ರತಿಕೂಲ ಹವಾಮಾನ ಪರಿಸ್ಥಿತಿ, ಕಡಲತೀರದಿಂದ ಕೂಡ ಅಪಾಯ ಉಂಟಾಗಿರುವ ಪ್ರದೇಶ ಸಾಕಷ್ಟು ದೂರದಲ್ಲಿರುವುದು ಹಾಗೂ ಆರ್ವಿ ಸಿಂಧು ಹಡಗಿನ ಗಾತ್ರ ಕೂಡ ಬೃಹತ್ತಾಗಿರುವುದು ಕೋಸ್ಟ್ಗಾರ್ಡ್ ಸವಾಲಿನ ಕೆಲಸವಾದರೂ ತಂಡವು ಹಡಗನ್ನು ಸುರಕ್ಷಿತವಾಗಿ ಗೋವಾಕ್ಕೆ ತರಲು ಎಳೆದೊಯ್ಯಲು ತಡೆರಹಿತ ರಕ್ಷಣಾ ಕಾರ್ಯಾಚರಣೆ ನಡೆಸಿತು. ಕೊನೆಗೂ ಸಿಂಧು ಹಡಗಿನಲ್ಲಿದ್ದ ವಿಜ್ಞಾನಿಗಳು, ಸಿಬ್ಬಂದಿ ಸುರಕ್ಷಿತವಾಗಿದ್ದು, ದೇಶದ ಮಹತ್ವದ ಹಡಗನ್ನು ಕೋಸ್ಟ್ಗಾರ್ಡ್ ರಕ್ಷಣೆ ಮಾಡಿ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications