ಸೌಹಾರ್ದತೆಗೆ ಸಾಕ್ಷಿಯಾದ ಕಾರವಾರ: ಮುಸ್ಲಿಂ ಯುವಕರಿಂದ ಕೃಷ್ಣನ ಪೂಜೆ
ಕಾರವಾರ ನವೆಂಬರ್10 : ದೇಶದಾದ್ಯಂತ ಹಿಂದೂ ಮುಸ್ಲಿಂ ನಡುವೆ ವಿಷ ಬಿಜ ಬಿತ್ತಿ ಸೌಹಾರ್ದ ಬದುಕಿಗೆ ಧಕ್ಕೆ ತರುವ ಕೃತ್ಯಗಳು ನಡೆಯುತ್ತಲೇ ಇದೆ. ಅದರಲ್ಲಿಯೂ ರಾಜ್ಯದಲ್ಲಿ ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾರವಾರದಲ್ಲಿ ನಡೆಯುತ್ತಿರುವ ಕೃಷ್ಣನ ಪೂಜೆ ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಕಾರವಾರ ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಇದೇ ಪ್ರಥಮ ಬಾರಿಗೆ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದಸರಾ ಮುಗಿದ ನಂತರ ಸಾಮಾನ್ಯವಾಗಿ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಹಲವೆಡೆ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಬಾರಿ ಕೆ.ಎಚ್.ಬಿ ಕಾಲೋನಿಯಲ್ಲಿ ಮಾಡಿರುವ ಕೃಷ್ಣನ ಪ್ರತಿಷ್ಠಾಪನೆ ಮಾತ್ರ ಕೋಮು ಸಾಮರಸ್ಯವನ್ನು ಮೂಡಿಸಿದೆ.
ಕೆ.ಎಚ್.ಬಿ ಕಾಲೋನಿಯ ಕೆಲ ಹಿಂದೂ ಯುವಕರ ಜೊತೆ, ಮಹಮ್ಮದ್ ಷಾ, ಶಾರುಕ್, ಸಿದ್ದಿಕ್ ಷಾ ಎನ್ನುವವರು ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಕಾರ್ಯಕ್ಕೆ ಕಮಿಟಿಯೊಂದನ್ನು ರಚಿಸಲಾಗಿದ್ದು, ಕಮಿಟಿ ಅಧ್ಯಕ್ಷ ಸಹ ಮುಸ್ಲಿಂ ಯುವಕನೇ ಆಗಿದ್ದಾರೆ.

ಸಾಮರಸ್ಯ ಮೆರೆದ ಕೆ.ಎಚ್.ಬಿ ಕಾಲೋನಿ ಯುವಕರು
ದಸರಾ ಮುಗಿದ ನಂತರ ಸಾಮಾನ್ಯವಾಗಿ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಹಲವೆಡೆ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆ.ಎಚ್.ಬಿ ಕಾಲೋನಿಯಲ್ಲಿಯೂ ಮೊದಲ ಬಾರಿಗೆ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ಮುಸ್ಲಿಂ ಹಾಗೂ ಹಿಂದೂ ಯುವಕರು ದೇವರನ್ನು ಕಾಯುವುದರ ಜೊತೆಗೆ ಪೂಜೆಯನ್ನು ಸಹ ತಾವೇ ಮಾಡುತ್ತಾರೆ. ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪಿಸಿರುವುದರಿಂದ ಕೆಲ ಸಾರ್ವಜನಿಕರು ಬಂದು ಒಂದೊಂದು ದಿನ ಪೂಜೆ ಮಾಡುತ್ತಾರೆ. ಉಳಿದ ದಿನ ಕೃಷ್ಣನಿಗೆ ಮುಸ್ಲಿಂ ಯುವಕರ ಪೂಜೆಯೇ ನಡೆಯುತ್ತದೆ.

ಧರ್ಮ ಜಾತಿ ಮೀರಿ ಕಾರವಾರದಲ್ಲಿ ಕೃಷ್ಣನ ಜಪ
ಕಳೆದ ಅಕ್ಟೋಬರ್ 26ಕ್ಕೆ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಒಂದು ತಿಂಗಳ ಕಾಲ ಮೂರ್ತಿಯನ್ನು ಇಟ್ಟು ಪೂಜೆ ಮಾಡಲಾಗುತ್ತಿದೆ. ಇನ್ನು ಪ್ರತಿನಿತ್ಯ ಪೂಜೆ ಯಾರು ಮಾಡಲಾಗುವುದು ಎನ್ನುವ ಬೋರ್ಡ್ ಸಹ ಸ್ಥಳದಲ್ಲಿ ಹಾಕಲಾಗಿದೆ. ಹಿಂದೂ, ಮುಸ್ಲಿಂ ಧರ್ಮ ಎಂದು ಕಿತ್ತಾಟ ಮಾಡುವ ಕಾಲದಲ್ಲಿ, ಧರ್ಮ, ಜಾತಿ ಎನ್ನುವ ಯಾವುದೇ ಬೇದ ಭಾವ ಇಲ್ಲದೆ ಎರಡು ಧರ್ಮದ ಯುವಕರು ಒಂದಾಗಿ ದೇವರ ಪೂಜೆ ಮಾಡುತ್ತಿದ್ದಾರೆ. ಕೃಷ್ಣ ಮೂರ್ತಿ ಪ್ರತಿಷ್ಠಾಪನೆ ಕಮಿಟಿಯಲ್ಲಿರುವ ಬಹುತೇಕ ಎಲ್ಲಾ ಯುವಕರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಾರೆ. ಹಿಂದಿನಿಂದಲೂ ಎರಡು ಧರ್ಮದ ಸ್ನೇಹಿತರು ಗುಂಪೊಂದನ್ನು ಮಾಡಿಕೊಂಡಿದ್ದರು.

ಕೃಷ್ಣನ ಪೂಜೆ ಮಾಡುವುದು ನಮಗೆ ಖುಷಿ
ಸಣ್ಣ ಸಣ್ಣ ವಿಚಾರಗಳೂ ಕೋಮು ಭಾವನೆಗೆ ದಕ್ಕೆ ಬರುವಂತಹ ಕಾಲದಲ್ಲಿ ಮುಸ್ಲಿಂ ಯುವಕರು ಹಿಂದೂ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಶೇಷ ಎಂದರೆ ಈ ಯುವಕರು ತಾವು ಮುಸ್ಲಿಂ ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಹಾಗೇ ಅವರ ಹಿಂದೂ ಸ್ನೇಹಿತರು ಸಹ. ನಾವೆಲ್ಲ ಒಂದೇ, ನಮ್ಮಲ್ಲಿ ಇರುವುದು ಒಂದೇ ರಕ್ತ ಎನ್ನುವುದು ಈ ಯುವಕರ ಗುಂಪಿನವರ ಅಭಿಪ್ರಾಯ. ಇವರ ಈ ಸ್ನೇಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಮ್ಮದ್ ಷಾ, "ನಮ್ಮಲ್ಲಿ ಹಿಂದೂ-ಮುಸ್ಲಿಂ ಎನ್ನುವ ಭೇದ-ಭಾವವಿಲ್ಲ. ನಾನು ಚಿಕ್ಕ ವಯಸ್ಸಿನಿಂದಲೂ ಹಿಂದೂ ಸ್ನೇಹಿತರ ಜೊತೆಯಲ್ಲಿಯೇ ಬೆಳೆದಿದ್ದೇನೆ. ನಮ್ಮ ರಂಜಾನ್ ಹಬ್ಬಕ್ಕೆ ಹಿಂದೂ ಸ್ನೇಹಿತರು ನಮ್ಮ ಮನೆಗೆ ಬಂದು ಆಚರಿಸುತ್ತಾರೆ. ಹಾಗೆಯೇ ಹಿಂದೂಗಳ ಹಬ್ಬಕ್ಕೆ ನಾವೆಲ್ಲಾ ಹೋಗಿ ಆಚರಿಸುತ್ತೇವೆ. ಒಮ್ಮೆಯೂ ನಾವು ಬೇರೆ ಧರ್ಮ ಎಂದು ನೋಡಿಲ್ಲ ಇದೀಗ ಕೃಷ್ಣನ ಮೂರ್ತಿ ಇಟ್ಟು ಪೂಜೆ ಮಾಡುವುದು ನಮಗೆ ಖುಷಿ ಕೊಡುತ್ತಿದೆ," ಎಂದು ಸಂತಸ ಹಂಚಿಕೊಂಡರು.

ಹಿಂದೂ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ
ಈ ಕಮಿಟಿಯಲ್ಲಿರುವ ಮತ್ತೋರ್ವ ಮುಸ್ಲಿಂ ಯುವಕ ಶಾರುಕ್ ಮಾತನಾಡಿ, "ಹಿಂದೂ, ಮುಸ್ಲಿಂ ಎಲ್ಲರೂ ಒಂದೇ. ಮೊದಲಿನಿಂದಲೂ ನಾನು ಹಿಂದೂ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇನೆ. ಈಗಲೂ ಕೃಷ್ಣನ ಮೂರ್ತಿ ಇಟ್ಟು ಪೂಜೆ ಮಾಡುತ್ತಿದ್ದೇನೆ. ಅಲ್ಲದೇ ಗಣಪತಿ ಹಬ್ಬವನ್ನೂ ಸಹ ಸಂಭ್ರಮದಿಂದ ಮಾಡುತ್ತೇವೆ. ಧರ್ಮ-ಜಾತಿ ಎನ್ನುವ ಭೇದ ಭಾವ ನಮಗೆ ಇಲ್ಲ. ನನ್ನ ಸ್ನೇಹಿತರು ನಮ್ಮ ಹಬ್ಬದ ಸಂದರ್ಭದಲ್ಲಿ ನಮ್ಮ ಮನೆಗೆ ಬರುತ್ತಾರೆ. ನಾವೆಲ್ಲರೂ ಜೊತೆಯಲ್ಲಿ ಖುಷಿಯಾಗಿದ್ದೇವೆ" ಎಂದು ಹೇಳಿದ್ದಾರೆ. ಕಾರವಾರದ ಕೆ.ಎಚ್.ಬಿ ಕಾಲೋನಿ ಯುವಕರ ಈ ಸ್ನೇಹ ಸೌಹಾರ್ದತೆ ಎಲ್ಲರ ಮೆಚ್ಚುಗೆ ಪಡೆದಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications