ಹುಷಾರ್..! ಕಾರವಾರದಲ್ಲಿ ಚಲಾವಣೆಯಾಗುತ್ತಿವೆ ಕಲರ್ ಕಲರ್ ನೋಟು
ಕಾರವಾರ, ಜನವರಿ 21: ದೇಶದಲ್ಲಿ ಅಧಿಕವಾಗಿ ಹರಿದಾಡುತ್ತಿದ್ದ ಖೋಟಾ ನೋಟುಗಳನ್ನು ತಡೆಯಲು ಕೇಂದ್ರ ಸರ್ಕಾರ ನೋಟು ಬದಲಾವಣೆಯಂತಹ ಪ್ರಮುಖ ನಿರ್ಧಾರವನ್ನು ಕೈಗೆತ್ತಿಕೊಂಡಿತ್ತು. ಆದರೂ ಖೋಟಾ ನೋಟುಗಳ ಚಲಾವಣೆ ಅಲ್ಲಲ್ಲಿ ಕಂಡುಬರುತ್ತಿದೆ.
ಹತ್ತು ರುಪಾಯಿಯಿಂದ ಹಿಡಿದು ಎರಡು ಸಾವಿರ ರುಪಾಯಿಯವರೆಗೆ ಹೊಸ ನೋಟುಗಳನ್ನು ಮುದ್ರಿಸಿ, ಚಲಾವಣೆಗೆ ತರಲಾಗಿದೆ. ಆದರೆ, ಕೆಲವು ಕಿಡಿಗೇಡಿಗಳು ನೂರು ರುಪಾಯಿ ಹೊಸ ನೋಟುಗಳನ್ನೇ ನಕಲಿ ಮಾಡಿ ಕಾರವಾರ ನಗರದಲ್ಲಿ ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ನೂರು ರೂಪಾಯಿ ಹೊಸ ನೋಟು ಪಡೆಯುವ ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನದ ಹಿಂದೆ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರು, ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಊಟ ಮಾಡಿ ಐದು ನೂರು ರುಪಾಯಿ ನೋಟನ್ನು ಕೊಟ್ಟಿದ್ದರು.

ಚಿಲ್ಲರೆಯಾಗಿ ಹೋಟೆಲ್ ನಲ್ಲಿ ಕೊಟ್ಟ ನೋಟಿನಲ್ಲಿ ನೂರು ರೂಪಾಯಿ ಹೊಸ ನೋಟಿದ್ದು, ಅದು ಖೋಟಾ ನೋಟಾಗಿತ್ತು. ಕ್ಯಾಂಟೀನ್ ಒಂದರಲ್ಲಿ ತಿಂಡಿ ತಿಂದು ನೂರು ರೂಪಾಯಿಯನ್ನ ಕೊಟ್ಟಾಗ ಅದು ಖೋಟಾ ನೋಟು ಎಂದು ಕ್ಯಾಂಟೀನ್ ಮಾಲಿಕ ತಿಳಿಸಿದ್ದಾನೆ.
ಕಾರವಾರ ನಗರದಲ್ಲಿ ಇದೇ ರೀತಿ ಹಲವರಿಗೆ ಅನುಭವವಾಗಿದ್ದು, ನೂರು ರೂಪಾಯಿಯಾದ ಕಾರಣ ಯಾರೂ ಹೆಚ್ಚಾಗಿ ತಲೆ ಕೆಡೆಸಿಕೊಳ್ಳದೇ ದೂರು ಕೊಡಲು ಮುಂದಾಗುತ್ತಿಲ್ಲ. ನೂರು ರೂಪಾಯಿ ಹೊಸ ನೋಟು ನೇರಳೆ ಬಣ್ಣದ್ದಾಗಿದ್ದು ಕಿಡಿಗೇಡಿಗಳು ನೂರು ರೂಪಾಯಿ ಅಸಲಿ ನೋಟಿನ ಮಾದರಿಯಲ್ಲಿಯೇ ಕಲರ್ ಝೇರಾಕ್ಸ್ ಮಾಡಿಸಿ ಹರಿಬಿಟ್ಟಿದ್ದಾರೆ.
ನೋಟಿನ ಮೇಲಿರುವ ಸೆಕ್ಯೂರಿಟಿ ಥ್ರೆಡ್ ಮಾದರಿಯನ್ನ ಸಹ ನಕಲು ಮಾಡಿದ್ದು ಒಮ್ಮೆಲೆ ನೋಟನ್ನು ತೆಗೆದುಕೊಂಡಾಗ ಯಾರಿಗೂ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯದ ರೀತಿಯಲ್ಲಿ ಖೋಟಾ ನೋಟನ್ನು ಮಾಡಿದ್ದಾರೆ.

ನೂರು ರೂಪಾಯಿಯ ಐದಾರು ನೋಟಿನ ಮಧ್ಯೆ ನಕಲಿ ನೋಟನ್ನ ಇಟ್ಟುಕೊಟ್ಟರೆ ಯಾರಿಗೂ ತಿಳಿಯದ ಹಿನ್ನಲೆಯಲ್ಲಿ ನಗರದಲ್ಲಿ ಖೋಟಾ ನೋಟನ್ನು ಚಲಾವಣೆ ಮಾಡಿದ್ದು ಹೊಸ ನೋಟಿನ ಕಲ್ಪನೆ ಇನ್ನೂ ಸಹ ಇರದೆ ಇರುವವರು ಕೋಟಾ ನೋಟನ್ನ ತೆಗೆದುಕೊಂಡು ವಂಚನೆಗೆ ಒಳಗಾಗುತ್ತಿದ್ದಾರೆ.
ನೂರು ರೂಪಾಯಿ ಮಾದರಿಯಲ್ಲಿಯೇ ಎರಡು ನೂರು, ಐದು ನೂರು ಹಾಗೂ ಎರಡು ಸಾವಿರ ರೂಪಾಯಿ ನೋಟುಗಳನ್ನ ಸಹ ಕಲರ್ ಝೇರಾಕ್ಸ್ ಮಾಡಿ ನಕಲಿ ನೋಟುಗಳನ್ನ ಮಾಡಿ ಹರಿಬಿಟ್ಟಿದ್ದಾರೆನ್ನಲಾಗಿದ್ದು, ಜನರು ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದ ನೋಟಗಳನ್ನು ಗಮನಿಸಿ ಪಡೆಯಬೇಕಾಗಿದೆ.
''ಹೊಸ ನೋಟನ್ನು ಕಲರ್ ಝೆರಾಕ್ಸ್ ಮಾಡಿಸಿ ಖೋಟಾ ನೋಟು ಚಲಾವಣೆ ಮಾಡುತ್ತಿರುವ ಪ್ರಕರಣ ಗಮನಕ್ಕೆ ಬಂದಿದೆ. ಯಾರ ಬಳಿಯೇ ಇಂತಹ ಖೋಟಾ ನೋಟು ಬಂದರೆ ಠಾಣೆಯಲ್ಲಿ ಬಂದು ದೂರನ್ನು ಕೊಡಬಹುದು. ನೋಟುಗಳನ್ನು ಕಲರ್ ಝೆರಾಕ್ಸ್ ಮಾಡಿ ಕೊಡುವುದು ತಿಳಿದು ಬಂದರೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುವುದು'' ಎಂದು ಕಾರವಾರ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹೇಳಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications